ಚಿತ್ತಾಪುರ: ಡಿ.21 ರಿಂದ 24 ರವರೆಗೆ ಪಲ್ಸ್‌ ಪೋಲಿಯೊ

ಸುದ್ದಿ ಸಂಗ್ರಹ ಚಿತ್ತಾಪುರತಾಲೂಕಿನಲ್ಲಿ ಡಿಸೆಂಬರ್ 21ರಿಂದ ನಾಲ್ಕು ದಿನ ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದೆ, ಸಾರ್ವಜನಿಕರಿಗೆ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಡಿ.21 ರಿಂದ 24ರ ವರೆಗೆ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದರಿ ಕಾರ್ಯಕ್ರಮದಲ್ಲಿ ಐದು ವರ್ಷ ಒಳಪಟ್ಟ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದರು. ತಾಲೂಕಿನ […]

Continue Reading

ಮನೆ ನಡೆಸುವ ಹೆಣ್ಣು, ರಾಷ್ಟ್ರವನ್ನು ನಡೆಸಬಲ್ಲಳು: ಜಗದೀಶ್ವರಿ ಯರಗೋಳ

ಸುದ್ದಿ ಸಂಗ್ರಹ ಚಿತ್ತಾಪುರಹೆಣ್ಣು ತಾಳ್ಮೆ, ಕ್ಷಮೆ, ದೃಢತೆ ಮತ್ತು ಧೈರ್ಯಶಾಲಿಯಾದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಯಾವದು ಇಲ್ಲ, ಮನೆ ನಡೆಸುವ ಹೆಣ್ಣು ರಾಷ್ಟ್ರವನ್ನು ನಡೆಸಬಲ್ಲಳು ಎಂದು ನರ್ಮದಾ ಗಿಲಡಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಗದೀಶ್ವರಿ ಯರಗೋಳ ಹೇಳಿದ್ದಾರೆ. ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಪ್ರಾರ್ಥನಾ ಪೂರ್ವ ಪ್ರಾಥಮಿಕ ಶಾಲೆ, ವೀರಭದ್ರೇಶ್ವರ ಪ್ರಾಥಮಿಕ ಶಾಲೆ ಮತ್ತು ವಸತಿ ಪ್ರೌಢ ಶಾಲೆಯ ಆವರಣದಲ್ಲಿ ಶನಿವಾರ ಮಾತೆಯರಿಗಾಗಿ ಆಯೋಜಿಸಿದ್ದ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ […]

Continue Reading

ಚಿತ್ತಾಪುರ: ನೂತನ ಸಹಾಯಕ ಖಜಾನೆ ಅಧಿಕಾರಿ ಸೈಯದ್ ನಾಸಿರ್ ಹಶ್ಮಿ ಅವರಿಗೆ ಸನ್ಮಾನ

ಸುದ್ದಿ ಸಂಗ್ರಹ ಚಿತ್ತಾಪುರನೂತನ ಸಹಾಯಕ ಖಜಾನೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸೈಯದ್ ನಾಸಿರ್ ಹಶ್ಮಿ ಅವರನ್ನು ಸರ್ಕಾರಿ ನೌಕರರ ಸಂಘದಿಂದ ಪಟ್ಟಣದಲ್ಲಿ ಸನ್ಮಾನಿಸಲಾಯಿತು. ತಾಲೂಕು ಉಪ ಖಜಾನೆ ಕಚೇರಿಗೆ ಸಹಾಯಕ ಖಜಾನೆ ಅಧಿಕಾರಿಯಾಗಿ ಸೈಯದ್ ನಾಸಿರ್ ಹಶ್ಮಿ ಅವರು ಹಾಜರಾದ ಪ್ರಯುಕ್ತ ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, […]

