ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು: ಮುಡಬಿ ಗುಂಡೆರಾವ

ಕಾಳಗಿ: ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳ ಕೊಡುಗೆ ಅಪಾರ. ನಾಡು, ನುಡಿ ಸಂಸ್ಕ್ರತಿ ಪರಿಚಯಿಸುವ ಕೆಲಸವಾಗಬೇಕು ಎಂದು ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಹೇಳಿದರು. ತಾಲೂಕಿನ ಟೆಂಗಳಿ ಗ್ರಾಮದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮೂರು ನಮಗೆ ಮೇಲು ವಿಶೇಷ ಉಪನ್ಯಾಸ ಕಾರ್ಯಕ್ರಮಲ್ಲಿ ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ, ತೆಂಗಳಿಯ ಶಾಸನಗಳು, ದೇವಾಲಯಗಳು, ವೀರಗಲ್ಲು ಸ್ಮಾರಕಗಳು, ಪ್ರಾಚೀನ ಕನ್ನಡಿಗರ ಆಡಳಿತ, ಶಿಕ್ಷಣ, ಧರ್ಮ, ಆಧ್ಯಾತ್ಮ, ಸಮಾಜ ,ಆರ್ಥಿಕ ಸೇರಿದಂತೆ ಮುಂತಾದ ವಿವಿಧ […]

Continue Reading

ನೂತನ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಅವರಿಗೆ ಸತ್ಕಾರ

ಕಲಬುರಗಿ: ನೂತನ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಶುಭಾಷಯ ಕೋರಲಾಯಿತು. ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿನಂದಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದವರಾದ ತಾವು ಕಲಬುರಗಿ ಪೊಲೀಸ್ ಕಮಿಷನರ್ ಆಗಿ ಆಗಮಿಸಿದ್ದು, ನಮ್ಮ ಆಳಂದ ತಾಲೂಕು ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ತುಂಬಾ ಹರ್ಷವಾಗಿದೆ. ತಮ್ಮ ಅಧಿಕಾರದಲ್ಲಿ ಇಲಾಖೆಯ ಕೀರ್ತಿಯ ಜೊತೆಗೆ ಜಿಲ್ಲೆಯ ಕೀರ್ತಿ ಹೆಚ್ಚಾಗುತ್ತದೆ. ಜಿಲ್ಲೆಯ […]

Continue Reading

ಕರದಾಳ ಪ್ರೌಢ ಶಾಲೆಯಲ್ಲಿ ಜನಪದ ಕಲರವ

ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕದ ವತಿಯಿಂದ ಶಾಲೆಗೊಂದು ಜಾನಪದ ಕಲರವ ಕಾರ್ಯಕ್ರಮ ಜರಗಿತು. ಗ್ರಾಮದ ಮುಖಂಡ ಶಿವಲಿಂಗಯ್ಯ ಸ್ವಾಮಿ ಮಠಪತಿ ಅವರು ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜನಪದ ಕಲಾವಿದರಾದ ಭೀಮರಾಯ, ಮಲ್ಲಪ್ಪ ನಂಜೋಳಿ, ಸಂಗೀತ ಕಲಾವಿದೆ, ಶ್ರೀದೇವಿ ಹಿರೆಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭೀಮರಾಯ ಅವರು ಮೊಹರಂ ಪದ, ಮಲ್ಲಪ್ಪ ನಂಜೋಳಿ ಅವರು ಭಜನೆ ಪದ, ಶ್ರೀದೇವಿ ಹಿರೆಗೌಡ ಅವರು ಜನಪದ […]

