ಶಹಾಬಾದ: ಜ.12ರಂದು ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ

ಸುದ್ದಿ ಸಂಗ್ರಹ ಶಹಾಬಾದಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ, ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅಭಿಮಾನಿ ಬಳಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಜ.12 ರಂದು ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಬಿರದಲ್ಲಿ ನೇತ್ರ, ಕಿವಿ, ಮತ್ತು […]

Continue Reading

ಮನವಿ ಪತ್ರಇವರಿಗೆ ದಿ- 6-1-2026ಮಾನ್ಯ ಲೋಕಸಭಾ ಸಂಸದರುಉಡುಪಿ- ಚಿಕ್ಕಮಗಳೂರುಕ್ಷೇತ್ರ. ನಾಗಾವಿ ಪುರಾತತ್ವ ಸ್ಥಳವನ್ನು ಪ್ರೇಕ್ಷಣಾ ಸ್ಮಾರಕವೆಂದು ಘೋಷಿಸಲು ಮತ್ತು ನಾಗಾವಿ ವಿಶ್ವವಿದ್ಯಾಲಯ ಪುನಃ ಸ್ಥಾಪಿಸಲು ಮನವಿ ಚಿತ್ತಾಪುರ: ಗೆಜೆಟ್’ನಲ್ಲಿ ಕೇವಲ ಮಸಿದಿ ಎಂದು ನಮೂದಿಸಿರುವ ಶಬ್ದವನ್ನು ಮರುಪರಿಶೀಲನೆ ಮಾಡಿ ನಾಗಾವಿಯನ್ನು ಭಾರತೀಯ ಪುರಾತತ್ವ ಪ್ರೇಕ್ಷಣಾ ಸ್ಮಾರಕವೆಂದು ಘೋಷಿಸಬೇಕು ಮತ್ತು ನಳಂದ ಕಾಲದ ನಾಗಾವಿ ವಿಶ್ವವಿದ್ಯಾಲಯವನ್ನು ಪುನಃ ನಾಗಾವಿ ಎಂಬುವುದು ರಾಷ್ಟ್ರಕೂಟರ ಕಾಲದಿಂದಲೂ ಒಂದು ಪ್ರಾಚೀನ ಘಟಿಕಾಲಯವಾಗಿತ್ತು. (ವಿಶ್ವವಿದ್ಯಾಲಯ) ನಾಗಾವಿ ಕಾಲಕ್ರಮೇಣ ದಕ್ಷಿಣ ಭಾರತದಲ್ಲೆ ವಸತಿಸಹಿತ ಕಲಿಕಾ ಕೇಂದ್ರವಾಗಿ […]

Continue Reading

ಪಕ್ಷಿ ಸಂಕುಲ ಸಂರಕ್ಷಣೆ ಅಗತ್ಯ

ಸುದ್ದಿ ಸಂಗ್ರಹ ಕಲಬುರಗಿ ಪರಾಗಸ್ಪರ್ಷ ಕ್ರಿಯೆಯಿಂದ ಉತ್ತಮ ಇಳುವರಿ ಸಾಧ್ಯ. ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ ಸಮತೋಲನವಾಗಿಡಲು ಪಕ್ಷಿಗಳು ಕಾರಣವಾಗಿವೆ. ಆದ್ದರಿಂದ ಪಕ್ಷಿ ಸಂಕುಲದ ರಕ್ಷಣೆ ತುಂಬಾ ಅಗತ್ಯ ಎಂದು ಉಪನ್ಯಾಸಕ, ಪಕ್ಷಿ ಪ್ರೇಮಿ ಶಂಕ್ರೆಪ್ಪ ಹೊಸದೊಡ್ಡಿ ಹೇಳಿದರು. ನಗರದ ಹೈಕೋರ್ಟ್ ರಿಂಗ್ ರಸ್ತೆಯ ನವಲದಿ ಬಡಾವಣೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಪಕ್ಷಿ ದಿನಾಚರಣೆ’ ನಿಮಿತ್ಯ ಪಕ್ಷಿಗಳಿಗೆ ನೀರು, ಕಾಳು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಿಗಳು ವಿವಿಧ […]

