85 ಶತಕೋಟಿ ಡಾಲರ್​ ಮೌಲ್ಯದ 1 ಸಾವಿರ ಟನ್​ ಚಿನ್ನದ ನಿಧಿ ಪತ್ತೆ, ಭೂಮಿಯೊಳಗೆ ಸಿಕ್ಕ ಅನ್ಯಗ್ರಹದ ಲೋಹಗಳು

ಕರ್ನಾಟಕದ ಲಕ್ಕುಂಡಿಯಲ್ಲಿ ಸದ್ಯ ನಿಧಿ ಭಾರಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದು ಹೊಸ ಹೊಸ ರೂಪ ಪಡೆಯುತ್ತಲೆ ಇದೆ. ದಿನದಿಂದ ದಿನಕ್ಕೆ ಇದು ಕುತೂಹಲ ಕೆರಳಿಸುತ್ತಿದ್ದು, ಹೆಸರೆ ಗೊತ್ತಿಲ್ಲದ ಗ್ರಾಮವೊಂದು, ಇದೀಗ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಇಲ್ಲಿಯ ಭೂಮಿಯ ಬೆಲೆಯೂ ದಿಢೀರ್ ಹೆಚ್ಚಾಗಿದ್ದು, ಇಲ್ಲಿ ಸಿಕ್ಕಿರುವ ಶಾಸನಗಳು, ನಿಧಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ವಿಶ್ವವನ್ನೆ ಬೆರಗುಗೊಳಿಸಿದ ಲೋಹಗಳುಇದು ಕರ್ನಾಟಕದ ಮಾತಾದರೆ, ಇದರ ಬೆನ್ನಲ್ಲೆ 85 ಶತಕೋಟಿ ಡಾಲರ್​ ಮೌಲ್ಯದ 1 ಸಾವಿರ ಟನ್​ […]

Continue Reading

ನೆಲನೆಲ್ಲಿ ಗಿಡ: ಮೊಡವೆಯಿಂದ ಮಲಬದ್ಧತೆವರೆಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ನಮ್ಮ ಸುತ್ತಮುತ್ತ ಹಲವು ಬಗೆಯ ಔಷಧಿಯ ಸಸ್ಯಗಳಿವೆ. ಅವುಗಳಲ್ಲಿ ಕೆಲವುದರ ಬಗ್ಗೆ ನಮಗೆ ತಿಳಿದಿದೆ. ಆದರೆ ತಿಳಿದಿಲ್ಲದ ನೈಸರ್ಗಿಕ ಔಷಧಿ ಗುಣಗಳು ಹೊಂದಿರುವ ಹಲವು ಸಸ್ಯಗಳಿವೆ. ಇವು ವಿವಿಧ ರೀತಿಯ ರೋಗಗಳು ತಡೆಗಟ್ಟಲು ಸಹಾಯ ಮಾಡುತ್ತದೆ. ಇಂತಹ ಸಸ್ಯಗಳಲ್ಲಿ ನೆಲದ ನೆಲ್ಲಿಕಾಯಿ ಅಥವಾ ನೆಲನೆಲ್ಲಿಯೂ ಒಂದು. ಹಳ್ಳಿಗಳಲ್ಲಿ ತೋಟ, ಗದ್ದೆ ಹಾಗೂ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಸ್ಯಗಳು ಹೆಚ್ಚಾಗಿ ಕಾಣಬಹುದು, ಸುಮಾರು ಒಂದು ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯ ನೆಲ್ಲಿಕಾಯಿ ಹೋಲುವ ಎಲೆಗಳನ್ನು ಹೊಂದಿರುತ್ತದೆ. […]

Continue Reading

ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ: ಹೊಸ ವಿಶ್ವ ದಾಖಲೆ ಬರೆದ ಚೀನಾದ ‘ಮ್ಯಾಗ್ಲೆವ್’ ರೈಲು

ಬೀಜಿಂಗ್: ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತನ್ನೆ ಬೆರಗುಗೊಳಿಸುವ ಚೀನಾ, ಇದೀಗ ಸಾರಿಗೆ ಕ್ಷೇತ್ರದಲ್ಲಿ ಅಸಾಧ್ಯವಾದದ್ದು ಸಾಧಿಸಿ ತೋರಿಸಿದೆ. ಚೀನಾದ ಅತ್ಯಾಧುನಿಕ ಮ್ಯಾಗ್ಲೆವ್ (ಮ್ಯಾಗ್ನೆಟಿಕ್ ಲೆವಿಟೇಶನ್) ರೈಲು ಕೇವಲ 2 ಸೆಕೆಂಡ್‌ಗಳಲ್ಲಿ 700 ಕಿಲೋಮೀಟರ್ ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಏನಿದು ಪ್ರಯೋಗ ?ಚೀನಾದ ‘ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿ’ಯ ಸಂಶೋಧಕರು ಈ ಪ್ರಯೋಗ ನಡೆಸಿದ್ದಾರೆ. ಸುಮಾರು 1 ಟನ್ (1,000 ಕೆಜಿ) ತೂಕದ ವಾಹನ ಮ್ಯಾಗ್ಲೆವ್ ಟ್ರ್ಯಾಕ್ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿದೆ. 400 ಮೀಟರ್ […]