Continue Reading

ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ ಯಡ್ರಾಮಿ ತಾಲೂಕಿನ ಪತ್ರಕರ್ತ ಪ್ರಶಾಂತ್‌ ಚವ್ಹಾಣ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದ ಪ್ರಕರಣ ಅತ್ಯಂತ ಖಂಡನೀಯ ಈ ಕೂಡಲೇ ಕಿಡಿಗೇಡಿಗಳಿಗೆ ಬಂಧಿಸಿ ರಾಜ್ಯ ಸರ್ಕಾರ ನಿದರ್ಶನೀಯ ಶಿಕ್ಷೆ ವಿಧಿಸಬೇಕು‌‌ ಮತ್ತು ಗ್ರಾಮೀಣ ಪತ್ರಕರ್ತರ ರಕ್ಷಣೆಗೆ ವಿಶೇಷ ಕಾನೂನು ಜಾರಿಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ತಾಪುರ ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನತಾಂತ್ರಿಕ ಬೇಡಿಕೆಗಳ ಮೇಲೆ ಬೆಳಕು ಚೆಲ್ಲುತ್ತಾ ಅಸಹಾಯಕರ, […]

Continue Reading

ಡಾ.ಬಿ.ಆರ್ ಅಂಬೇಡ್ಕರ್’ರ 69ನೇ ಮಹಾಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ಗಣ್ಯರಿಂದ ನಮನ

ಸುದ್ದಿ ಸಂಗ್ರಹ ವಾಡಿಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖಂಡರು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಅವರ ಕೆಲಸ ಮತ್ತು ಅವರು ಭಾರತೀಯ ಸಮಾಜಕ್ಕೆ ತಂದ ಬದಲಾವಣೆಯ ಸ್ಮರಿಸುವ ದಿನ ಎಂದರು. ಮಹಾಪರಿನಿರ್ವಾಣ ದಿನ ಅವರ ನ್ಯಾಯ, ಸಮಾನತೆ ಮತ್ತು ನ್ಯಾಯಯುತ ಮೌಲ್ಯಗಳ ಪ್ರತಿಬಿಂಬಿಸುವ ಸಮಯವಾಗಿದ್ದು, […]

Continue Reading

ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಒತ್ತಡದಿಂದ ಮುಕ್ತಿ: ಯೋಗ ಶಿಕ್ಷಕ ವೀರಣ್ಣ ಯಾರಿ

ಸುದ್ದಿ ಸಂಗ್ರಹ ಚಿತ್ತಾಪುರ ಪಟ್ಟಣದ ಗಂಗಾ ಪರಮೇಶ್ವರಿ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಬಿಎಡ್ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ವಿಶೇಷ “ಯೋಗಾ ಕಾರ್ಯಗಾರ”ದಲ್ಲಿ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಸಸಿಗೆ ನಿರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಯೋಗಾಭ್ಯಾಸ ಮಾಡಿಸಿ ಮಾತನಾಡಿದ ಅವರು, ಯೋಗದಿಂದ ಆರೋಗ್ಯ, ಐಶ್ವರ್ಯ, ನೆಮ್ಮದಿ, ಆನಂದ ಪಡೆಯಬಹುದಾಗಿದೆ. ದಿನನಿತ್ಯ ನಾವು ಯೋಗಾಭ್ಯಾಸ ಮಾಡುವ ಮೂಲಕ ಮಾನಸಿಕ ನೆಮ್ಮದಿ ಜೊತೆಗೆ ಓದಿನಲ್ಲಿ ಉನ್ನತ ಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದರು. ಇಂದಿನ ಸ್ಪರ್ಧಾತ್ಮಕ ಮತ್ತು […]

Continue Reading

ವಾಡಿ: ಸ್ವದೇಶಿ ದಿನಾಚರಣೆ ಆಚರಣೆ

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸ್ವದೇಶಿ ದಿನಾಚರಣೆ ಆಚರಿಸಲಾಯಿತು. ಸ್ವದೇಶಿ ಚಿಂತಕ ರಾಜೀವ್ ದೀಕ್ಷಿತರ 58ನೇ ಜನ್ಮ ದಿನ, 15ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವದೇಶಿ ದಿನಾಚರಣೆಯನ್ನು ಸೇಡಂ ಓಂ ಶಾಂತಿ ಕೇಂದ್ರದ ಬಿ.ಕೆ ಕಲಾವತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಅವರು, ರಾಜೀವ್ ದೀಕ್ಷಿತ್ ಅವರು ಸ್ವದೇಶಿ ಉಳಿವಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಸಂಕಲ್ಪ ಮತ್ತು ಕನಸನ್ನು ನನಸು ಮಾಡುವ ಜವಾಬ್ದಾರಿ […]

