ನಿರಂತರ 24 ಗಂಟೆ ಕನ್ನಡ ಬೋಧನೆ ಮಾಡಿದ ಶಿಕ್ಷಕ ಸಂಗಮೇಶ ರೋಣದ್

ಸುದ್ದಿ ಸಂಗ್ರಹ ಕಲಬುರಗಿಕನ್ನಡ ಭಾಷೆಯ ಅಭಿವೃದ್ದಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಗುಣಮಟ್ಟದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕಲಬುರಗಿ ನಗರದ ಶೃಂಗೇರಿ ಅಕಾಡೆಮಿಯಲ್ಲಿ ಶಿಕ್ಷಕ ಸಂಗಮೇಶ ರೋಣದ್ ನಿರಂತರ 24 ಗಂಟೆಗಳ ಕಾಲ ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಬೋಧನೆ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ. ಜುಲೈ 15ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ವಿಶೇಷ ತರಗತಿಯು ಜುಲೈ 16ರ ಬೆಳಗ್ಗೆ 8 ಗಂಟೆಯವರೆಗೆ ಯಾವುದೆ ವಿರಾಮವಿಲ್ಲದೆ ನಡೆಯಿತು. ಈ ಅವಧಿಯಲ್ಲಿ ಕಡ್ಡಾಯ ಕನ್ನಡ ಪತ್ರಿಕೆಗೆ ಸಂಬಂಧಿಸಿದ […]

Continue Reading

ಗೃಹಲಕ್ಷ್ಮಿ ಯೋಜನೆಗೆ ಡಿಕೆಶಿ ಬಿಗ್ ಅಪ್ಡೇಟ್: 2,000 ರೂ.ಬೇಕು ಅಂದ್ರೆ ಈ ನಿಯಮಗಳು ಪಾಲಿಸಬೇಕು

ಸುದ್ದಿ ಸಂಗ್ರಹ ಬೆಂಗಳೂರುಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇಂದು (ಜುಲೈ 19) ರಂದು ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ಆಗಿದೆ. ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಗೃಹಲಕ್ಷ್ಮಿ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಯೊಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ […]

Continue Reading

15 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಅನುಮೋದನೆ

ಸುದ್ದಿ ಸಂಗ್ರಹ ಬೆಂಗಳೂರುಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದಾಗಿ ಸಿಎಂ ಡಿಕೆ ಶಿವಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹತ್ವದ ನಿರ್ಧಾರಗಳನ್ನೂ ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದಾಗಿ ಮಾಹಿತಿ ನೀಡಿದರು. ಜೊತೆಗೆ ಹಾಸ್ಟೆಲ್ ಗಳ ಬೆಡ್‌ಕಾಟ್ ಖರೀದಿಗೆ 30 ಕೋಟಿ ಕೊಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಅಲೆಮಾರಿ ಜನಾಂಗಕ್ಕೆ ಮನೆ ಕಟ್ಟಲು […]

Continue Reading

ದೇವೆಗೌಡರ ಪ್ರತಿ ಯಶಸ್ಸಿನ‌ ಹಿಂದೆ ನಿಂತಿದ್ದವರು ಚೆನ್ನಮ್ಮ: ಸಿಎಂ ಡಿಕೆಶಿ ತೀವ್ರ ಸಂತಾಪ‌

ಸುದ್ದಿ ಸಂಗ್ರಹ ಬೆಂಗಳೂರುಮಾತೃ ಸ್ವರೂಪಿ ಚೆನ್ನಮ್ಮ ದೇವೆಗೌಡ ಅವರ ನಿಧನಕ್ಕೆ ಸಿಎಂ ಡಿ.ಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದರು. ಅಪಾರ ಧೈವಭಕ್ತೆಯಾಗಿದ್ದ ಚನ್ನಮ್ಮನವರು ಕುಟುಂಬವನ್ನು ಸಾಕಿ ಸಲಹಿದ ಮಹಾನ್ ತಾಯಿ. ದೇವೆಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬ ಸದಸ್ಯರ ರಾಜಕೀಯ ಮತ್ತು ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮನವರ ಪರಿಶ್ರಮ ಅಡಗಿದೆ. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ ಬರುತ್ತಾರೆ ಎಂದು ಎಲ್ಲರೂ ನಂಬಿಕೆ ಇಟ್ಟಿದ್ದರು. ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ ಎಂದು ದುಃಖತಪ್ತರಾದರು. ಯಶಸ್ವಿ ಪುರುಷನ […]

