ವಾಟ್ಸಾಪ್ ಬಳಕೆದಾರರೆ ಎಚ್ಚರ: ಈ 3 ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್

ಇತ್ತೀಚಿನ ದಿನಗಳಲ್ಲಿ, WhatsApp ನಮ್ಮ ದೈನಂದಿನ ಸಂವಹನದ ಅವಿಭಾಜ್ಯ ಅಂಗವಾಗಿದೆ. ಚಾಟಿಂಗ್, ಫೋಟೋಗಳು, ವೀಡಿಯೊಗಳನ್ನು ಹಂಚಿಕೊಳ್ಳುವುದು ಅಥವಾ ಕೆರೆಗಳು ಮಾಡುವುದು ಎಲ್ಲವೂ ಈ ಅಪ್ಲಿಕೇಶನ್ ಮೂಲಕವೇ ನಡೆಯುತ್ತದೆ. ಆದರೆ ವಾಟ್ಸಾಪ್‌ನಲ್ಲಿ ಅರಿವಿಲ್ಲದೆ ಮಾಡುವ ಕೆಲವು ಕಾರ್ಯಗಳು ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧಗಳೆಂದು ಪರಿಗಣಿಸಲ್ಪಡುತ್ತವೆ ಮತ್ತು ಆಕಸ್ಮಿಕವಾಗಿ ಇಂತಹ ತಪ್ಪುಗಳು ನಡೆದರೆ ನೀವು ಜೈಲು ಪಾಲಾಗಬಹುದು. ಆದ್ದರಿಂದ, ವಾಟ್ಸಾಪ್ ಬಳಸುವಾಗ ಯಾವ ಮೂರು ಪ್ರಮುಖ ವಿಷಯಗಳು ಮಾಡಬಾರದು ಎಂಬುದು ತಿಳಿದುಕೊಳ್ಳುವುದು ಅತ್ಯಗತ್ಯ. ನಕಲಿ ಸುದ್ದಿ ಮತ್ತು ವದಂತಿಗಳನ್ನು ಹರಡುವುದು […]

Continue Reading

ಶಿಸ್ತುಬದ್ಧ ಜೀವನ ಶೈಲಿಯಿಂದ ಆರೋಗ್ಯವಾಗಿರಲು ಸಾಧ್ಯ: ಡಾ.ಅನುಪಮಾ ಕೇಶ್ವಾರ

ಸುದ್ದಿ ಸಂಗ್ರಹ ಕಲಬುರಗಿ ರಾಸಾಯನಿಯುಕ್ತ ಪಾನೀಯಗಳು, ಜಂಕ್ ಫುಡ್‌ಗಳ ಸೇವನೆ ಬೇಡ. ದೈಹಿಕ ವ್ಯಾಯಾಮ ಅಗತ್ಯ. ಸಮತೋಲಿತ ಆಹಾರ ಸೇವನೆ, ಯೋಗ, ಧ್ಯಾನ ಮಾಡುವುದು, ಧನಾತ್ಮಕ ಚಿಂತನೆ ಅಂತಹ ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನಾರೋಗ್ಯಕರ […]

Continue Reading

ವಿಶ್ವದ ಶಾಂತಿಗಾಗಿ ತಟಸ್ಥ ನೀತಿ ಪಾಲನೆ ಅಗತ್ಯ: ಎಚ್.ಬಿ ಪಾಟೀಲ್

ಸುದ್ದಿ ಸಂಗ್ರಹ ಕಲಬುರಗಿ ಸಾರ್ವಭೌಮತ್ವ ರಕ್ಷಣೆ ತಟಸ್ಥತೆ ರಾಷ್ಟ್ರಗಳ ಸ್ವತಂತ್ರ ನೀತಿಗಳನ್ನು ಮತ್ತು ಸಾರ್ವಭೌಮತ್ವವನ್ನು ಎತ್ತಿ ತೋರಿಸುತ್ತದೆ. ವಿಶ್ವ ಶಾಂತಿಗಾಗಿ ತಟಸ್ಥ ನೀತಿಯ ಪಾಲನೆ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ತಟಸ್ಥ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ತಟಸ್ಥ ನೀತಿಯು ವಿಶ್ವ ಶಾಂತಿ, ಭದ್ರತೆ ಮತ್ತು ಸಹಕಾರವನ್ನು ಬಲಪಡಿಸುತ್ತದೆ. ದೇಶಗಳ […]

Continue Reading

ವೃದ್ಧೆ ಬದುಕಿದ್ದಾಗಲೆ ಡೆತ್‌ ಸರ್ಟಿಫಿಕೇಟ್ ಮಾಡಿಸಿ ಆಸ್ತಿ ಲಪಟಾಯಿಸಿದ ಭೂಪ ?