Continue Reading

ಚಿತ್ತಾಪುರ: ಭೀಮನಡೆ ಪಥಸಂಚಲನಕ್ಕೆ ಕ್ಷಣಗಣನೆ

ಚಿತ್ತಾಪುರ: ರಾಜ್ಯದ ಗಮನ ಸೆಳೆದಿರುವ ಭೀಮನಡೆಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ. ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳು ಬಳಸುವ ಧ್ವಜದ ಬಣ್ಣಗಳ ಬಾವುಟಗಳು, ಬಂಟಿಂಗ್ಸ್’ಗಳು, ಬ್ಯಾನರ್’ಗಳು ಹಾಗೂ ಪ್ಲೇಕ್ಸ್’ಗಳು ರಾರಾಜಿಸುತ್ತಿವೆ. ಸಂವಿಧಾನ ಪೀಠಿಕೆಯೊಂದಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ್, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಮಹಾವೀರ, ನುಲಿಯ ಚಂದಯ್ಯ ಸೇರಿದಂತೆ ವಿವಿಧ ಸಮುದಾಯಗಳ ಶರಣರ ಭಾವಚಿತ್ರಗಳ ಕಟೌಟ್‌’ಗಳು ಪಟ್ಟಣದ ಪ್ರಮುಖ ರಸ್ತೆ […]

Continue Reading

ಕನ್ನಡ ನಿತ್ಯ ಬಳಕೆಯಲ್ಲಿದ್ದರೆ ಮಾತ್ರ ನಾಡು- ನುಡಿ ಉಳಿವು: ತಹಸೀಲ್ದಾರ್ ನಾಗಯ್ಯ ಹಿರೇಮಠ

ಸುದ್ದಿ ಸಂಗ್ರಹ ಚಿತ್ತಾಪುರ ಕನ್ನಡವು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಈ ಭಾಷೆಯನ್ನು ನಿರಂತರವಾಗಿ ಮಾತನಾಡಿ, ಕಲಿಸಿ, ಬಳಸಿಕೊಂಡು ಬಂದರೆ ಮಾತ್ರ ನಮ್ಮ ನಾಡು ಹಾಗೂ ನುಡಿ ಉಳಿಯಲು ಸಾಧ್ಯ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ ವರುಣ ನಗರದ ಶ್ರೀಗುರು ರಾಘವೇಂದ್ರ ಟ್ರಸ್ಟ್ ದಿ. ಶೇಷಗಿರಿರಾವ ಎಸ್ ಕುಲಕರ್ಣಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಸಿರಿನುಡಿ ಸಂಭ್ರಮ–2025 ಕಾರ್ಯಕ್ರಮ ಉದ್ಘಾಟಿಸಿ […]

Continue Reading

ಚಿತ್ತಾಪುರ ತಹಸೀಲ್ದಾರರ ಕರ್ತವ್ಯ ಚ್ಯುತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಚಿತ್ತಾಪುರ: ತಹಸೀಲ್ದಾರ್ ಕರ್ತವ್ಯ ಚ್ಯುತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ನಾಗಾವಿ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹೇಳಿದ್ದಾರೆ. ಪಟ್ಟಣದ ನಾಗಾವಿ ಹಿತರಕ್ಷಣಾ ಸಮಿತಿ ಮತ್ತು ಚಿತ್ತಾಪುರದ ನಾಗರಿಕರಿಂದ ಮಾರ್ಚ್ 12 ರಂದು ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯ ಪರಿಸರಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಮರುಪರಿಶೀಲನೆ ಮಾಡುವುದು ಮತ್ತು ಸ್ಥಳದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಹೊಸ ಗೆಜೆಟ್ ಹೊರಡಿಸುವ ಬಗ್ಗೆ ಸಂತರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕೊಡಲಾಗಿತ್ತು ಎಂದರು. […]

Continue Reading