ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು: ಡಾ.ಬಸವರಾಜ ಹಿರೇಮಠ

ಸುದ್ದಿ ಸಂಗ್ರಹ ಶಹಾಬಾದ್ಮೂಡನಂಬಿಕೆ ತೊಲಗಿಸಬೇಕಾದರೆ ವೈಜ್ಞಾನಿಕ ಮನೋಭಾವನೆ ಅಗತ್ಯ, ವಿದ್ಯಾರ್ಥಿಗಳು ಜೀವನದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವರಾಜ ಹಿರೇಮಠ ಹೇಳಿದರು. ನಗರದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಡಾ ಸಿ.ವಿ ರಾಮನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ವೈಜ್ಞಾನಿಕವಾಗಿ ಭಾರತ ದೇಶ ಬೆಳೆದು ನಿಂತಿರುವುದು ತುಂಬಾ ಹೆಮ್ಮೆಪಡುವ ವಿಷಯ ಯುದ್ಧಕ್ಕೆ ಸಜ್ಜಾಗುವ ಪ್ರಕ್ರಿಯೆ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಭಾರತ ದೇಶ […]

Continue Reading

ಮಾ.3ರಂದು ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ: ಶಿವರಾಜ ಅಂಡಗಿ

ಸುದ್ದಿ ಸಂಗ್ರಹ ಕಲಬುರಗಿ ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರುಗಡೆಯ ವಿದ್ಯಾನಗರದಲ್ಲಿ ವೆಲ್‌ಫೆರ್ ಸೊಸೈಟಿ ವತಿಯಿಂದ ಮಾರ್ಚ್ 3 ರಂದು ಸಂಜೆ 7.30ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನದ ಆವರಣದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಕಾಮದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ. ಇಂದಿನ ಯುವ ಪೀಳಿಗೆಗೆ ಹೋಳಿ ಹಬ್ಬ ಎಂದರೆ ಮೈಮೇಲಿನ ಬಟ್ಟೆ ಹರಿದುಕೊಳ್ಳುವುದು, ಘಟಾರ ನೀರು ಎರಚುವುದು, ವಾಹನಗಳ ಸೈಲೆನ್ಸರ್ ತೆಗೆದು ಜೋರಾದ ಶಬ್ದದೊಂದಿಗೆ […]

Continue Reading

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಅಭ್ಯರ್ಥಿ ಅಶೋಕ ಹರನಾಳ ನಾಮಪತ್ರ ಸಲ್ಲಿಕೆ

ಸುದ್ದಿ ಸಂಗ್ರಹ ವಾಡಿಮಾರ್ಚ್ 08 ರಂದು ನಡೆಯುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆಯ ಪರಿಶಿಷ್ಟ ಜಾತಿ ವರ್ಗದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಅಶೋಕ ಹರನಾಳ ಮುಖ್ಯ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದತಾಲೂಕು ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ವಾಡಿ ಅಧ್ಯಕ್ಷ ವೀರಣ್ಣ ಯಾರಿ, ಜಿಲ್ಲಾ ರೈತ ಮೂರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಶ ರಾಠೋಡ, ಸೂಚಕ ರಾಜಶೇಖರ ಮುಡಬೂಳ ಇದ್ದರು.

Continue Reading

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ‌‌

ಸುದ್ದಿ ಸಂಗ್ರಹ ಚಿತ್ತಾಪುರಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಸುಳ್ಳು ಪೋಕ್ಸೊ ಪ್ರಕರಣ ದಾಖಲಿಸಿದ್ದು, ಸರ್ಕಾರ ಅದನ್ನು ಹಿಂಪಡೆದು ರದ್ದುಪಡಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಆಗ್ರಹಿಸಿದ್ದಾರೆ. ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ನೇತೃತ್ವದಲ್ಲಿ ಶುಕ್ರವಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್‌ಗೆ ಸಲ್ಲಿಸಿ, ನಂತರ ಮಾತನಾಡಿದ ಅವರು, ಬಾಲಕಿಯ ಹೇಳಿಕೆ, ಪಾಲಕರ ದೂರು ಇಲ್ಲದೆ ಸ್ಥಳೀಯ ನ್ಯಾಯಾಧೀಶರ ಮುಂದೆ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳದೆ ಪ್ರಕರಣ […]