ಸುದ್ದಿ ಸಂಗ್ರಹ ಹಾಸನ ಮಹಿಳೆ ಬದುಕಿರುವಾಗಲೆ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ ಆರೋಪ ಸಕಲೇಶಪುರ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ. ಗ್ರಾಮದ ಮಹಿಳೆ ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ 1 ಎಕರೆ 20 ಗುಂಟೆ ಭೂಮಿ ಇದೆ. ಈ ಭೂಮಿಯನ್ನು ಬಾಳ್ಳುಪೇಟೆ ಗ್ರಾಮದ ಶೇಖ್‍ ಅಹಮದ್ ಎಂಬಾತ ದತ್ತು ಪುತ್ರ ಎಂದು ವಂಶ ವೃಕ್ಷ ಮಾಡಿಸಿ, 2008ರಲ್ಲೆ ಸಿದ್ದಮ್ಮ ವಿಲ್ ಮಾಡಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾನೆ. ಬಳಿಕ 2009ರ ಅ.4 […]

Continue Reading

4 ವರ್ಷಗಳ ಬಳಿಕ ಕೊನೆಗೂ ಜಿ.ಪಂ, ತಾ.ಪಂ ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ

ಸುವರ್ಣ ವಿಧಾನಸೌಧ: ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6,500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು. ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಿರಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು, ಗ್ರಾಮ ಪಂಚಾಯ್ತಿಗಳ ಅವಧಿಯೂ ಮುಗಿಯುತ್ತಿದೆ. ಜಿ.ಪಂ, ತಾ.ಪಂ […]

Continue Reading

ಜಾಗತಿಕ ಅಭಿವೃದ್ಧಿಗೆ ಯುನಿಸೆಫ್ ಕೊಡುಗೆ ಅನನ್ಯ: ಎಚ್.ಬಿ ಪಾಟೀಲ್

ಸುದ್ದಿ ಸಂಗ್ರಹ ಕಲಬುರಗಿ ಯುನಿಸೆಫ್ ವಿಶ್ವದಾದ್ಯಂತ ಮಕ್ಕಳ ಹಕ್ಕುಗಳನ್ನು ರಕ್ಷಿಸಲು, ಅವರ ಆರೋಗ್ಯ, ಶಿಕ್ಷಣ, ಸಮಾನತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲು ಕಾರ್ಯನಿರ್ವಹಿಸುತ್ತದೆ. ಎರಡನೇ ಮಹಾಯುದ್ಧದ ನಂತರ ಆರಂಭವಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳು ಮತ್ತು ತಾಯಂದಿರಿಗೆ ತುರ್ತು ನೆರವು, ಶಿಕ್ಷಣ, ಆರೋಗ್ಯ ಸೇವೆಗಳು, ಪೌಷ್ಟಿಕಾಂಶ ಮತ್ತು ರಕ್ಷಣೆ ಒದಗಿಸುತ್ತದೆ. ಜಾಗತಿಕ ಅಭಿವೃದ್ಧಿಯಲ್ಲಿ ಯುನಿಸೆಫ್ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.    ನಗರದ ಶಹಾಬಜಾರದ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಶಾಲೆಯಲ್ಲಿ ಬಸವೇಶ್ವರ ಸಮಾಜ […]

Continue Reading

ಸಾಮಾಜಿಕ ಬಹಿಷ್ಕಾರ ಹಾಕಿದರೆ 1 ಲಕ್ಷ ದಂಡ, 3 ವರ್ಷ ಜೈಲು: ರಾಜ್ಯ ಸರ್ಕಾರ ಮಸೂದೆ ಮಂಡನೆ

ಸುದ್ದಿ ಸಂಗ್ರಹ ಬೆಳಗಾವಿ ಅನಿಷ್ಟ ಪದ್ಧತಿಯಾಗಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ, ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ ಮಂಡಿಸಲಾಗಿದೆ. ಈ ಮಸೂದೆ ಅನ್ವಯ ಇನ್ಮುಂದೆ ಯಾವುದೆ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, 1 ಲಕ್ಷ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಬಹಿಷ್ಕಾರ ಹಾಕುವ ಬಗ್ಗೆ […]