Continue Reading

ನಾಲವಾರ: ನಾಳೆಯಿಂದ ಧಾರ್ಮಿಕ ಸಾಂಸ್ಕೃತಿಕ ವೈಭವ, ಜ.18 ರಿಂದ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವ

ಸುದ್ದಿ ಸಂಗ್ರಹ ಚಿತ್ತಾಪುರಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯ ನಾಲವಾರದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರೆ ಜ.18 ಮತ್ತು 19ರಂದು ಅದ್ಧೂರಿಯಾಗಿ ನೆರವೇರಲಿದೆ. ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ದಿಗ್ದರ್ಶನದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ 11 ದಿನ ಮುಂಚಿತವಾಗಿಯೇ ಜ.8 ರಿಂದ ಶ್ರೀಮಠದಲ್ಲಿ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಜ.18ರಂದು ಅವರಾತ್ರಿ ಅಮಾವಾಸ್ಯೆ ದಿನದಂದು ಸಂಜೆ ಜಾತ್ರೆ ಉದ್ಘಾಟನೆ, ಶಿವಾನುಭವ […]

Continue Reading

ವಾಡಿ: ಮೂಲಭೂತ ಸೌಕರ್ಯ ಒದಗಿಸಲು ಬಿಜೆಪಿ ಆಗ್ರಹ

ಸುದ್ದಿ ಸಂಗ್ರಹ ವಾಡಿಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರಿಗೆ ಬಿಜೆಪಿ ಮುಖಂಡರು ಮನವಿ ಪತ್ರ ಸಲ್ಲಿಸಿ, ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸಿ ವಾರ್ಡ್‌ ಸಂಖ್ಯೆ1 ಬಸವನ‌ ಖಣಿಯಲ್ಲಿ ವಾಸಿಸುವರಿಗೆ ಇನ್ನೂ ಹಕ್ಕು ಪತ್ರ ಇಲ್ಲ, ಸುಮಾರು 20 ವರ್ಷಗಳಿಂದ ಪುರಸಭೆ ಇದ್ದರೂ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದು ದುರಾದೃಷ್ಟಕರವಾಗಿದೆ ಎಂದರು. ಬಹುತೇಕ ಕಡೆ ಸ್ಥಳೀಯರಿಗೆ […]

Continue Reading

ಸರಕಾರಿ ನೌಕರರ ಕ್ರೀಡಾಕೂಟ: ಭಾಗವಹಿಸಲು ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಜಿಲ್ಲಾ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ 2025-26ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ‌.‌ ಜಿಲ್ಲೆಯ ಸರ್ಕಾರಿ ನೌಕರರು https://form.svhrt.com/695a005f31fccd4a1b1989c ಈ ಲಿಂಕ್ ಮೂಲಕ ಜ.12ರ ಒಳಗಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೊಲೀಸ್, […]

Continue Reading

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಮಹಾನ್‌ ತಾಯಿ: ಶಾಸಕ ಅಲ್ಲಮಪ್ರಭು ಪಾಟೀಲ

ಸುದ್ದಿ ಸಂಗ್ರಹ ಕಲಬುರಗಿ ಸಾಮಾಜಿಕ ವಿರೋಧದ ನಡುವೆಯೂ ಹೆಣ್ಣು ಮಕ್ಕಳ ಸಮಾನತೆ ಹಾಗೂ ಶಿಕ್ಷಣಕ್ಕಾಗಿ ಅವಿರತವಾಗಿ ಶ್ರಮಿಸಿದ ಮಹಾನ್‌ ತಾಯಿ ಸಾವಿತ್ರಿಬಾಯಿ ಫುಲೆ. ಈ ಮೂಲಕ ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಲು ಯತ್ನಿಸಿದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು. ನಗರದ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ರವಿವಾರ ನವದೆಹಲಿಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್‌, ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕ ಮತ್ತು ಶರಣಬಸವಪ್ಪ […]

