ಚಿತ್ತಾಪುರ: ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಸಿಟಿಎಸ್‌ಎಸ್‌ಐಎ ಮನವಿ

ಸುದ್ದಿ ‌ ಸಂಗ್ರಹ ಚಿತ್ತಾಪುರ ತಾಲೂಕು ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕೆಎಸ್‌ಎಸ್‌ಐಡಿಸಿ’ಯ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರಿಗೆ, ಚಿತ್ತಾಪುರ ಪೇಟೆಯ ಸರ್ವೆ ನಂ. 112/2 ಮತ್ತು 113ರ ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರಮುಖ ಬೇಡಿಕೆಗಳು ಒಳ ರಸ್ತೆಗಳ ಅಭಿವೃದ್ಧಿ, ಭೂಗತ ಒಳಚರಂಡಿ, ಮಳೆ ನೀರು ಹರಿಸುವ ಚರಂಡಿ ವ್ಯವಸ್ಥೆ, ನೀರಿನ ಸರಬರಾಜು ಪೈಪ್‌ ಲೈನ್,ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಬೀದಿ ದೀಪ ಅಳವಡಿಕೆ, ಬಾಕಿ ಇರುವ ಮಾರಾಟ ಪತ್ರಗಳ […]

Continue Reading

ಕಾಳಗಿ ಬಸ್ ನಿಲ್ದಾಣದ ನಾಮಫಲಕದ ಅಕ್ಷರಗಳು ಕಳಚಿಬಿದ್ದಿವೆ

ಸುದ್ದಿ ಸಂಗ್ರಹ ಕಾಳಗಿಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ಕ್ಕೆ ಸೇರಿರುವ ಕಾಳಗಿ ತಾಲೂಕು ಕೇಂದ್ರದ ಹೊಸ ಬಸ್ ನಿಲ್ದಾಣದಲ್ಲಿ ಹಾಕಿರುವ ನಾಮಫಲಕದಲ್ಲಿನ ಅಕ್ಷರಗಳು ಕಳಚಿಬಿದ್ದಿವೆ. ನಿಲ್ದಾಣದ ಮುಖ್ಯದ್ವಾರದ ಮೇಲೆ ಕನ್ನಡ ಅಕ್ಷರಗಳಿಂದ ಬಸ್ ನಿಲ್ದಾಣದ ಹೆಸರು ಬರೆಯಲಾಗಿದೆ. ಹೆಸರಿನಲ್ಲಿ ಕೆಲ ಅಕ್ಷರಗಳು ಕಳಚಿ ಬಿದ್ದು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಪರಿಣಾಮ ನಾಮಫಲಕದ ಕನ್ನಡ ಶಬ್ದಗಳು ತಪ್ಪಾಗಿ ಕಾಣಿಸುತ್ತಿದ್ದು ಓದುಗರಿಗೆ ಮುಜುಗರ ಎನಿಸುತ್ತಿದೆ. ನಾಮಫಲಕದ ಅಕ್ಷರಗಳು ಜೋಡಿಸಿ ಸರಿಪಡಿಸುವಂತೆ ಓದುಗರು ಆಗ್ರಹಿಸಿದ್ದಾರೆ.

Continue Reading

ಬೂತ್‌ಗಳಿಗೆ ಬಿಜೆಪಿ ಮುಖಂಡರ ಭೇಟಿ: ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಗೊಳಿಸಲು ಕರೆ

ಸುದ್ದಿ ಸಂಗ್ರಹ ವಾಡಿ ಮತದಾರರ ಪಟ್ಟಿ ಪರಿಷ್ಕರಣೆ ಅತ್ಯಂತ ಯಶಸ್ವಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಮುಗಿಸುವುದು ಬೂತ್ ಅಧಿಕಾರಿಗಳಿಗೆ ಅನಿವಾರ್ಯವಾಗಿದೆ ಎಂದು ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ವಿವಿಧ ಬೂತ್‌ಗಳಿಗೆ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರ ಅವರೊಂದಿಗೆ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿ, ಯಾವುದೆ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ […]

Continue Reading

ಚಿತ್ತಾಪುರದಲ್ಲಿ ಶೇ.98.22 ಅರ್ಜಿ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣೆ

ಸುದ್ದಿ ಸಂಗ್ರಹ ಚಿತ್ತಾಪುರರಾಜ್ಯ ಚುನಾವಣೆ ಆಯೋಗದಿಂದ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಗುರುವಾರದವರೆಗೆ ಒಟ್ಟು ಶೇ. 98.22 ಅರ್ಜಿ ವಿತರಿಸಲಾಗಿದೆ. ಮತಕ್ಷೇತ್ರದ ವ್ಯಾಪ್ತಿಯ 257 ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಒಟ್ಟು 2,51,226 ಮತದಾರರ ಪೈಕಿ 2,46,751 ಮತದಾರರಿಗೆ ಅರ್ಜಿ ವಿತರಣೆ ಮಾಡಿದ್ದಾರೆ. ಜೂ.30 ರಿಂದ ಗುರುವಾರದವರೆಗೆ ಒಟ್ಟು 16,718 ಮತದಾರರು ತಮಗೆ ಕೊಟ್ಟಿರುವ ಅರ್ಜಿಗಳನ್ನು ಭರ್ತಿ ಮಾಡಿಕೊಟ್ಟಿದ್ದು ಡಿಜಿಟಲೈಜ್ ಮಾಡಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ. ಮತದಾರರಿಗೆ ಕೊಟ್ಟಿರುವ ಅರ್ಜಿಯ […]

Continue Reading

ಮೋಟಾರ್ ಪಂಪ್ ಕಳ್ಳತನ, ಇಬ್ಬರು ಆರೋಪಿಗಳ ಬಂಧನ

ಸುದ್ದಿ ಸಂಗ್ರಹ ಚಿತ್ತಾಪುರಪಾಲಿಶ್ ಮಷಿನ್ ಒಂದರಲ್ಲಿ ಮೋಟಾರ್ ಪಂಪ್ ಕಳ್ಳತನವಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…..ಪಟ್ಟಣದ ಆಶ್ರಯ ಬಡಾವಣೆಯ ಮಂಜುನಾಥ ಅಲಿಯಾಸ್ ಆಂಜನೇಯ ಚಂದಪ್ಪ ಹೇಳವರ (30), ಭೀಮಣ್ಣ ರಾಮಪ್ಪ ಹೇಳವರ (38) ಎಂಬುವರೆ ಬಂಧಿತ ಆರೋಪಿಗಳು. ಪಟ್ಟಣದ ಸೈಯದ್ ನಾಸಿರ್ ಬಶೀರಮಿಯ್ಯ ಎಂಬುವರ ಪಾಲಿಶ್ ಮಶಿನ್‌ನಲ್ಲಿ ಜು.2ರಂದು 3 ಮೋಟಾರ್ ಪಂಪ್ ಕಳ್ಳತನವಾಗಿದ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಶುರು ಮಾಡಿ ಆರೋಪಿಗಳ ಪತ್ತೆಗೆ […]

Continue Reading

ಬೆಳೆ ವಿಮೆ ನೋಂದಣಿ ಮಾಡಿಸಿ: ಸಂಜೀವಕುಮಾರ ಮಾನಕರ‌‌

ಸುದ್ದಿ ಸಂಗ್ರಹ ಚಿತ್ತಾಪುರಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕೈಗೊಂಡಿರುವ ರೈತರು ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ ತಿಳಿಸಿದ್ದಾರೆ. ಮಳೆ ಅಭಾವ, ಹೆಚ್ಚಿನ ಮಳೆ, ಬರ, ಪ್ರವಾಹ, ಭೂಕುಸಿತ, ಬೆಳೆ ಮುಳುಗಡೆ ಸೇರಿದಂತೆ ಇತರೆ ಪ್ರಾಕೃತಿಕ ವಿಕೋಪಗಳಿಂದ ಬೆಳೆಗೆ ಹಾನಿಯಾದರೆ ರೈತರಿಗೆ ವಿಮಾ ಪರಿಹಾರ ದೊರೆಯಲಿದೆ. ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಎಕರೆಗೆ 321 ರೂ, ಉದ್ದು ಪ್ರತಿ ಎಕರೆಗೆ 314 ರೂ, ತೊಗರಿ […]

Continue Reading

ವರದಕ್ಷಿಣೆ ಕಿರುಕುಳ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಸುದ್ದಿ ಸಂಗ್ರಹ ಚಿತ್ತಾಪುರವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪಟ್ಟಣದಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೀಜಾ ಅಬ್ದುಲ್ ಹುಸೇನ್ ಶೇಖ್ (24) ಆತ್ಮಹತ್ಯೆಗೆ ಶರಣಾದವರು. ರಮೀಜಾ ಪತಿ ಅಬ್ದುಲ್ ಹುಸೇನ್ ಶೇಖ್, ಅತ್ತೆ ಸಾಹೇರಾ ಬಾನು, ಅಜ್ಜಿ ಹಫೀಜಾ, ಪತಿಯ ಅಣ್ಣನ ಪತ್ನಿ ನಿಶಾದ್ ಅಬ್ದುಲ್ ಗಫೂರ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಶೇಖ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ವಿವರ: 5 ರ್ಷಗಳ ಹಿಂದೆ ಅಬ್ದುಲ್‌ ಜೊತೆ ರಮೀಜಾ […]