Continue Reading

ಪ್ಯಾಂಟ್ ಜಿಪ್‌ನ ಪಟ್ಟಿಯಲ್ಲಿಟ್ಟು ಗಾಂಜಾ ಸಾಗಾಟ: ಓರ್ವ ವಶಕ್ಕೆ

ಸುದ್ದಿ ಸಂಗ್ರಹ ಶಿವಮೊಗ್ಗ ಜಿಲ್ಲೆಯ ಕೇಂದ್ರ ಕಾರಾಗೃಹದೊಳಗೆ ಮಾದಕ ವಸ್ತು ಕಳ್ಳಸಾಗಾಣೆ ಯತ್ನ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಂಧಿತನನ್ನು ನೋಡಲು ಬಂದಿದ್ದ ವ್ಯಕ್ತಿಯೋರ್ವ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಮಾದಕ ವಸ್ತು ಸಾಗಿಸಲು ಯತ್ನಿಸಿದ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಶಕೀಬ್ ಎಂದು ಗುರುತಿಸಲಾಗಿದೆ, ಕೈದಿ ಅಶೋಕ್ ಎಂಬಾತನನ್ನು ಭೇಟಿ ಮಾಡಲು ಬಂದಾಗ ಮಾದಕ ವಸ್ತು ಸಾಗಿಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಡಿ.9 ಮಂಗಳವಾರ ಸಂಜೆ ಕೈದಿ ಅಶೋಕ್‌ನನ್ನು ನೋಡಲು ಶಕೀಬ್ ಮಾರುತಿ ಸುಜುಕಿ ಕಾರಿನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ […]

Continue Reading

ಚಿತ್ತಾಪುರ: ನೂತನ ಸಹಾಯಕ ಖಜಾನೆ ಅಧಿಕಾರಿ ಸೈಯದ್ ನಾಸಿರ್ ಹಶ್ಮಿ ಅವರಿಗೆ ಸನ್ಮಾನ

ಸುದ್ದಿ ಸಂಗ್ರಹ ಚಿತ್ತಾಪುರನೂತನ ಸಹಾಯಕ ಖಜಾನೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸೈಯದ್ ನಾಸಿರ್ ಹಶ್ಮಿ ಅವರನ್ನು ಸರ್ಕಾರಿ ನೌಕರರ ಸಂಘದಿಂದ ಪಟ್ಟಣದಲ್ಲಿ ಸನ್ಮಾನಿಸಲಾಯಿತು. ತಾಲೂಕು ಉಪ ಖಜಾನೆ ಕಚೇರಿಗೆ ಸಹಾಯಕ ಖಜಾನೆ ಅಧಿಕಾರಿಯಾಗಿ ಸೈಯದ್ ನಾಸಿರ್ ಹಶ್ಮಿ ಅವರು ಹಾಜರಾದ ಪ್ರಯುಕ್ತ ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, […]

Continue Reading

ಭೀಮನಳ್ಳಿ-ನಾಲವಾರ ಶ್ರೀಗಳಿಗೆ ಗುರುವಂದನೆ, ರಜತ ಕಿರೀಟ ಅರ್ಪಣೆ‌

ಸುದ್ದಿ ಸಂಗ್ರಹ ಚಿತ್ತಾಪುರಶ್ರೀಕ್ಷೇತ್ರ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಹಾಮಠದ ಪೀಠಾಧಿಪತಿ ಡಾ.ಸಿದ್ಧತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಗುರುವಂದನೆ ಮತ್ತು ರಜತ ಕಿರೀಟ ಧಾರಣೆ ಸಮಾರಂಭ ಸಂಭ್ರಮ ಸಡಗರದಿಂದ ನೆರವೇರಿತು. ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಳಲಿಂಗ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಉದ್ಘಾಟನೆ, ಹಾಗೂ ಗುರುವಂದನೆ ಮತ್ತು ರಜತ ಕಿರೀಟ ಸಮರ್ಪಣೆ ಮತ್ತು ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವಸ್ಥಾನ, ಮಠ, ಮಂದಿರ, ಆಧ್ಯಾತ್ಮಿಕ ಕೇಂದ್ರಗಳಿಗೆ ಹೋಗುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ […]

Continue Reading