Continue Reading

ಕಲಬುರಗಿ ನಗರ ನೂತನ ಪೊಲೀಸ್ ಆಯುಕ್ತರಾಗಿ ಡಾ. ಎಸ್.ಡಿ ಶರಣಪ್ಪ ನೇಮಕ

ಕಲಬುರಗಿ: ನಗರ ಪೊಲೀಸ್ ಆಯುಕ್ತರಾಗಿ 2009 ಬ್ಯಾಚಿನ ಐಪಿಎಸ್ ಅಧಿಕಾರಿ ಡಾ. ಎಸ್.ಡಿ ಶರಣಪ್ಪ ಅವರನ್ನು ನೇಮಕಗೊಳಿಸಿ ಸರ್ಕಾರ ಅದೇಶ ಹೊರಡಿಸಿದೆ. ಇದರಿಂದ ಕಳೆದೊಂದು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಖಡಕ್ ಅಧಿಕಾರಿ ನಿಯೋಜನೆಗೊಂಡಂತಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದವರು. ಇದೇ ಮೊದಲ ಬಾರಿಗೆ ಅವರು ತವರು ಜಿಲ್ಲೆಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ಜಿಲ್ಲೆಯವರೇ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಮೊದಲಿಗರು ಎಂಬ ಹೆಗ್ಗಳಿಕೆ ಅವರದಾಗಿದೆ. ಈ ಹಿಂದೆ ರೈಲ್ವೆ ವಿಭಾಗದ ಡಿಐಜಿಯಾಗಿ, ಬೆಂಗಳೂರಿನಲ್ಲಿದಕ್ಷಿಣ […]

Continue Reading

ದಂಡಗುಂಡ ಬಸವಣ್ಣ ಮಹಾರಾಜ್ ಕಿ ಜೈ

ಚಿತ್ತಾಪುರ: ಶ್ರಾವಣ ಮಾಸದ ನಡುವಿನ ಸೋಮವಾರ ನಾಡಿನ ಜನತೆಗೆ ವಿಶೇಷವಾಗಿದ್ದು, ತಾಲೂಕಿನ ಸುಪ್ರಸಿದ್ದ ದಂಡಗುಂಡ ಬಸವಣ್ಣನ ದೇವಸ್ಥಾನದಲ್ಲಿ ಭವ್ಯ ರಥೋತ್ಸವ ಜನರ ಜಯಘೋಷಗಳೊಂದಿಗೆ ಸಂಜೆ ಜರುಗಿತು. ಗುಡ್ಡಗಾಡುಗಳ ಮಧ್ಯೆ ಇರುವ ಈ ದೇವಸ್ಥಾನದ ಎದುರುಗಡೆ ಸೋಮವಾರ ನಡೆದ ರಥೋತ್ಸವದಲ್ಲಿ ದಂಡಗುಂಡ ಬಸವಣ್ಣ ಮಹಾರಾಜಕೀ ಜೈ ಎಂಬ ಘೋಷಣೆಯೊಂದಿಗೆ ಆರಂಭಗೊಂಡಿತು.ರಥೋತ್ಸವದಲ್ಲಿ ಭಕ್ತರು ಬಾಳೆಹಣ್ಣು, ಉತ್ತತ್ತಿ(ಕಾರಿಕ)ಗಳಿಂದ ರಥದ ಮೇಲೆ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಇನ್ನೊಂದೆಡೆ ಎಸೆದ ಬಾಳೆಹಣ್ಣುಗಳನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸಿ ಅದುವೇ ಪ್ರಸಾದವೆಂದು ಭಕ್ತರು ಸ್ವೀಕರಿಸುತ್ತಿರುವ ದೃಶ್ಯ […]

Continue Reading

ಅದ್ದೂರಿ ಜಾತ್ರಾ ಮಹೋತ್ಸವ ಆಚರಣೆಗೆ ಟ್ರಸ್ಟ್ ನಿರ್ಧಾರ: ಚಂದ್ರಶೇಖರ ಅವಂಟಿ

ಚಿತ್ತಾಪುರ: ಆ.19 ರಂದು ತಾಲೂಕಿನ ದಂಡಗುಂಡ ಗ್ರಾಮದ ಬಸವಣ್ಣ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಹೇಳಿದರು. ತಾಲೂಕಿನ ದಂಡಗುಂಡ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಾವಣ ಮಾಸದ ಪವಿತ್ರವಾದ ದಿನ ನಡುವಿನ ಸೋಮವಾರ ದಿವಸ ಪ್ರತಿ ವರ್ಷ ದಂಡಗುಂಡ ಬಸವಣ್ಣನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು. ಕಳೆದ […]

