ಲಾಡ್ಲಾಪುರ: ಖಾರದಪುಡಿ ಎರಚಿ 5 ಲಕ್ಷ ರೂ ದೋಚಿದ ಮುಸುಕುಧಾರಿಗಳು

ಸುದ್ದಿ ಸಂಗ್ರಹ ಚಿತ್ತಾಪುರಬೈಕ್‌ ಮೇಲೆ ತೆರಳುತ್ತಿದ್ದ ವ್ಯಕ್ತಿಗಳ ಮೇಲೆ ಇಬ್ಬರು ಮುಸುಕುಧಾರಿಗಳು ಖಾರದಪುಡಿ ಎರಚಿ 5 ಲಕ್ಷ ರೂ ದೋಚಿದ ಘಟನೆ ಲಾಡ್ಲಾಪುರ ಸಮೀಪ ನಡೆದಿದೆ. ಅಲಹಳ್ಳಿಯ ಜ್ಯೋತಿ ವೈನ್‌ಶಾಪ್ ಮ್ಯಾನೇಜರ್ ಬಾಪರೆಡ್ಡಿ ನಾಚವಾರ ಹಾಗೂ ಯಂಕಪ್ಪ ಕಟ್ಟಿಮನಿ ಅವರು 5 ಲಕ್ಷ ರೂ ತೆಗೆದುಕೊಂಡು ಬೈಕ್ ಮೇಲೆ ತೆರಳುತ್ತಿದ್ದರು. ಆ ವೇಳೆ ಲಾಡ್ಡಾಪುರ ಹತ್ತಿರ ಅಡ್ಡಗಟ್ಟಿದ ಇಬ್ಬರು ಮುಸುಕುಧಾರಿ ಬೈಕ್’ನ ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ಹಣ ಇರುವ ಬ್ಯಾಗ್ ಕಿತ್ತುಕೊಂಡು […]

Continue Reading

ವಾಡಿ: ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

ಸುದ್ದಿ ಸಂಗ್ರಹ ವಾಡಿ ಸಮೀಪದ ಸುಕ್ಷೇತ್ರ ಎಲ್ಲಾಂಬಿಕಾ ದೇವಿ ದೇವಸ್ಥಾನದಲ್ಲಿ ಹಲಕರ್ಟಿಯ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಣಗೌಡ ಪಾಟೀಲ, ದಂಡಯ್ಯ ಸ್ವಾಮಿ, ಬಸವರಾಜ ಸಜ್ಜನ, ಶರಣಗೌಡ ಚಾಮನೂರ, ವೀರಣ್ಣ ಯಾರಿ, ದೇವೇಂದ್ರ ಬಡಿಗೇರ ಮತ್ತು ಮೌನೇಶ ಪಂಚಾಳ ಇದ್ದರು.

Continue Reading

ಕುಂದನೂರು ಸಂಗಮದಲ್ಲಿನ ಪುಣ್ಯ ಸ್ನಾನಕ್ಕೆ ಉಚಿತ ಕಡಲೆ ಹಿಟ್ಟು ವಿತರಣೆ

‌ಸುದ್ದಿ ಸಂಗ್ರಹ ವಾಡಿಪಟ್ಟಣದ ಸಮೀಪದ ಕುಂದೂರು ಗ್ರಾಮದಲ್ಲಿರುವ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆಂದು ಆಗಮಿಸಿದ ಸಾವಿರಾರು ಭಕ್ತರಿಗೆ ವರದಶ್ರೀ ಫೌಂಡೇಶನ್ ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ನದಿಯ ದಂಡೆಯಲ್ಲಿ ಸೇರಿದ ಸಾವಿರಾರು ಜನ ಭಕ್ತರಿಗೆ ಉಚಿತ ಕಡಲೆ ಹಿಟ್ಟಿನ ಪ್ಯಾಕೆಟ್ ನೀಡುವ ಮೂಲಕ ನದಿ ಸಂರಕ್ಷಣೆ ಜಾಗೃತಿ ಮೂಡಿಸಲಾಯಿತು. ನದಿಯ ಪಾವಿತ್ರೃ ಮತ್ತು ಶುದ್ಧತೆ ಬಗ್ಗೆ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಂಡೇಶನ್ ಸಂಸ್ಥೆ ಹಮ್ಮಿಕೊಂಡಿದೆ‌ ಎಂದು ಸಂಸ್ಥೆಯ […]

