ಮಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ: ನೊಂದ ಕುಟುಂಬಕ್ಕೆ ಶಾಸಕ ಸುರೇಶ್ ಕುಮಾರ್ ನೆರವು ಸುದ್ದಿ ಸಂಗ್ರಹ ಬೆಂಗಳೂರುಮಗಳ ಜೀವನಕ್ಕಾಗಿ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾದ ಕರುಣಾಜನಕ ಕಥೆ ಬೆಂಗಳೂರಿನಲ್ಲಿ ನಡೆದಿದೆ. ಈ ವಿಚಾರ ತಿಳಿದ ತಕ್ಷಣ ಸ್ಪಂದಿಸಿದ ಶಾಸಕ ಸುರೇಶಕುಮಾರ್ ನೊಂದ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮರೆದಿದ್ದಾರೆ. ಕುಸುಮಾ ಎಂಬ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಕಾಲು ಕಳೆದುಕೊಂಡಿದ್ದರು ಇತ್ತೀಚೆಗೆ ಪರೀಕ್ಷೆ ಬರೆದಿದ್ದರು. ಅನಾರೋಗ್ಯದಿಂದ ವೈಟ್ಫೀಲ್ಡ್ನ ಎಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. […]
Continue ReadingAuthor: admin
ಬಿಜೆಪಿ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಆಚರಣೆ
ಸುದ್ದಿ ಸಂಗ್ರಹ ಶಹಾಬಾದ್ನಗರದ ತಾಲೂಕು ಬಿಜೆಪಿ ಕಚೇರಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೊಳಕರ, ಅ.ಭಾ ವೀರಶೈವ ಮಹಾಸಭಾದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಮುಖಂಡರಾದ ದೇವದಾಸ ಜಾಧವ, ಅರುಣ ಪಟ್ಟಣಕರ, ಭಿಮರಾವ ಸಾಳೂಂಕೆ, ಗಿರಿಮಲ್ಲಪ್ಪ ವಳಸಂಗ ಸೇರಿದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Continue Readingಚಿತ್ತಾಪುರ: ಬಸವೇಶ್ವರ ಜಯಂತಿ ಆಚರಣೆ
ಸುದ್ದಿ ಸಂಗ್ರಹ ಚಿತ್ತಾಪುರತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ 893ನೇ ಜಯಂತಿ ಆಚರಿಸಲಾಯಿತು. ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಸವ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ರಮೇಶ ಪಾಟೀಲ ಮರಗೋಳ, ತಾ.ಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಮುಖಂಡರಾದ ಶಾಂತಣ್ಣ ಚಾಳಿಕಾರ, ನಾಗುಗೌಡ ಅಲ್ಲೂರು, ಭೀಮಣ್ಣ ಹೊತಿನಮಡಿ, […]
Continue Readingಸಮಾನತೆ ಸಾರಿ ಜಗ ಬೆಳಗಿದ ಬಸವ: ವೀರಣ್ಣ ಯಾರಿ
ವಾಡಿ: ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಮಾನವೀಯತೆ ಮತ್ತು ಸಮಾನತೆಯ ತತ್ವಗಳೊಂದಿಗೆ ಜಗ ಬೆಳಗಿದ ಬಸವ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾನು ಎಂಬ ಅಹಂ ಬಿಟ್ಟು ನಾವು ಎಂಬ ಭಾವನೆಯ ಬದುಕು ಸಾಗಿಸಬೇಕು ಎಂದು ತಿಳಿಸಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹೆಣ್ಣಿನ ಬಗ್ಗೆ ಅತ್ಯಂತ ಅಭಿಮಾನದಿಂದ ದನಿ ಎತ್ತಿದ್ದಾರೆ. ಹೆಣ್ಣಿನ ಬಗ್ಗೆ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ […]
Continue Readingಸಂಭ್ರಮದ ಬಸವೇಶ್ವರ ಜಯಂತಿ ಆಚರಣೆ
ಸುದ್ದಿ ಸಂಗ್ರಹ ಚಿತ್ತಾಪುರತಾಲೂಕು ಆಡಳಿತದ ವತಿಯಿಂದ ಪ್ರಜಾಸೌಧ ಆವರಣದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ 893ನೇ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ತಹಸೀಲ್ದಾರ್ ನಾಗಯ್ಯ ಹಿರೇಮಠ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ರೈತರ ಜೋಡೆತ್ತುಗಳೊಂದಿಗೆ ಬಸವೇಶ್ವರರ ಭಾವಚಿತ್ರದ ಅದ್ದೂರಿ ಮರವಣಿಗೆಗೆ ಹಿರೇಮಠ ಚಾಲನೆ ನೀಡಿದರು. ಹೂವಿನಿಂದ ಅಲಂಕೃತ ಸಾರೋಟದಲ್ಲಿ ಬಸವೇಶ್ವರ ಭಾವಚಿತ್ರವಿಟ್ಟು ಸಾಗಿದ ಮೆರವಣಿಗೆಯು ಪಟ್ಟಣದ ರೈಲ್ವೆ ನಿಲ್ದಾಣ, ನಾಗಾವಿ, ಜನತಾ, […]