Continue Reading

ಕೇವಲ 12 ಜನರು ಪ್ರಯಾಣಿಸುವ ಭಾರತದ ಅತಿ ಚಿಕ್ಕ ರೈಲು ಎಲ್ಲಿದೆ ಗೊತ್ತೆ ?‌

ನವದೆಹಲಿ: ಭಾರತೀಯ ರೈಲ್ವೆ ವಿಶಾಲವಾದ ರೈಲು ಜಾಲ ಮತ್ತು ವೈವಿಧ್ಯಮಯ ರೈಲುಗಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ದೂರದ ಪ್ರಯಾಣವಾಗಿರಲಿ ಅಥವಾ ಸ್ಥಳೀಯ ಪ್ರಯಾಣವಾಗಿರಲಿ ಪ್ರತಿಯೊಂದು ಅಗತ್ಯಕ್ಕೂ ರೈಲು ಸೇವೆಗಳು ಲಭ್ಯವಿದೆ. ಭಾರತೀಯ ರೈಲ್ವೆ ಎಲ್ಲಾ ವರ್ಗದ ಜನರಿಗೆ ಅನುಕೂಲಕರ ಮತ್ತು ಸುಲಭವಾಗಿ ತಲುಪಬಹುದಾದ ಪ್ರಯಾಣ ಸಾಧನವಾಗಿದೆ. ಇದರಲ್ಲಿ ಅನೇಕ ಕೌತುಕಗಳು ಮತ್ತು ಅದ್ಬುತಗಳಿವೆ. ವೇಗದ ರೈಲುಗಳ ಜೊತೆಗೆ ಅತಿ ನಿಧಾನವಾಗಿ ಓಡುವ ರೈಲುಗಳು ಮತ್ತು ಯಾವಾಗಲೂ ಹೆಚ್ಚಿನ ಪ್ರಯಾಣಿಕರಿಂದ ತುಂಬಿರುವ ನಿಲ್ದಾಣಗಳಿವೆ. ಇದಲ್ಲದೆ ರೈಲ್ವೆ ಪ್ರಯಾಣವು ಅನುಕೂಲತೆಯ ಬಗ್ಗೆ ಮಾತ್ರವಲ್ಲ. ಇದು ಅದ್ಭುತ […]

Continue Reading

ಬಾಯಲ್ಲಿ ನೀರೂರಿಸುತ್ತೆ ಕರಿಬೇವಿನ ರೈಸ್

ಸಾಮಾನ್ಯವಾಗಿ ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ, ಪಾಲಕ್ ಹಾಗೂ ಪುದೀನಾ ರೈಸ್ ಹೀಗೆ ವಿವಿಧ ರೈಸ್ ಐಟಂಗಳನ್ನು ನೀವು ತಿಂದಿರುತ್ತಿರಿ. ರೈಸ್ ರೆಸಿಪಿಗಳ ಪೈಕಿ ಕರಿಬೇವಿನ ರೈಸ್ ಕೂಡ ಒಂದು. ಮತ್ತೆ ಮತ್ತೆ ಬೇಕೆನ್ನಿಸುವ, ಬಾಯಲ್ಲಿ ನೀರೂರಿಸುವ ಈ ರೆಸಿಪಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ನಾವಿಂದು ತಿಳಿಸಿಕೊಡುತ್ತಿದ್ದೆವೆ. ನೀವು ಕರಿಬೇವಿನ ರೈಸ್ ತಿಂದಿರದಿದ್ದರೆ ಒಂದು ಬಾರಿ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು ಅಕ್ಕಿ – 1 ಕಪ್ಎಣ್ಣೆ – 2 ಚಮಚಶೇಂಗಾ – 2 ಚಮಚಗೋಡಂಬಿ […]

Continue Reading

ಯೂಟ್ಯೂಬ್ ಚಾನೆಲ್ ರಚಿಸಿದರೆ, ಎಷ್ಟು ದಿನಗಳ ನಂತರ ಹಣ ಸಿಗಲು ಪ್ರಾರಂಭವಾಗುತ್ತದೆ ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಆನ್‌ಲೈನ್‌ನಲ್ಲಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಯೂಟ್ಯೂಬ್ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು ಸದಾ ಟ್ರೆಂಡಿಂಗ್​ನಲ್ಲಿರುತ್ತದೆ. ಲಕ್ಷಾಂತರ ಜನರು ಹವ್ಯಾಸ, ಪ್ರತಿಭೆ ಅಥವಾ ಜ್ಞಾನ ವೀಡಿಯೊಗಳ ಮೂಲಕ ಹಂಚಿಕೊಳ್ಳುತ್ತಾರೆ ಮತ್ತು ಉತ್ತಮ ಆದಾಯ ಗಳಿಸುತ್ತಾರೆ. ಆದರೆ ದೊಡ್ಡ ಪ್ರಶ್ನೆಯೆಂದರೆ ನೀವು ಇಂದು ಹೊಸ ಯೂಟ್ಯೂಬ್ ಚಾನಲ್ ರಚಿಸಿದರೆ, ಹಣ ಗಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?. ಈ ಕುರಿತು ವಿವರವಾಗಿ ನೋಡೋಣ. ಯೂಟ್ಯೂಬ್ ನಿಂದ ಹಣ ಗಳಿಸುವ ಮೊದಲ ಹೆಜ್ಜೆ […]