Continue Reading

ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಚಿತ್ತಾಪುರಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಜಿಲ್ಲಾ ಪೊಲೀಸ್, ಶಹಾಬಾದ ಉಪವಿಭಾಗ ಮತ್ತು ವಾಡಿ. ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೆ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವದು ದುರಂತ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದ ಲಿಂಕ್’ಗಳನ್ನು ತೆರೆಯುವುದು, ಆನ್’ಲೈನ್ ಗೇಮ್’ಗಳು ಆಡುವುದು, […]

Continue Reading

ಡಿ.9 ರಂದು ಭೀಮನಹಳ್ಳಿ ಮಂದಿರ ಉದ್ಘಾಟನೆ: ಡಾ.ಸಿದ್ಧತೋಟೇಂದ್ರ ಶ್ರೀ ಗುರುವಂದನೆ

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಾಲವಾರದ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಗುರುವಂದನಾ ಹಾಗೂ ರಜತ ಕಿರೀಟ ಸಮರ್ಪಣಾ ಸಮಾರಂಭ ಡಿ.9 ರಂದು ಮಂಗಳವಾರ ಅದ್ಧೂರಿಯಾಗಿ ನಡೆಯಲಿದೆ ಎಂದು ಶಿವಲಿಂಗ ಕೊಳ್ಳಿ ಭೀಮನಹಳ್ಳಿ ಹೇಳಿದ್ದಾರೆ. ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಯ್ಯಾಳಲಿಂಗ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವದ ಸಾನಿಧ್ಯವಹಿಸಲಿರುವ ನಾಲವಾರ ಪೂಜ್ಯರಿಗೆ ಸಕಲ ಸದ್ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ […]

Continue Reading

ಪ್ರತಿಯೊಬ್ಬರು ವಿಮೆ ಸೌಲಭ್ಯ ಪಡೆದುಕೊಳ್ಳಿ: ರವಿಗೌಡ‌

ಸುದ್ದಿ ಸಂಗ್ರಹ ಚಿತ್ತಾಪುರಬ್ಯಾoಕ್’ಗಳು ನೀಡುವ ಸೌಲಭ್ಯಗಳ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಾರ್ಗದರ್ಶಿ (ಲೀಡ್) ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವಿಗೌಡ ಹೇಳಿದರು. ಸಮೀಪದ ರಾವೂರ ಗ್ರಾಮದದಲ್ಲಿ ಎಸ್’ಬಿಐ ಬ್ಯಾoಕ್ ವತಿಯಿಂದ ನಡೆದ ವಿಮೆ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಾವು ಸಂಭವಿಸುವದು ನಾವು ನೋಡುತ್ತೆವೆ. ಸಾವು ಅನಿರೀಕ್ಷಿತ ಇಂತಹ ಸಂದರ್ಭದಲ್ಲಿ ಬ್ಯಾoಕ್ ಖಾತೆ ತೆಗೆದು ವಿಮೆ ಮಾಡಿಸಿದ್ದರೆ ಜೀವ ಕಳೆದುಕೊಂಡ ನಾಮಿನಿ ಅವರಿಗೆ ವಿಮೆಯ ಹಣ ಬರುವುದರಿಂದ ಅವರ ಜೀವನಕ್ಕೆ ಭದ್ರತೆ ಸಿಗುತ್ತದೆ. […]

Continue Reading

ವಾಡಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಮೋದಿ ಧ್ವಜಾರೋಹಣದ ಭಕ್ತಿಯ ಸಂಭ್ರಮಾಚರಣೆ

