ಶಹಾಬಾದ್: ಡಾ.ಅಂಬೇಡ್ಕರ್ ಹಬ್ಬ ನಾಳೆ

ಸುದ್ದಿ ಸಂಗ್ರಹ ಶಹಾಬಾದ್ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವವನ್ನು ಅಂಬೇಡ್ಕರ್ ಹಬ್ಬ ಎಂದು ಮೇ.26 ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಮುಖಂಡ ಮರಿಯಪ್ಪ ಹಳ್ಳಿ ಮತ್ತು ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ ಹೇಳಿದರು. ನಗದದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ ಅಂಬೇಡ್ಕರ್ 135ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 2 ಗಂಟಗೆ ಬಸವೇಶ್ವರರ ವೃತ್ತದಿಂದ ಹೈ ಸ್ಕೂಲ್ ಮೈದಾನದವರೆಗೆ (ಡಿ.ಜೆ ಹೊರತುಪಡಿಸಿ) ಸಾಂಸ್ಕೃತಿಕ ಕಲಾ ತಂಡದಿಂದ […]

Continue Reading

ಕಾಳಗಿ: ಡಯಾಲಿಸಿಸ್ ಸೇವಾ ಘಟಕ ಆರಂಭ

ಸುದ್ದಿ ಸಂಗ್ರಹ ಕಾಳಗಿಸುತ್ತಲಿನ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ‘ಡಯಾಲಿಸಿಸ್ ಸೇವಾ ಘಟಕ’ ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಇಟ್ಟಿದೆ’ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಹೇಳಿದರು. ಈಚೆಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಚಿಂಚೋಳಿ, ಚಿತ್ತಾಪುರ, ಕಮಲಾಪುರ ಮತ್ತು ಸೇಡಂ ತಾಲೂಕಿಗೆ ಹೊಂದಿಕೊಂಡಿರುವ ಕಾಳಗಿ ಪ್ರಸ್ತುತ 30 ಹಾಸಿಗೆಯ ಸಿಎಚ್‌ಸಿ ಆಸ್ಪತ್ರೆ ಹೊಂದಿದೆ. ಆದರೆ ಬೇರೆ ತಾಲೂಕಿಗಿಂತ ಇಲ್ಲಿ ರೋಗಿಗಳ […]

Continue Reading

ನಾಳೆ ಪದ್ಮ ಪ್ರಶಸ್ತಿ ಪ್ರದಾನ: ರಾಜ್ಯದ 8 ಮಂದಿ ಸೇರಿ 131 ಸಾಧಕರಿಗೆ ರಾಷ್ಟ್ರಪತಿಗಳಿಂದ ಗೌರವ

ಸುದ್ದಿ ಸಂಗ್ರಹ ನವದೆಹಲಿಕರ್ನಾಟಕದ 8 ಸಾಧಕರು ಸೇರಿ 2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ 131 ಮಂದಿಗೆ ನಾಳೆ (ಮೇ 25) ರಾಷ್ಟ್ರಪತಿ ದ್ರೌದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೋಮವಾರ (ಮೇ 25) ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿಗಳು ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನ ಸಾಧಕರಿಗೆ ಪ್ರದಾನ ಮಾಡಲಿದ್ದಾರೆ. ಈ ವರ್ಷ ಒಟ್ಟು 131 ಸಾಧಕರು ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟು 5 […]

Continue Reading

ವಾಡಿ: ಬಿಜೆಪಿ ಮುಖಂಡರಿಂದ ಕಾಮಗಾರಿ ವೀಕ್ಷಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಪುರಸಭೆಯ 15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ವಾರ್ಡ್‌ ಸಂಖ್ಯೆ 2ರ ಚರಂಡಿ ಕಾಮಗಾರಿಯನ್ನು ಬಿಜೆಪಿ ಮುಖಂಡರು ಪರಿಶೀಲಿಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕಾಮಗಾರಿ ಬಗ್ಗೆ ಮಾತನಾಡಿ, ಪುರಸಭೆಗೆ ಕಳೆದ ಮೂರೂವರೆ ವರ್ಷಗಳಿಂದ ಚುನಾವಣೆ ನಡೆಯದ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಅನುದಾನ ವಾಪಸ್ ಹೋಗತ್ತಿದೆ. 24 ರಿಂದ 26ರ ವರೆಗೆ 4.58 ಕೋಟಿ ಅಭಿವೃದ್ಧಿ ಹಣ ಕೈತಪ್ಪಿದ ಮಾಹಿತಿ ಬಂದಿದೆ ಎಂದರು. ಸುಮಾರು […]

