ಚಳಿಗೆ ಬಿಸಿಬಿಸಿಯಾಗಿ ತಿನ್ನಬೇಕು ಅಂತಾ ಅನಿಸುತ್ತಾ ? ಅಪ್ಪಿತಪ್ಪಿಯೂ ಸಂಜೆ 6 ಗಂಟೆಯ ನಂತರ ಈ ಆಹಾರಗಳು ತಿನ್ನಬೇಡಿ

ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಖಾರವಾದ ಸ್ನಾಕ್ಸ್ ತಿನ್ನಬೇಕೆಂದು ಅನಿಸುವುದು ಸಹಜ. ಅದರಲ್ಲಿಯೂ ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ, ಮನಸ್ಸು ಸಮೊಸಾ, ಪಕೋಡಾ, ಬಜ್ಜಿ ಹೀಗೆ ಕರಿದ ತಿನಿಸುಗಳತ್ತ ಹೋಗುತ್ತದೆ. ಆದರೆ ನಿಮಗೆ ಗೊತ್ತಾ, ಈ ಆಹಾರಗಳ ತಿನ್ನುವ ಸಮಯ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಜೆ 6 ಗಂಟೆಯ ನಂತರ ನೀವು ಸೇವಿಸುವಂತಹ ಆಹಾರ ನಿಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. […]

Continue Reading

ಸ್ವಾಭಿಮಾನ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಸರ್ವ ಬಾಂಧವರಿ ಧನ್ಯವಾದಗಳು

ಸುದ್ದಿ ಸಂಗ್ರಹ ಕಲಬುರಗಿಸಮಾಜದ ಗುರುಗಳ ಸಾನಿಧ್ಯದಲ್ಲಿ ನಡೆದಂತ ಕೋಲಿ ಕಬ್ಬಲಿಗ ಎಸ್’ಟಿ ಸೇರ್ಪಡೆಗೆ ನಡೆದ ಸ್ವಾಭಿಮಾನ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲೆ, ತಾಲೂಕು ಮತ್ತು ಪ್ರತಿಯೊಂದು ಹಳ್ಳಿಗಳಿಂದ ಆಗಮಿಸಿದ ಸಮಾಜ ಬಾಂಧವರು ಯಾವುದೆ ಭೇದ-ಭಾವ, ನಾನು-ನೀನು ಎನ್ನದೆ ಸಮಾಜದ ಸ್ವಾಭಿಮಾನದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಭಿಮಾನದ ಸಿಂಹ ದಿವಂಗತ ವಿಠ್ಠಲ ಹೇರೂರು ಅವರ ಕನಸನ್ನು ನನಸು ಮಾಡಲು ಸಮಯ ಲೆಕ್ಕಿಸದೆ ಸ್ವ-ಇಚ್ಛೆಯಿಂದ ಆಗಮಿಸಿ ಕಲಬುರಗಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸುವಂತೆ ಮಾಡಿದ ಸಮಾಜ ಬಾಂಧವರಿಗೆ ಚಿತ್ತಾಪುರ ತಾಲೂಕ ಯುವ ಕೋಲಿ […]

Continue Reading

ಕುವೆಂಪು ಸಂದೇಶ ಸಮಾಜಕ್ಕೆ ದಾರಿ: ಶರಣಬಸಪ್ಪ ಕೋಬಾಳ

ಸುದ್ದಿ ಸಂಗ್ರಹ ಶಹಾಬಾದ್ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಷ್ಟಕವಿ ಕುವೆಂಪು ಜಗತ್ತಿಗೆ ಸಾರಿದ ವಿಶ್ವ ಮಾನವ ಸಂದೇಶ ಪರಿಕಲ್ಪನೆಯೂ ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದು ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಹೇಳಿದರು. ನಗರದ ಲಕ್ಷ್ಮಿಗಂಜ ಬಡಾವಣೆಯ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಮಾನವ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸಋಷಿ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ವಿಶ್ವ […]