Continue Reading

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ದೇವಿಂದ್ರ ಅರಣಕಲ್

ಸುದ್ದಿ ಸಂಗ್ರಹ ಚಿತ್ತಾಪುರ ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರಅರಣಕಲ್ ಹೇಳಿದರು. ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಸಂಘದ ಕಚೇರಿ ಹತ್ತಿರ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸಹಕಾರ ಸಚಿವಾಲಯ 5 ವರ್ಷ ಪೂರೈಸುತ್ತಿರುವ ನಿಮಿತ್ತ ಸಹಕಾರ ಸಪ್ತಾಹ ಆಚರಣೆ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರ ಸಪ್ತಾಹದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ಪರಿಸರ ಉಳಿಸಿ […]

Continue Reading

ವಾಡಿ ಪುರಸಭೆ: ಹಣಕಾಸಿನ ಅವ್ಯವಹಾರ, ತನಿಖೆಗೆ ಆಗ್ರಹ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಪುರಸಭೆಯ ಹಣಕಾಸು ವರ್ಷ 2024-25ರ ಅಧಿಕೃತ ಆಡಿಟ್ ವರದಿಯಲ್ಲಿ ತೀವ್ರ ಆಘಾತಕಾರಿ ಸಂಗತಿ ಮತ್ತು ನಿಯಮಬಾಹಿರವಾಗಿ ಆರ್ಥಿಕ ನಡವಳಿಕೆ ಪತ್ತೆಯಾಗಿವೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆರೋಪಿಸಿ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರು. ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಾದ ‘ರಿತೇಶ್ ಗಾಂಧಿ ಅಂಡ್ ಅಸೋಸಿಯೇಟ್ಸ್’ ನಡೆಸಿರುವ ಶಾಸನಬದ್ಧ ಆಡಿಟ್ ವರದಿಯ ಪ್ರಕಾರ ಉಲ್ಲೇಖಿತ ದಾಖಲೆಗಳು ಮತ್ತು ಸಾರ್ವಜನಿಕ ಹಣದ ದುರುಪಯೋಗ ಮತ್ತು ಆಡಳಿತಾತ್ಮಕ ವೈಫಲ್ಯ ಎದ್ದುಕಾಣುತ್ತಿದೆ. ಆಡಿಟ್ ವರದಿಯಲ್ಲಿ […]

Continue Reading

ತಿನ್ನುವ ಆಹಾರದ ಮೇಲೆ ನಿಯಂತ್ರಣವಿರಲಿ: ವೀರಭದ್ರಪ್ಪ ಆರ್.ಕೆ

ಸುದ್ದಿ ಸಂಗ್ರಹ ವಾಡಿ ಅಡುಗೆ ರುಚಿಯಾಗಿದೆ ಎಂದು ಸಿಕ್ಕಾಪಟ್ಟೆ ತಿಂದರೆ ಹೊಟ್ಟೆಯೊಳಗಿನ ಜಠರ ಪಚನಕ್ರಿಯೆ ನಿಲ್ಲಿಸುತ್ತದೆ. ತಿನ್ನುವ ಆಹಾರದ ಮೇಲೆ ನಿಯಂತ್ರಣವಿಲ್ಲದಿದ್ದರೆ ಆರೋಗ್ಯ ಹದಗೆಟ್ಟು ಜೀವಾಪಾಯ ಉಂಟಾಗುತ್ತದೆ ಎಂದು ಪ್ರಗತಿಪರ ಚಿಂತಕ, ಶಿಕ್ಷಕ ವೀರಭದ್ರಪ್ಪ ಆರ್.ಕೆ ಹೇಳಿದರು. ಪಟ್ಟಣದ ಮುನಿಯಪ್ಪ ದಾಸ್ ಶಾಲೆಯ ಮೈದಾನದಲ್ಲಿ ಬೆಳಗಿನ ಬಳಗ, ಪುರಸಭೆ ಹಾಗೂ ಪತಂಜಲಿ ಯೋಗ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬರುವ ಮೊದಲು ಯೋಗ ಅಭ್ಯಾಸ ರೂಢಿಸಿಕೊಳ್ಳಬೇಕು. […]

Continue Reading