Continue Reading

ಮರಕ್ಕೆ ಕಾರು ಡಿಕ್ಕಿ: ದಸ್ತಾಪುರ ಗ್ರಾಮದ ಇಬ್ಬರು ಸಾವು

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ವಚ್ಚಾ–ಮತ್ತಿಮೂಡ ಕ್ರಾಸ್ ನಡುವಿನ ರಾಜ್ಯ ಹೆದ್ದಾರಿ ಪಕ್ಕದ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಒಳಗಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾನೆ. ಕಾರಿನೊಳಗಿದ್ದ ಮೂವರು ಚಿಂಚೋಳಿ ತಾಲೂಕಿನವರಾಗಿದ್ದು, ದಸ್ತಾಪುರ ಗ್ರಾಮದ ಶಿವರಾಜ ಮಾರುತಿ ಓಂಕಾರ (24), ಅಣವಾರ ಗ್ರಾಮದ ಸಚಿನ ರಾಮಲಿಂಗ (30) ಮೃತರು. ಹೂವಿನಬಾವಿ (ಬಾಪುನಗರ) ಗ್ರಾಮದ ಶ್ರೀಕಾಂತ ಸುರೇಶ ಗಾಯಾಳು. ಕಾರು ಮರಕ್ಕೆ ಡಿಕ್ಕಿ ಹೊಡೆದ ಭೀಕರತೆ ಎಷ್ಟಿತ್ತೆಂದರೆ ಕಾರಿನ ಹಿಂಭಾಗದ ಚಕ್ರಗಳು ನೇತಾಡುತ್ತಿದ್ದವು. ಎಷ್ಟೊ ಸಮಯದ ವರೆಗೆ […]

Continue Reading

ಹಂಪಿಯಲ್ಲಿ ಪ್ರಾಚೀನ ಕಾಲದ ಒಳಚರಂಡಿ ವ್ಯವಸ್ಥೆ, ಆಳ್ವಾರ್ ಪ್ರತಿಮೆ ಪತ್ತೆ ಹಚ್ಚಿದ ASI

ಸುದ್ದಿ ಸಂಗ್ರಹ ಹಂಪಿ/ಹೊಸಪೇಟೆಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI), ಹಂಪಿ ವೃತ್ತವು, ಪ್ರಾಚೀನ ಒಳಚರಂಡಿ ವ್ಯವಸ್ಥೆಗಳಲ್ಲಿ ಒಂದನ್ನು ಪತ್ತೆಹಚ್ಚಿದೆ. ಶುಕ್ರವಾರ ಹಂಪಿಯಲ್ಲಿರುವ ಪ್ರಸಿದ್ಧ ಹಜಾರ ರಾಮ ದೇವಾಲಯದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಉತ್ಖನನದ ಸಮಯದಲ್ಲಿ ಈ ಒಳಚರಂಡಿ ಪತ್ತೆಯಾಗಿದೆ. ಐತಿಹಾಸಿಕ ದೇವಾಲಯ ಸಂಕೀರ್ಣದಲ್ಲಿ ASI ತಂಡ, ನಡೆಸುತ್ತಿರುವ ಉತ್ಖನನವು ಇನ್ನೂ ಎರಡು ಆಳ್ವಾರ್ ಶಿಲ್ಪಗಳ ಆವಿಷ್ಕಾರಕ್ಕೂ ಕಾರಣವಾಗಿದ್ದು, ಇದು ಇತ್ತೀಚಿನ ವಾರಗಳಲ್ಲಿ ಈ ಸ್ಥಳದಿಂದ ವರದಿಯಾದ ಮಹತ್ವದ ಸಂಶೋಧನೆಗಳ ಸರಣಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮೊದಲು, ದೇವಾಲಯದ ಆವರಣದಲ್ಲಿ ವೈಜ್ಞಾನಿಕ […]