Continue Readingಟೆಂಗಳಿ ಕ್ರಾಸ್ ಸಮೀಪ ಸಿಡಿಲು ಬಡಿದು ಮರಕ್ಕೆ ಬೆಂಕಿ
ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನ ಟೆಂಗಳಿ ಕ್ರಾಸ್ ಸಮೀಪ ರವಿವಾರ ಸಂಜೆ ಭಾರಿ ಪ್ರಮಾಣದ ಮಳೆ ಮತ್ತು ಗಾಳಿಯ ಅಬ್ಬರದ ನಡುವೆ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಹೊತ್ತಿ ಉರಿದ ಅಪರೂಪದ ಘಟನೆ ನಡೆದಿದೆ. ಕಲಬುರಗಿ–ಸೇಡಂ ರಾಜ್ಯ ಹೆದ್ದಾರಿ 10ರ ಸಮೀಪದ ಟೆಂಗಳಿ ಕ್ರಾಸ್ ಸಮೀಪವಿರುವ ಹೊಲವೊಂದರಲ್ಲಿ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಮಳೆಯ ನಡುವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹಾರುತ್ತಿರುವ ಬೆಂಕಿಯ ಕಿಡಿಗಳು ದೃಶ್ಯ ಮಿಂಚು ಹುಳುವಿನಂತೆ ಹೊಳೆಯುತ್ತಿರುವ […]
Continue Readingಟೆಂಗಳಿ ಕ್ರಾಸ್ ಸಮೀಪ ಸಿಡಿಲು ಬಡಿದು ಮರಕ್ಕೆ ಬೆಂಕಿ…ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನ ಟೆಂಗಳಿ ಕ್ರಾಸ್ ಸಮೀಪ ರವಿವಾರ ಸಂಜೆ ಭಾರಿ ಪ್ರಮಾಣದ ಮಳೆ ಮತ್ತು ಗಾಳಿಯ ಅಬ್ಬರದ ನಡುವೆ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಹೊತ್ತಿ ಉರಿದ ಅಪರೂಪದ ಘಟನೆ ನಡೆದಿದೆ…..ಕಲಬುರಗಿ–ಸೇಡಂ ರಾಜ್ಯ ಹೆದ್ದಾರಿ 10ರ ಸಮೀಪದ ಟೆಂಗಳಿ ಕ್ರಾಸ್ ಸಮೀಪವಿರುವ ಹೊಲವೊಂದರಲ್ಲಿ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ……ಮಳೆಯ ನಡುವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹಾರುತ್ತಿರುವ ಬೆಂಕಿಯ ಕಿಡಿಗಳು […]
Continue Readingರಾಯಚೂರು: ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ
ಸುದ್ದಿ ಸಂಗ್ರಹ ರಾಯಚೂರುಮಧ್ಯಪ್ರಾಚ್ಯ ದೇಶಗಳ ಯುದ್ದದ ಎಫೆಕ್ಟ್ ರಾಯಚೂರು ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೂ ತಟ್ಟಿದೆ. ಟೊಮ್ಯಾಟೊ ಬೆಲೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರೆ, ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಸೊಲ್ಲಾಪುರ ಸೇರಿ ಮಹಾರಾಷ್ಟ್ರ ಈರುಳ್ಳಿ ವಿದೇಶಕ್ಕೆ ರಫ್ತಾಗದ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಬೇಡಿಕೆ ಕುಸಿತವಾಗುತ್ತಿದೆ. ಹೊರ ರಾಜ್ಯಗಳ ಖರೀದಿದಾರರು, ದಲ್ಲಾಳಿಗಳು ಬಾರದ ಹಿನ್ನೆಲೆ ಬೆಲೆ ಕುಸಿಯುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 600 ರಿಂದ 800 ರೂ. ಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಕೇಳುವವರೆ […]
Continue Readingಶಹಾಬಾದ್: ಸರ್ಕಲ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ
ಶಹಾಬಾದ: ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನಗರದ ಪ್ರಮುಖ ಸರ್ಕಲ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಆಯುಕ್ತರಿಗೆ ಎಸ್’ಯುಸಿಐ(ಸಿ) ಪಕ್ಷದ ಶಹಾಬಾದ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾ.ಗಣಪತಿರಾವ್ ಮಾನೆ, ಕಾ.ರಾಘವೇಂದ್ರ ಎಂ.ಜಿ, ಕಾ.ಜಗನ್ನಾಥ್ ಎಸ್.ಎಚ್, ಕಾ.ತಿಮ್ಮಣ್ಣ ಮಾನೆ, ಕಾ.ನೀಲಕಂಠ ಹುಲಿ, ರಮೇಶ ಇದ್ದರು.
Continue Reading