Continue Reading

ಕಲಬುರಗಿ: ಸೀರೆ, ಪ್ಯಾಂಟ್‌, ಶೂ ಬೇಡಿದ ಎಪಿಪಿ

ಸುದ್ದಿ ಸಂಗ್ರಹ ಕಲಬುರಗಿಹಲ್ಲೆ ಪ್ರಕರಣವೊಂದರ ಸಂಬಂಧ ಕೋರ್ಟ್‌ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರು (ಎಪಿಪಿ) ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಹೈದರಾಬಾದ್ ಮೂಲದ ಬಟ್ಟೆ ವ್ಯಾಪಾರಿ ರಾಹುಲ್‌ ಮಾರಾಜೋ ಮುಂದಾಗಿದ್ದರು. ಅದಕ್ಕೆ 10 ಸಾವಿರ ನಗದು, 9 ಸೀರೆಗಳು, 4 ಶರ್ಟ್‌ಗಳು, 4 ಲಂಡನ್ ಜೀನ್ಸ್ ಪ್ಯಾಂಟ್, ಒಂದು ಜೊತೆ ಶೂ, ಮಹಿಳೆಯರ ನಾಲ್ಕು ಉಡುಗೆಗಳು, ಮಹಿಳೆಯರ 6 ಜೋಡಿ ಚಪ್ಪಲಿಗಳಿಗೆ […]

Continue Reading

ಕಲಬುರಗಿ: ನೀಟ್ ಪರೀಕ್ಷೆಯಲ್ಲಿ 190ನೇ ರ‍್ಯಾಂಕ್ ಪಡೆದ ಚನ್ನಬಸವ ಕೊರಳ್ಳಿ

ಸುದ್ದಿ ಸಂಗ್ರಹ ಕಲಬುರಗಿ ವೈದ್ಯಕೀಯ ಶಿಕ್ಷಣದ ಕೋರ್ಸ್‌ ಪ್ರವೇಶಾತಿಗೆ ನಡೆಸುವ ನೀಟ್‌ ಪರೀಕ್ಷೆಯಲ್ಲಿ ನಗರದ ಎಸ್‌ಬಿಆರ್‌ ಪದವಿ ಪೂರ್ವ ಕಾಲೇಜಿನ ಚನ್ನಬಸವ ಕೊರಳ್ಳಿ 190ನೇ ರ‍್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆ ತೋರಿದಕ್ಕೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನಲ್ಲಿ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಧರ್ಮರಾಯ ಕೊರಳ್ಳಿ ಅವರ ಸುಪುತ್ರ ಚನ್ನಬಸವ ಕೊರಳ್ಳಿ 720ಕ್ಕೆ 685 ಅಂಕ ಗಳಿಸಿ ಕಾಲೇಜು […]

Continue Reading

ಶಹಾಬಾದ್: ಅವಧಿ ಮುಗಿದ ಎಣ್ಣೆ ಬಳಸಿ ಶಾಲಾ ಮಕ್ಕಳಿಗೆ ಬಿಸಿಯೂಟ ಸರಬರಾಜು

ಸುದ್ದಿ ಸಂಗ್ರಹ ಶಹಾಬಾದ್ಬಿಸಿಯೂಟದಲ್ಲಿ ಅವಧಿ ಮುಗಿದ ಅಡುಗೆ ಎಣ್ಣೆ ಬಳಸಿದ ಪರಿಣಾಮ ಶಹಾಬಾದ್ ಸರಕಾರಿ ಬಾಲಕರ ಪ್ರೌಢ ಶಾಲೆ ಮತ್ತು ಉರ್ದು ಶಾಲಾ ಮಕ್ಕಳಿಗೆ ಊಟ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಸೇವಿಸಿದ ವಿದ್ಯಾರ್ಥಿಗಳು ದುರಂತದಿಂದ ಪಾರಾಗಿದ್ದಾರೆ, ಆದರೆ ಈ ಬಗ್ಗೆ ಶಾಲಾ ಆಡಳಿತವು ನಿರ್ಲಕ್ಷ್ಯ ತೋರಿರುವುದು ಗಂಭೀರ ವಿಷಯವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಹಬಾದ್ ಸರ್ಕಾರಿ ಬಾಲಕರ ಪ್ರೌಢ ಶಾಲೆ ಮತ್ತು ಉರ್ದು ಶಾಲೆಗೆ ಪತ್ರಕರ್ತರು ಭೇಟಿ ನೀಡಿದಾಗ ಈ ಸತ್ಯ ತಿಳಿದು […]

