ಸರ್ ಸಿ.ವಿ ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ: ಸುಗುಣಾ ಕೊಳಕೂರ

ಚಿತ್ತಾಪುರ: ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸರ್ ಸಿ.ವಿ ರಾಮನ್. ಇವರು ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಎಂದು ವಿಜ್ಞಾನ ಶಿಕ್ಷಕಿ ಸುಗುಣಾ ಕೊಳಕೂರ ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 28 ಫೆಬ್ರುವರಿ 1928 ರಂದು ಭೌತಶಾಸ್ತ್ರದ ಅತಿದೊಡ್ಡ ಆವಿಷ್ಕಾರವಾದ ರಾಮನ್ ಪರಿಣಾಮ ಜಗತ್ತಿಗೆ ಪರಿಚಯಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. […]

Continue Reading

ಎಲ್ಲರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯಲಿ

ಕಲಬುರಗಿ: ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆವಣಿಗೆಯಾಗಿದೆ. ಆದರೆ ಇಂದಿಗೂ ಕೂಡಾ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ನಿರ್ಮೂಲನೆಯಾಗಿಲ್ಲ. ಆದ್ದರಿಂದ ಸತ್ಯ, ವೈಚಾರಿಕತೆ ಹೊಂದಿರುವ ವಿಜ್ಞಾನದ ಅಂಶಗಳು, ವಿಷಯಗಳು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಮತ್ತು ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಉಪನ್ಯಾಸಕ, ವಿಚಾರವಾದಿ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯಲ್ಲಿ ಸರ್ ಸಿ.ವಿ ರಾಮನ್ ಅವರ ಭಾವಚಿತ್ರಕ್ಕೆ […]

Continue Reading

ರಾಜ​ಕುಮಾರ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ

ವರನಟ ಡಾ.ರಾಜಕುಮಾರ ಕೇವಲ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಪರಭಾಷೆಯವರೂ ರಾಜ್​ಕುಮಾರ್ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಹಾಡಿನ ಬಗ್ಗೆ, ಅವರ ಕಂಠದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಆದರೆ ಈಗ ಸಂಜಯನಾಗ ಹೆಸರಿನ ಗಾಯಕ ರಾಜಕುಮಾರ ಬಗ್ಗೆ ಟೀಕೆ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ಎದುರಾದ ಟೀಕೆಗಳಿಂದ ಟ್ವಿಟರ್ ಖಾತೆಯನ್ನೆ ಅಳಿಸಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಬಲವಾಗಿದೆ. […]

Continue Reading

ಮುತೈದೆಯರು ಸಾಕ್ಷಾತ ದೇವಿ ಸ್ವರೂಪ

ಸುದ್ದಿ ಸಂಗ್ರಹ ಶಹಾಬಾದ ಮುತೈದೆಯರು ಸಾಕ್ಷಾತ ಆದಿ ಶಕ್ತಿ, ಮಹಾಲಕ್ಷ್ಮಿ ಸ್ವರೂಪರಾಗಿದ್ದು, ಅದ್ದರಿಂದಲೇ ಮುತೈದೆಯರಿಗೆ ಉಡಿತುಂಬಲಾಗುತ್ತದೆ ಎಂದು ಪ್ರವಚನಕಾರ ಪುಟ್ಟರಾಜ ಶಾಸ್ತಿçಹಿರೇಮಠ ಹೇಳಿದರು. ಸುಕ್ಷೇತ್ರ ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪೂಜ್ಯ ಚನ್ನಬಸವ ಶರಣರ ಸಮ್ಮುಖದಲ್ಲಿ ನಡೆದ ಶಿವರಾತ್ರಿ ನಿಮಿತ್ಯ 24ನೇ ವರ್ಷದ ಐದು ದಿನಗಳಸಂಕಲ್ಪ ಸೇವೆಯಲ್ಲಿ 2,500 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದಾಸೋಹ ಮಹಾನ ಮನೆ ಉದ್ಘಾಟನೆ, ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರಿಗೆ ನಾಣ್ಯಗಳಿಂದ ತುಲಾಭಾರಕಾರ್ಯಕ್ರಮದಲ್ಲಿ ಶಿವ ಪುರಾಣ ಪ್ರವಚನ ನೀಡುತ್ತಾ ಮಾತನಾಡಿ, ಶರಣೆ […]