Continue Reading

ಮುಳ್ಳು ಮುಳ್ಳಾಗಿರುವ ಈ ಒಂದು ಹಣ್ಣಿಗೆ ಕ್ಯಾನ್ಸರ್, ಹೃದಯಾಘಾತ ಬರದಂತೆ ತಡೆಯುವ ಶಕ್ತಿಯಿದೆ

ಪ್ರಕೃತಿಯು ನಮಗೆ ಹಲವು ರೀತಿಯ ರುಚಿಕರವಾದ ಆಹಾರಗಳನ್ನು ನೀಡುತ್ತದೆ. ಅದರಲ್ಲಿಯೂ ತರಕಾರಿ ಮತ್ತು ಹಣ್ಣುಗಳು ಯಥೇಚ್ಛವಾಗಿ ಲಭ್ಯವಿರುತ್ತದೆ. ಇವೆಲ್ಲವೂ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯ ಪ್ರಯೋಜನಗಳು ಕೂಡ ನೀಡುತ್ತದೆ ಎಂಬುದು ತಿಳಿದ ವಿಚಾರ. ಇಂತಹ ಒಂದು ಹಣ್ಣುಗಳಲ್ಲಿ ರಂಬುಟಾನ್ ಕೂಡ ಒಂದು. ಇದು ಲಿಚಿಯನ್ನು ಹೋಲುವ ಹಣ್ಣಾಗಿದ್ದು ಹೆಚ್ಚಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಂಡುಬರುತ್ತದೆ. ಲಿಚಿಯನ್ನು ಹೋಲುವ ಈ ಕೆಂಪು ಬಣ್ಣದ ಹಣ್ಣು ನೀವು ನಂಬಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಈ […]

Continue Reading

ಕೇರಳದಲ್ಲಿ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ

ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಪತ್ತೆಯಾಗಿದ್ದ ನ್ಯುಮೋನಿಯಾ ಮಾದರಿಯ ವೈರಸ್ ವಿಶ್ವವನ್ನೆ ಆತಂಕಕ್ಕೆ ದೂಡಿತ್ತು. ನಿರ್ಲಕ್ಷ್ಯ ವಹಿಸಿದರೆ ಇದರಿಂದ ಭಾರತಕ್ಕೂ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸಿದ್ದರು. ಅದಕ್ಕಿಂತಲೂ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿರುವ ಮೆದುಳು ತಿನ್ನುವ ಅಮೀಬಾ ಸೋಂಕು ಜನರ ನಿದ್ದೆಗೆಡಿಸಿದೆ. 1962ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಹರಿಯಾಣದ […]

Continue Reading

ಚಿಕ್ಕಮಗಳೂರಿನ 10 ಸಾವಿರ ಎಕರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಡ್ರಿಲ್ಲಿಂಗ್ ಗಾಗಿ ಕೇಂದ್ರ ಸರ್ಕಾರದ ಮೊರೆ ಹೋದ ಬೆಂಗಳೂರು ಕಂಪನಿ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ ಆ 10,100 […]

Continue Reading

ಬಾನಂಗಳದಲ್ಲಿ ರಕ್ತ ಚಂದ್ರಗ್ರಹಣ ಗೋಚರ: ವಿಸ್ಮಯ ಕಣ್ತುಂಬಿಕೊಂಡ ಜನ

ಬೆಂಗಳೂರು/ನವದೆಹಲಿ: ಸೂರ್ಯ, ಭೂಮಿ ಮತ್ತು ಚಂದ್ರರು ಒಂದೆ ಸಾಲಿನಲ್ಲಿ ನಿಂತಾಗ ಚಂದ್ರನ ಮೇಲೆ ಭೂಮಿಯ ಬೆಳಕು ಬೀಳುವುದೆ ಚಂದ್ರಗ್ರಹಣ. ಇಂದು (ರವಿವಾರ) ಸಂಭವಿಸಿದ ಅಪರೂಪದ ರಕ್ತಚಂದ್ರ ಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿದೆ. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ದೇಶದ ಜನ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗದ ಜನ ಕಣ್ತುಂಬಿಕೊಂಡು ಖುಷಿಪಟ್ಟರು. ಎಲ್ಲೆಲ್ಲಿ ರಕ್ತಚಂದ್ರನ ದರ್ಶನ ? ನೆರೆಯ ಕೇರಳದ ತಿರುನಂತಪುರದಲ್ಲಿ ಭಾಗಶಃ ಹಂತದಿಂದ ಪೂರ್ಣ ಗ್ರಹಣ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಾನೆ. ಪಶ್ಚಿಮ […]

Continue Reading