Continue Reading

ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಚಿತ್ತಾಪುರಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಜಿಲ್ಲಾ ಪೊಲೀಸ್, ಶಹಾಬಾದ ಉಪವಿಭಾಗ ಮತ್ತು ವಾಡಿ. ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೆ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವದು ದುರಂತ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದ ಲಿಂಕ್’ಗಳನ್ನು ತೆರೆಯುವುದು, ಆನ್’ಲೈನ್ ಗೇಮ್’ಗಳು ಆಡುವುದು, […]

Continue Reading

ಶಹಾಬಾದ: ಹಳೆ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಕೊಡುಗೆ‌

ಸುದ್ದಿ ಸಂಗ್ರಹ ಶಹಾಬಾದನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದಲ್ಲಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ 1997-98ನೇ ಸಾಲಿನ ವಿದ್ಯಾರ್ಥಿಗಳು ಶಾಲೆಗೆ 3 ಕಂಪ್ಯೂಟರ್‌’ಗಳು ಕೊಡುಗೆಯಾಗಿ ನೀಡಿದರು.‌ ಕೊಡುಗೆ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಮುತ್ತಟ್ಟಿ, ಹಳೆಯ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದ ನಡುವೆ ಶಾಲೆಯನ್ನು ನೆನಪಿಸಿಕೊಂಡು, ಹಳೆಯ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ನೆರವಾಗುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯಲು ಇಂತಹ ವಿದ್ಯಾರ್ಥಿಗಳ ಪ್ರೇರಣೆಯೆ ಕಾರಣ ಎಂದರು. ಸಂಸ್ಥೆಯ […]

Continue Reading

ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರ: ಮುಡುಬಿ ಗುಂಡೇರಾವ

ಸುದ್ದಿ ಸಂಗ್ರಹ ಕಲಬುರಗಿ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಆಳಿದ ಪುಣ್ಯ ನೆಲ, ಪ್ರಾಚೀನ ಕಾಲದಿಂದಲೂ ಕರ್ನಾಟಕಕ್ಕೆ ಸಗರನಾಡಿನ ಕೊಡುಗೆ ಅಪಾರವಾಗಿದೆ ಎಂದು ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು. ಜಿಲ್ಲೆಯ ಜೇವರ್ಗಿ ಪಟ್ಟಣದ ಹನುಮಾನ ಮಂದಿರದ ಪರಿಸರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಹಮ್ಮಿಕೊಂಡಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -46 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಗರನಾಡಿನಲ್ಲಿ ದೊರೆಯುವ ಪಾಚೀನ ಸ್ಮಾರಕಗಳು, ಕೋಟೆಕೊತ್ತಲಗಳು, ದೇವಾಲಯಗಳು, ಶಾಸನ, ವೀರಗಲ್ಲುಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಕಲ್ಯಾಣ […]

Continue Reading

ಪ್ಯಾಕೆಟ್​ ಹಾಲಿನಿಂದಲೆ ತಿಂಗಳಿಗೆ 1 ಕೆಜಿ ಬೆಣ್ಣೆ ತೆಗೆಯಬಹುದು, ಆ ಸಿಂಪಲ್​ ಟ್ರಿಕ್​​​ ಇಲ್ಲಿದೆ

ಅಡುಗೆಯಲ್ಲಿ ಬೆಣ್ಣೆಯ ಬಳಕೆ ಸಾಮಾನ್ಯ. ಬೆಳಗ್ಗೆ ತಿಂಡಿ, ರೊಟ್ಟಿ ಅಥವಾ ಇತರ ಖಾದ್ಯಗಳಲ್ಲಿ ಬೆಣ್ಣೆ ಹಚ್ಚಿ ಸವಿಯುವುದು ಎಲ್ಲರಿಗೂ ಇಷ್ಟ. ಆದರೆ ಅಂಗಡಿಯಲ್ಲಿ ಖರೀದಿಸುವ ಬೆಣ್ಣೆ ಗಟ್ಟಿಯಾಗಿರುವುದರಿಂದ ನೈಜ ರುಚಿ ಸಿಗುವುದಿಲ್ಲ. ಫ್ರಿಡ್ಜ್‌ನಲ್ಲಿ ತಿಂಗಳುಗಳ ಕಾಲ ಇಟ್ಟು ಬಳಸುವುದು ಸಹ ರುಚಿ ಕಡಿಮೆ ಮಾಡುತ್ತದೆ. ನಿತ್ಯ ಖರೀದಿಸುವ ಪ್ಯಾಕೆಟ್ ಹಾಲಿನಿಂದ ಮನೆಯಲ್ಲಿ ತಾಜಾ ಬೆಣ್ಣೆ ತಯಾರಿಸಬಹುದು, ಹೇಗೆ ಅಂತ ನೋಡಿ. ಸಾಮಾನ್ಯವಾಗಿ ಹಳ್ಳಿಗಳ ಕಡೆ ಹಸು, ಎಮ್ಮೆ ಹಾಲಿನಿಂದ ಬೆಣ್ಣೆ ಮಾಡುವುದು ನೋಡಿರುತ್ತೆವೆ. ಆದರೆ ಪ್ಯಾಕೆಟ್​ ಹಾಲಿನಿಂದಲೂ […]