Continue Reading

ಇಂದಿರಾ ಕ್ಯಾಂಟಿನ್‌ ಸ್ಥಳ ಅತಿಕ್ರಮಣ: ಡಬ್ಬಿ ತೆರವಿಗೆ ಬಿಜೆಪಿ ಆಗ್ರಹ‌

ಸುದ್ದಿ ಸಂಗ್ರಹ ಶಹಾಬಾದಇಂದಿರಾ ಕ್ಯಾಂಟಿನ್‌ ಕಾಂಪೌಂಡ್ ಆವರಣದಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಡಬ್ಬಿ ತಕ್ಷಣ ತೆರೆವು ಗೊಳಿಸಬೇಕು ಎಂದು ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್ ಆಗ್ರಹಿಸಿದ್ದಾರೆ.‌ ನಗರದ ಇಂದಿರಾ ಕ್ಯಾಂಟಿನಗಾಗಿ ಸರಕಾರಿ ಆಸ್ಪತ್ರೆಯ ಆವರಣದ ಗೋಡೆ ತೆರೆವುಗೊಳಿಸುವಾಗ ಒಳಗಡೆ ಯಾವುದೆ ತರಹದ ಡಬ್ಬದ ಅಂಗಡಿ ಇರಲಿಲ್ಲ, ಕಾಮಗಾರಿ ಪ್ರಾರಂಭಿಸಿದ ತಕ್ಷಣ ನಗರದ ಪ್ರಭಾವಿ ನಾಯಕರು ಮತ್ತು ನಗರ ಸಭೆ ಅಧಿಕಾರಿಗಳ ಬೆಂಬಲದಿಂದ ಪ್ರಭಾವಿ ವ್ಯಕ್ತಿಯೊಬ್ಬ ಕ್ಯಾಂಟಿನ್‌ ಉಧ್ಘಾಟನೆ ಮುಂಚೆ ಅಕ್ರಮವಾಗಿ ಡಬ್ಬಿ ತಂದು ಇರಿಸಿದ್ದು ಕಂಡುಬಂದಿದೆ ಎಂದರು. […]

Continue Reading

ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ‌‌

ಸುದ್ದಿ ಸಂಗ್ರಹ ಕಲಬುರಗಿನಂದಿಕೂರ ಬಳಿಯಿರುವ ಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಭೂಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡಿದ್ದಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಾರನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ. ಬಳಿಕ ಪರಿಹಾರ ವಿತರಣೆ ಭರವಸೆ ಬಳಿಕ ಕಾರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕೋರ್ಟ್‌ನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶಕೆ.ಎಸ್ ರೊಟ್ಟೇರ್ ಅವರು ಭೂಸ್ವಾಧೀನ ಪರಿಹಾರ ವಿಳಂಬ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಾರು (ಕೆಎ 32 ಜಿ 9990) ಜಪ್ತಿ ಮಾಡುವಂತೆ ಆದೇಶಿಸಿದ್ದರು. […]

Continue Reading

9 ರೂ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್‌: 10 ರೂ. ಲೋನ್ ಕಟ್ಟಿದ್ದಿವಿ, 66 ಪೈಸೆ ವಾಪಸ್ ಕೊಡಿ ಅಂತ ಗ್ರಾಹಕ ಪಟ್ಟು

ಸುದ್ದಿ ಸಂಗ್ರಹ ಹಾಸನ9 ರೂ 34 ಪೈಸೆ ಸಾಲ ಕಟ್ಟುವಂತೆ ಕೆನರಾ ಬ್ಯಾಂಕ್‌ನಿಂದ ಕರೆ ಮಾಡಿದ ಹಿನ್ನೆಲೆಯಲ್ಲಿ 10 ರೂ ಲೋನ್ ಕಟ್ಟಿದ್ದಿವಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು ಹಿಡಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಎಂಬವರು ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌‌ನಿಂದ 50 ಸಾವಿರ ಲೋನ್ ಪಡೆದು ಸಂಪೂರ್ಣ ಹಣ ಬಡ್ಡಿ ಸಮೇತ ಕಟ್ಟಿದ್ದರು. ನಿನ್ನೆ ಏಕಾಏಕಿ ಕರೆ ಮಾಡಿ 9 ರೂ 34 ಪೈಸೆ ಸಾಲ […]