Continue Reading

ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್: ಸಚಿವ ಕೆ.ಎಚ್ ​ಮುನಿಯಪ್ಪ

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದ 7.76 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್​ಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಅಕ್ರಮ ಬಿಪಿಎಲ್​ ಕಾರ್ಡ್​ಗಳ ಪರಿಷ್ಕರಣೆ ಕೆಲಸ ನಡೆಯುತ್ತಿದೆ. ಈಗಾಗಲೆ 50% ಪರಿಷ್ಕರಣೆ ಮಾಡಲಾಗಿದೆ. ಬಿಪಿಎಲ್​ನಲ್ಲಿದ್ದ 4,32,295 ಜನರನ್ನು ಎಪಿಎಲ್​ಗೆ ಸೇರಿಸಲಾಗಿದೆ. ಇನ್ನುಳಿದವರನ್ನು ಆದಷ್ಟು ಬೇಗ ಎಪಿಎಲ್​ಗೆ ಪರಿವರ್ತನೆ ಮಾಡ್ತೆವೆ ಎಂದು ಆಹಾರ ಸಚಿವ ಕೆ.ಎಚ್ ​ಮುನಿಯಪ್ಪ ಹೇಳಿದ್ದಾರೆ.‌ ಇನ್ನು ಬಿಪಿಎಲ್ ಕಾರ್ಡ್ ಎಪಿಎಲ್ ಆಗಿದ್ದರೆ, 15 ದಿನಗಳಲ್ಲಿ ಸರಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ 15 ದಿನದ ಸಮಯ ನೀಡಲಾಗಿದೆ ಎಂದು […]

Continue Reading

ಪತ್ರಕರ್ತರಿಂದ ಸಮಾಜದ ಕಣ್ತೆರೆಸುವ ಕೆಲಸ‌

ಸುದ್ದಿ ಸಂಗ್ರಹ ಶಹಾಬಾದ್ಎಲ್ಲ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಬರೆಯುವ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸ ಪತ್ರಕರ್ತರು ಮಾಡುತ್ತಾರೆ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು. ನಗರದ ಪಾರ್ವತಿ ಸಭಾಗೃಹದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಛಾಯಾಚಿತ್ರ ಪ್ರದರ್ಶನ ಮತ್ತು ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶಹಾಬಾದ್​ ಪತ್ರಕರ್ತರು ರಾಜಕೀಯ ರಹಿತ ವರದಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಪತ್ರಕರ್ತರು ಸ್ಥಳವನ್ನು ಗುರುತಿಸಿದರೆ, ಪತ್ರಿಕಾ […]

Continue Reading

ಜೈಲು ಅಧೀಕ್ಷಕ ಸೇರಿ 8 ಮಂದಿ ಅಧಿಕಾರಿ, ಸಿಬ್ಬಂದಿ ಅಮಾನತು

ಸುದ್ದಿ ಸಂಗ್ರಹ ಕಲಬುರಗಿನಗರದ ಹೊರವಲಯದ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಸೇರಿದಂತೆ ಎಂಟು ಅಧಿಕಾರಿ, ಸಿಬ್ಬಂದಿಯನ್ನು ಕಾರಾಗೃಹಗಳ ಇಲಾಖೆ ಅಮಾನತುಗೊಳಿಸಿದೆ. ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಜೊತೆಗೆ ಸಹಾಯಕ ಜೈಲು ಅಧೀಕ್ಷಕ ಸುರೇಶ ಬಿ. ಜೈಲರ್‌ ಶ್ರೀಮಂತಗೌಡ ಪಾಟೀಲ, ಹೆಡ್‌ ವಾರ್ಡರ್‌ಗಳಾದ ನಿಂಗಣ್ಣ ಬಂದರಬಟ್ಟಿ ಮತ್ತು ಯಮನಪ್ಪ ಕುರುಬರ, ವಾರ್ಡರ್‌ಗಳಾದ ಬಸವರಾಜ ಮೇತ್ರಿ, ಸಾವಿತ್ರಿ ತಳಕೇರಿ, ಅಜಿಮ್‌ ಎನ್‌.ಎಸ್‌. ಅಮಾನತುಗೊಂಡಿದ್ದಾರೆ. ಬೆಂಗಳೂರು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಕುಮಾರ ಅವರನ್ನು […]

Continue Reading