Continue Reading

ದೈಹಿಕ ಮತ್ತು ಮಾನಸಿಕ ಸಮೃದ್ಧಿಗೆ ಸಂಗೀತ ದಿವೌಷಧ

ಕಲಬುರಗಿ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಒಂದು ರೀತಿಯಲ್ಲಿ ಇದು ದಿವೌಷಧಿಯಂತೆ ಕೆಲಸ ಮಾಡುತ್ತದೆ ಎಂದು ವೆಲ್‌ಫೇರ್ ಸೊಸೈಟಿಯ ಮಾಜಿ ಅಧ್ಯಕ್ಷ ಈರಣ್ಣ ದಸ್ಮಾ ಹೇಳಿದರು. ಪಟ್ಟಣದ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದೀಪೊತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ಮನಸ್ಥಿತಿಯನ್ನು ಸುಧಾರಿಸುತ್ತದೆ, ನೋವು, ಆತಂಕ ಕಡಿಮೆ ಮಾಡುತ್ತದೆ‌. ಭಾವನಾತ್ಮಕ ಅಭಿವ್ಯಕ್ತಿಗೆ ಅವಕಾಶಗಳು ಸುಲಭಗೊಳಿಸುತ್ತದೆ. ಸಂಗೀತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವು ವಿಧಾನಗಳಲ್ಲಿ ಪ್ರಯೋಜನ ನೀಡುತ್ತದೆ. ಜೀವನದ ಮಹತ್ವವಾದ […]

Continue Reading

ಬಿ.ಎಸ್.ವೈ ಜನ್ಮದಿನ: ವಾಡಿಯಲ್ಲಿ ಸಂಭ್ರಮ

ವಾಡಿ: ಪಟ್ಟಣದ ಶ್ರೀ ಶಕ್ತಿ ಆಂಜನೇಯ ಮಂದಿರದಲ್ಲಿ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಅವರ 82ನೇ ಹುಟ್ಟು ಹಬ್ಬದ ಅಂಗವಾಗಿ ಮುಖಂಡರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬಿಎಸ್’ವೈ ಕಟೌಟ್’ಗೆ ಕ್ಷೀರಾಭಿಷೇಕ ಮಾಡಿ, ಹಣ್ಣು ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಬಿ.ಎಸ್ ಯಡಿಯೂರಪ್ಪ ಅವರು 81 ವಸಂತಗಳು ಪೂರೈಸಿ, 82ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ಇನ್ನು ಹೆಚ್ಚಿನ ಆಯಸ್ಸು, ಆರೋಗ್ಯ ನೀಡಲಿ. ರಾಜ್ಯದಲ್ಲಿ […]

Continue Reading

ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ: ಇಂದು ಅಗ್ನಿ ಪ್ರವೇಶ, ನಾಳೆ ಭವ್ಯ ರಥೋತ್ಸವ

ಕಾಳಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.27 ಗುರುವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಅಗ್ನಿಪ್ರವೇಶ ಹಾಗೂ ಫೆ.28 ಶುಕ್ರವಾರ ರಾತ್ರಿ 8 ಗಂಟೆಗೆ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗಲಿದೆ ಎಂದು ಕಾಳಗಿ ತಾಲೂಕು ಗ್ರೇಡ್-1 ತಹಸೀಲ್ದಾರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷೆ ಘಮಾವತಿ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಜರಾಯಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಅಂತರಾಜ್ಯಗಳಿಂದ […]