Continue Reading

ಕೊರೋನಾ ಬಳಿಕ ಎಬೋಲಾ ಆತಂಕ: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಸುದ್ದಿ ಸಂಗ್ರಹ ಬೆಂಗಳೂರುವಿಶ್ವದಾದ್ಯಂತ ಕೊರೋನಾ ಬಳಿಕ ಇದೀಗ ಎಬೋಲಾ ಆತಂಕ ಎದುರಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಎಬೋಲಾ ಆತಂಕದ ಹಿನ್ನೆಲೆ ವಿಶ್ವಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಬೋಲಾ ಭಾದಿತ ದೇಶಗಳಿಂದ ಬರುವ ಜನರ ಮೇಲೆ […]

Continue Reading

ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ ಕುಳಿತ ಗ್ರಾಮಸ್ಥರು

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಬೆಳಗ್ಗೆಯಿಂದ ರಸ್ತೆಯ ಮಧ್ಯೆ ಟೆಂಟ್‌ ಹಾಕಿಕೊಂಡು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಶಹಾಬಾದ್‌ನಿಂದ ಜೇವರ್ಗಿಗೆ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ದಿನನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷಿಸಿದ್ದಾರೆ. ರಸ್ತೆ ನಿರ್ಮಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದ […]

Continue Reading

ಟ್ಯಾಂಕರ್– ಕ್ರೂಸರ್ ಡಿಕ್ಕಿ, ಐವರು ಸ್ಥಳದಲ್ಲೇ ಸಾವು

ಸುದ್ದಿ ಸಂಗ್ರಹ ಚಿತ್ತಾಪುರಟ್ಯಾಂಕರ್- ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿದ ಭೀಕರ‌ ಅಪಘಾತದಲ್ಲಿ ಐವರು ಸ್ಥಳದಲ್ಲೇ‌ ಮೃತಪಟ್ಟಿದ್ದಾರೆ. ತಾಲೂಕಿನ ಲಾಡ್ಲಾಪುರ- ಹಲಕರ್ಟಿ ಮಧ್ಯೆ ಶನಿವಾರ ಬೆಳಗಿನ ಜಾವ ಈ‌ ಅಪಘಾತ ಸಂಭವಿದೆ. ವಾಡಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ಈ‌ ಅಪಘಾತ ಜರುಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಯಾದಗಿರಿಯಿಂದ ಇಂಗಳಗಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ವಾಡಿಯಿಂದ ಯಾದಗಿರಿಗೆ ತೆರಳುತ್ತಿದ್ದ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಇಂಗಳಗಿ ಗ್ರಾಮದ ಐದು ಜನ ಮೃತಪಟ್ಟಿದ್ದು ಎಲ್ಲರೂ ಪರಸ್ಪರ ಸಂಬಂಧಿಕರಾಗಿದ್ದಾರೆ. […]

Continue Reading

ವಾಡಿ: ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕಳಚಿದೆ

ಸುದ್ದಿ ಸಂಗ್ರಹ ವಾಡಿನನೆಗುದಿಗೆ ಬಿದ್ದಿದ್ದ ಪಟ್ಟಣದ ಸುಸಜ್ಜಿತ ಮಾದರಿಯ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕಳಚಿದೆ. ನಾಲ್ಕೈದು ವರ್ಷಗಳಿಂದ ಕಮರವಾಡಿ ರಸ್ತೆಯ ಪಕ್ಕದ 2 ಎಕರೆ ಪ್ರದೇಶದಲ್ಲಿ ಸುಸುಜ್ಜಿತ ಬಸ್ ನಿಲ್ದಾಣ ಕಾಮಗಾರಿಗೆ ಪಿಲ್ಲರ್ ಹಾಕಿ ನಂತರ ನಾಪತ್ತೆಯಾಗಿದ್ದ ಅಧಿಕಾರಿಗಳು ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ಪಾಟೀಲ ಅವರ ನೇತೃತ್ವದಲ್ಲಿ ಭೇಟಿ ನೀಡಿ ಉದ್ದೇಶಿತ ಜಾಗದ ಪರಿಶೀಲನೆ ನಡೆಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2.5 ಕೋಟಿ […]

Continue Reading