Continue Reading

ಶಹಾಬಾದ: ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ

ಸುದ್ದಿ ಸಂಗ್ರಹ ಶಹಾಬಾದಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಕ.ರಾ.ಕಾ.ನಿ ಪ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಗುರುವಾರ ಘೋಷಿಸಿದರು. ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಮತದಾರ ಪತ್ರರ್ಕರಿಗೆ ಕೃತಜ್ಞತೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಕ.ರಾ.ಕಾ.ನಿ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರ ನಿರ್ದೇಶನದ ಮೇರೆಗೆ ತಾಲೂಕ ಪದಾಧಿಕಾರಿಗಳ ಹೆಸರುಗಳು ಘೋಷಿಸಿದರು. ಕೆ.ರಮೇಶ ಭಟ್ (ಅಧ್ಯಕ್ಷ), ಶಿವಕುಮಾರ ಕುಸಾಳೆ, ನಾಗರಾಜ ದಂಡಾವತಿ (ಉಪಾಧ್ಯಕ್ಷ), […]

Continue Reading

ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗ: ಹೊಸ ವಿಶ್ವ ದಾಖಲೆ ಬರೆದ ಚೀನಾದ ‘ಮ್ಯಾಗ್ಲೆವ್’ ರೈಲು

ಬೀಜಿಂಗ್: ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತನ್ನೆ ಬೆರಗುಗೊಳಿಸುವ ಚೀನಾ, ಇದೀಗ ಸಾರಿಗೆ ಕ್ಷೇತ್ರದಲ್ಲಿ ಅಸಾಧ್ಯವಾದದ್ದು ಸಾಧಿಸಿ ತೋರಿಸಿದೆ. ಚೀನಾದ ಅತ್ಯಾಧುನಿಕ ಮ್ಯಾಗ್ಲೆವ್ (ಮ್ಯಾಗ್ನೆಟಿಕ್ ಲೆವಿಟೇಶನ್) ರೈಲು ಕೇವಲ 2 ಸೆಕೆಂಡ್‌ಗಳಲ್ಲಿ 700 ಕಿಲೋಮೀಟರ್ ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಏನಿದು ಪ್ರಯೋಗ ?ಚೀನಾದ ‘ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿ’ಯ ಸಂಶೋಧಕರು ಈ ಪ್ರಯೋಗ ನಡೆಸಿದ್ದಾರೆ. ಸುಮಾರು 1 ಟನ್ (1,000 ಕೆಜಿ) ತೂಕದ ವಾಹನ ಮ್ಯಾಗ್ಲೆವ್ ಟ್ರ್ಯಾಕ್ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿದೆ. 400 ಮೀಟರ್ […]

Continue Reading

ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ: ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಜನರಿಗೆ ಗಾಯ

ಸುದ್ದಿ ಸಂಗ್ರಹ ಹಾಸನ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಬಸ್ ಚಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಬೈಪಾಸ್‌ನಲ್ಲಿ ನಡೆದಿದೆ. ಶನಿವಾರ ರಾತ್ರಿ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗಾಯಾಳುಗಳ ಪೈಕಿ 13 ಜನ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಉಳಿದವರಿಗೆ ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಬಸ್ ಹಾಗೂ ಲಾರಿ ಬೆಂಗಳೂರಿನಿಂದ ಹಾಸನದ […]

Continue Reading