Continue Reading

ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಂಡ ಶಿವ ಸಂಕೀರ್ತನೆ

ಸುದ್ದಿ ಸಂಗ್ರಹ‌ ಶಹಾಬಾದ ನಗರದ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಮಠದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ಯ 24 ಗಂಟೆ ತಂಬೂರಿಯೊಂದಿಗೆ ಅಖಂಡ ಶಿವ ಸಂಕೀರ್ತನೆ ಪ್ರಾರಂಭಿಸಲಾಯಿತು.  ಬುಧವಾರ ಬೆಳಗ್ಗೆ ಶ್ರೀಮಠದಲ್ಲಿ ಗೋಪಾಲಾಚಾರ್ಯ ಜೋಶಿ ಅವರಿಂದ ರುದ್ರ ದೇವರಿಗೆ ಏಕಾದಶ ರುದ್ರಾಭೀಷೇಕ ನಡೆಸಲಾಯಿತು.  ಅರ್ಚಕರಾದ ವಾಸುದೇವಾಚಾರ್ಯ ಜೋಶಿ, ಋತ್ವಿಜರಾದ ದಾಮೋಧರ ಭಟ್ಟ, ವೇದವ್ಯಾಸಾಚಾರ್ಯ ಜೋಶಿ, ಪವನ ಕುಲಕರ್ಣಿ ಉಪಸ್ಥಿತರಿದ್ದರು. ನಂತರ ತಂಬೂರಿ ಪೂಜೆಯೊಂದಿಗೆ 24 ಗಂಟೆಗಳ ಅಖಂಡ ಶಿವ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ಗುರುವಾರ ಬೆಳಗ್ಗೆ 8 ಗಂಟೆಗೆ ಶಿವ ಸಂಕೀರ್ತನೆ […]

Continue Reading

ವಾಡಿ ಪುರಸಭೆಯ ಕಸದ ಬುಟ್ಟಿಯಲ್ಲಿ ಗೊಲಮಾಲ್

ವಾಡಿ: ಪಟ್ಟಣದ ಪುರಸಭೆಯ ಕಸದ ಬುಟ್ಟಿ ಖರೀದಿಯಲ್ಲಿ ಲಕ್ಷಾಂತರ ರೂಪಾಯಿಗಳ ಗೂಲಮಾಲ್ ಮಾಡಿ ವಿತರಣೆಯಲ್ಲೂ ತಾರತಮ್ಯ ಮಾಡಿದೆ, ಇದರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪಟ್ಟಣದಲ್ಲಿ 2020-21ನೇ ಸಾಲಿನ 15ನೇ ಹಣಕಾಸಿನಲ್ಲಿ ಮಂಜೂರಾದ ಕಸದ ಬುಟ್ಟಿಗಳನ್ನು 2024-25ರಲ್ಲಿ ಅದನ್ನು ಕೆಲವೊಂದು ವಾರ್ಡ್’ಗಳಲ್ಲಿ ಬೇಕಾಬಿಟ್ಟಿಯಾಗಿ ವಿತರಣೆ ಮಾಡಿ ಅದರ ಅಂಕಿ ಅಂಶಗಳನ್ನು ಸಹ ಸಮರ್ಪಕವಾಗಿ ನೊಂದಾಯಿಸದೆ ಇಲ್ಲಿನ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ವಾರ್ಡ್ ಸಂಖ್ಯೆ […]

Continue Reading

ಮಹಾ ಶಿವರಾತ್ರಿ ಆತ್ಮಾವಲೋಕನದ ಸಂದೇಶ ವಾಹಕ

ಕಲಬುರಗಿ: ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಶಿವರಾತ್ರಿ ಹೊಂದಿದೆ. ಇದು ಆತ್ಮಾವಲೋಕನದ ಸಂದೇಶದ ವಾಹಕದಂತೆ ಕಾರ್ಯನಿರ್ವಹಿಸುತ್ತದೆ ಎಂದು ಪೂಜ್ಯ ನಾಗೇಶ ಮಹಾರಾಜ ಗುಜರಾತಿ ಹೇಳಿದರು. ನಗರದ ಆಳಂದ ನಾಕಾ ಸಮೀಪದ ಐತಿಹಾಸಿಕ ಬಹು ಪುರಾತನ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ದೇವಸ್ಥಾನ ಸಮಿತಿ’, ‘ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ […]

Continue Reading