ವಾಡಿ: ಪಟ್ಟಣದ ಸಮೀಪದ ಕೊಂಚುರಿನ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಮುಖಂಡರು ಅಯೋಧ್ಯೆಯ ರಾಮಮಂದಿರದಲ್ಲಿ ಮೋದಿ ಅವರು ಐತಿಹಾಸಿಕ ಭಗವಧ್ವಜಾರೋಹಣ ನೆರವೇರಿಸಿದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಅಯೋಧ್ಯೆಯಲ್ಲಿನ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಂದಿನ ಪವಿತ್ರ ದಿನದಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿ, ನಿರ್ಮಾಣ ಕಾರ್ಯದ ಪೂರ್ಣತೆಯನ್ನು ಅಧಿಕೃತವಾಗಿ ಘೋಷಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ ಎನಿಸುತ್ತಿದೆ. […]

Continue Reading

ಆಧ್ಯಾತ್ಮದ ಬದುಕೆ ನಿಜವಾದ ಬದುಕು: ಡಾ.ಶಾಂತಸೋಮನಾಥ ಶಿವಾಚಾರ್ಯರು

ಕಾಳಗಿ: ವರ್ತಮಾನದ ದಿನಗಳಲ್ಲಿ ಮನುಷ್ಯರುಆಧ್ಯಾತ್ಮದ ಬಾಹ್ಯ ಪ್ರಪಂಚದ ಬದುಕೆ ನಿಜವಾದ ಬದುಕು ಎಂದು ಮುಂಗಲಗಿ- ತೆಂಗಳಿಯ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಂಗಲಗಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಗುರುವಾರ ಸಂಜೆ ಕಾರ್ತಿಕ ಮಾಸದ ಚೆಟ್ಟಿ ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಂತೇಶ್ವರ ಹಿರೇಮಠದಲ್ಲಿ ಕಳೆದ ಎರಡು ವರ್ಷದಿಂದ ಕಾರ್ತಿಕ ದೀಪೋತ್ಸವ ಆಚರಿಸಲಾಗುತ್ತಿದೆ, ಕಾರ್ತಿಕ ಮಾಸದಲ್ಲಿ ಕತ್ತಲೆ ಬಹಳ ಇರುತ್ತೆ, ಇದು ಬಹಿರಂಗದ ಕತ್ತಲೆಯಾದರೆ ಮಾನವನ ಅಂತರಂಗದಲ್ಲಿ […]

Continue Reading

ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ: ಡಾ.ಸಿದ್ಧತೋಟೇಂದ್ರ ಶ್ರೀ

ಚಿತ್ತಾಪುರ: ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆ ಮರೆಸುವ ಶಕ್ತಿಯಿದೆ, ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು. ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀಮಠದ ಸಿದ್ಧತೋಟೇಂದ್ರ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ದಾಸರ ಹಾಡುಗಳು, ಸರ್ವಜ್ಞರ ತ್ರಿಪದಿಗಳು, ಸ್ವರ ವಚನಗಳಿಗೆ ಭಾವಗೀತೆಗಳಿಗೆ ಸಂಗೀತ […]

Continue Reading

ವನ್ಯಜೀವಿಗಳಿಂದ ಮಾತ್ರ ಜಗದ ಉಳಿವು: ವಿಜಯಕುಮಾರ ಬಡಿಗೇರ್

ಚಿತ್ತಾಪುರ: ಜಗದ ಉಳಿವು ವನ್ಯಜೀವಿಗಳನ್ನು ಅವಲಂಬಿಸಿವೆ. ಅವುಗಳ ನಾಶವಾದರೆ ನಮಗೆ ಉಳಿಗಾಲವಿಲ್ಲ ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು. ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿ, ಚಿತ್ತಾಪುರ ವಲಯ ಅರಣ್ಯ ವಿಭಾಗ ಮತ್ತು ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ವತಿಯಿಂದ ಲುoಬಿನಿ ಟ್ರಿ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿ ಒಂದು ಅದ್ಭುತ ಸೃಷ್ಟಿ, ಅದರಲ್ಲಿ ಅರಣ್ಯಗಳು ಹಾಗೂ ವನ್ಯಜೀವಿಗಳ […]

Continue Reading