Continue Reading

ಹೆಣ್ಣು ಮಕ್ಕಳಿಗೆ ಅಕ್ಷರ ಬಿತ್ತಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಸುದ್ದಿ ಸಂಗ್ರಹ ಶಹಾಬಾದಸಹೋದರರೆ, ನಾನು ನಿಮ್ಮ ತಂಗಿಯರಿಗೆ ವಿದ್ಯೆ ಕಲಿಸುವ ಪವಿತ್ರ ಕೆಲಸ ಮಾಡುತ್ತಿದ್ದೆನೆ, ನೀವು ನನ್ನ ಮೇಲೆ ಸಗಣಿ ಮತ್ತು ಕಲ್ಲುಗಳು ಎಸೆದರೂ ನೀವು ಹೂವಿನ ಮಳೆ ಸುರಿಸುತ್ತಿದ್ದಿರಿ ಎಂದು ಭಾವಿಸಿ ನಾನು ಧೈರ್ಯವಾಗಿ ಕಾರ್ಯನಿರ್ವಹಿಸುತ್ತೆನೆ ಎನ್ನುತ್ತಿದ್ದರು ಸಾವಿತ್ರಿಬಾಯಿ ಫುಲೆ ಎಂದು ಎಐಡಿವೈಓ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ಹೇಳಿದರು. ಹನುಮಾನ ನಗರದ ಎಐಡಿವೈಓ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣೆಯ ಭಿಡೆವಾಡಾ ಶಾಲೆಗೆ ಅವರು ನಡೆದುಕೊಂಡು ಹೋಗುತ್ತಿರುವಾಗ, ಪ್ರತಿದಿನವೂ ಕೆಲವರು ಅವರಿಗಾಗಿ […]

Continue Reading

ಸೀತನಿಯ ಸಿಹಿ ತಿಂದು ಸಂಭ್ರಮಿಸುವ ಸಮಯ ಜೋಳದ ತೆನೆಯಲ್ಲಿ ಕಾಳುಗಳು ಗಟ್ಟಿಯಾಗುವ ಮುನ್ನ ಹಸಿಯಾದ ಮತ್ತು ಮೆತ್ತಗೆ ಇರುವ ಸ್ಥಿತಿಯನ್ನು ಸೀತನಿ ಎಂದು ಕರೆಯುತ್ತಾರೆ. ರುಚಿಕರ ಮತ್ತು ಪೌಷ್ಟಿಕಾಂಶ ಹೊಂದಿರುತ್ತದೆ. ಜನವರಿ ಶೀತನಿ ಸಿಗುತ್ತದೆ. ಜನರು ಈ ತೆನೆ ಸುಟ್ಟು ಇಷ್ಟಪಟ್ಟು ಸೇವಿಸುತ್ತಾರೆ. ಇದು ಹೆಚ್ಚು ಶೇಂಗಾ ಚಟ್ನಿ, ಉಪ್ಪು,ಬೆಲ್ಲದ ಜತೆಗೆ ಸೇವಿಸಿದರೆ ಅದರ ರುಚಿ ಅನುಭವಿಸಿದವರೇ ಬಲ್ಲರು. ಉತ್ತರ ಕರ್ನಾಟಕದಲ್ಲಿ ವರ್ಷಕ್ಕೆ ಒಂದು ಬಾರಿ ಸಿಗುವ ಜನಪ್ರಿಯ ತಿನಿಸು ಸೀತನಿ. ತೆಂಗಳಿ ಗ್ರಾಮದ ಪ್ರಗತಿಪರ ರೈತ […]

Continue Reading

ವಿಮಾನ ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಫ್ಲೈಟ್‌ನಲ್ಲಿ ಪವರ್ ಬ್ಯಾಂಕ್ ಬಳಕೆಗೆ ನಿಷೇಧ

ಸುದ್ದಿ ಸಂಗ್ರಹ ನವದೆಹಲಿ ವಿಮಾನ ಪ್ರಯಾಣದ ವೇಳೆ ಲಿಥಿಯಂ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪವರ್ ಬ್ಯಾಂಕ್‌ಗಳ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಇತ್ತೀಚೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ಟೇಕ್-ಆಫ್ ಆಗುವ ಮುನ್ನ ಪ್ರಯಾಣಿಕರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೆ ಅನಾಹುತ ಸಂಭವಿಸಿರಲಿಲ್ಲ. ಈ ಘಟನೆಯ ಬೆನ್ನಲ್ಲೆ ಈ ಹೊಸ ‘ಡೆಂಜರಸ್ ಗುಡ್ಸ್ ಅಡ್ವೈಸರಿ […]

Continue Reading