Continue Reading

ಕನ್ನಡ ಶಾಲೆ ಉಳಿಸಿ-ಬೆಳೆಸಿ ಅಭಿಯಾನದ ತಾಲೂಕಾಧ್ಯಕ್ಷರಾಗಿ ಗಿರೀಶರೆಡ್ಡಿ ನೇಮಕ‌

ಸುದ್ದಿ ಸಂಗ್ರಹ ಕಾಳಗಿನಾಡು ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಕನ್ನಡ ಶಾಲೆ ಉಳಿಸಿ– ಬೆಳೆಸಿ ಅಭಿಯಾನಕ್ಕೆ ಹೊಸ ಚೈತನ್ಯ ದೊರೆತಿದ್ದು, ಕಾಳಗಿ ತಾಲೂಕಾಧ್ಯಕ್ಷರಾಗಿ ಗಿರೀಶರೆಡ್ಡಿ ರಾಜಾಪುರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಣ್ಣಾರಾಯ ವಿ ಇವಣಿ ತಿಳಿಸಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವುದು, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸುವ ಉದ್ದೇಶದೊಂದಿಗೆ ಈ ಅಭಿಯಾನ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ರಾಜ್ಯ ನಾಯಕರು, ಹಿರಿಯರು […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಸಾವರ್ಕರ್ ಸ್ಮರಣೆ

ಸುದ್ದಿ ಸಂಗ್ರಹ ವಾಡಿಪಟ್ಟಣದ ಬಿಜೆಪಿ ಕಛೇರಿಯಲ್ಲಿ ವೀರ ಸಾವರ್ಕರ್’ರ 60ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.‌ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಿನಾಯಕ ದಾಮೋದರ್ ಸಾವರ್ಕರ್ ಹೆಸರು ಕೇಳಿದರೆ ಈಗಲೂ ನಮ್ಮ ಮೈ ಮನ ರೋಮಾಂಚನಗೊಳ್ಳುತ್ತದೆ, ಅವರು ನಮ್ಮ ಸ್ವಾಭಿಮಾನದ ಸರ್ವಸ್ವ ಎಂದರು.‌ ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್‌ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ತೆಗೆದುಕೊಂಡ ನಿಲುವುಗಳು ಈಗಲೂ ಈ ಮಣ್ಣಿನ ಯುವಕರಿಗೆ ಸ್ಪೂರ್ತಿದಾಯಕ. ತಾಯಿ-ತಂದೆಯನ್ನು […]

Continue Reading

ಬೆಂಕಿ ಅವಘಡ: ‍50 ಲಕ್ಷ ಮೌಲ್ಯದ ವಸ್ತುಗಳಿದ್ದ ಎಲೆಕ್ಟ್ರಿಕಲ್ ಅಂಗಡಿ ಭಸ್ಮ

ಸುದ್ದಿ ಸಂಗ್ರಹ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ನಗರದ ರಾಮ ಮಂದಿರ ಸರ್ಕಲ್‌ ಸಮೀಪದ ಎಲೆಕ್ಟ್ರಿಕಲ್ ಅಂಗಡಿಗೆಯೊಂದರಲ್ಲಿ ಬುಧವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಅಶೋಕ ಪ್ರಜಾಪತಿ ಅವರಿಗೆ ಸೇರಿದ ಅಂಗಡಿಯಲ್ಲಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಸಂಭವಿಸಿದ ದುರಂತದಲ್ಲಿ 20 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಸಾಮಾನುಗಳು ಸೇರಿದಂತೆ 50 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕೀಟ್ […]

Continue Reading