Continue Reading

ಶಂಕರ್ ಜಿ ಹಿಪ್ಪರಗಿಗೆ ನಾಟಕ ಅಕಾಡೆಮಿ ಪ್ರಶಸ್ತಿ

ಕಲಬುರ್ಗಿ: ನಾಟಕಕಾರ ಶಂಕರ್ ಜಿ ಹಿಪ್ಪರಗಿ ಅವರನ್ನು 2023 – 24ನೇ ಸಾಲಿನ ಮಾಲತಿಶ್ರೀ ಮೈಸೂರು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯ ದತ್ತಿ ಪ್ರಶಸ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಹೆಗ್ಗಳಿಕೆಗೆ ಶಂಕರ್ ಜಿ ಹಿಪ್ಪರಗಿ ಪಾತ್ರರಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದವರಾದ ಇವರು 35 ವರ್ಷಗಳಿಂದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಂದಾಪುರದಲ್ಲಿ ನೆಲೆಸಿದ್ದಾರೆ. 25ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಬಹುಮುಖ ಪ್ರತಿಭೆಯ ಇವರು 25ಕ್ಕೂ ಹೆಚ್ಚು […]

Continue Reading

ಬಾಲ್ಯ ವಿವಾಹ ಪ್ರಕರಣ ಜರುಗದಂತೆ ಕ್ರಮ ವಹಿಸಿ: ರಾಜಕುಮಾರ ರಾಠೋಡ

ಚಿತ್ತಾಪುರ: ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣ ಜರುಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಕುಮಾರ ರಾಠೋಡ ಹೇಳಿದರು. ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕರ ಸಭೆ ನಡೆಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮಕ್ಕಳ ಹಾಗೂ ಮಹಿಳೆಯರ ಬಗ್ಗೆ ಹೆಚ್ವಿನ ಕಾಳಜಿ ವಹಿಸುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಯಾವುದೆ ರೀತಿಯ ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮೇಲ್ವಿಚಾರಕರಿಗೆ ಸೂಚಿಸಿದರು. ಕೆಡಿಪಿ ಗುರಿಗೆ ತಕ್ಕಂತೆ […]

Continue Reading

ಕಾರ್ಯ ಮರೆತ ಪತ್ರಕರ್ತರಿಂದ ಸಮಾಜಕ್ಕೆ ಅಪಾಯ: ಶಿವಸುಂದರ ಬೆಂಗಳೂರು ವಿಷಾದ

ಚಿತ್ತಾಪುರ: ಪತ್ರಕರ್ತರಲ್ಲಿ ಕಾರ್ಯನಿರತ ಪತ್ರಕರ್ತರು ಮತ್ತು ಕಾರ್ಯಮರೆತ ಪತ್ರಕರ್ತರು ಎಂಬ ಎರಡು ಭಾಗಗಳಿದ್ದು, ಕಾರ್ಯ ಮರೆತ ಪತ್ರಕರ್ತರು ದೇಶಕ್ಕೆ ಅಪಾಯಕಾರಿ ಎಂದು ಲೇಖಕ, ಪ್ರಗತಿಪರ ಚಿಂತಕ ಶಿವಸುಂದರ ಬೆಂಗಳೂರು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರಿಂದ ಮಾತ್ರ ಸಮೃದ್ಧಿ ದೇಶ ಕಟ್ಟಲು ಸಾಧ್ಯ ಎಂದರು. ಕನಸಿನ ಭಾರತ ಕಟ್ಟಬೇಕಾಗಿದೆ. ಬಂಡವಾಳ ಶಾಹಿ […]

Continue Reading

ಗುಂಡಗುರ್ತಿ ಪ್ರೌಢಶಾಲೆಯಲ್ಲಿ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ತಾಪುರ: ಗುಂಡಗುರ್ತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭನ್ವರ್‌ಸಿಂಗ್ ಮೀನಾ ಅವರು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು. ತಾಲೂಕಿನ ಗುಂಡಗುರ್ತಿ ಪ್ರೌಢ ಶಾಲೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಭೇಟಿ ನೀಡಿ ಶಾಲೆಯ ಕೋಣೆಗಳು, ಆವರಣವನ್ನು ವಿಕ್ಷಿಸಿದರು, ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಗ್ರಾ.ಪಂ ಅಧ್ಯಕ್ಷೆ ಸಂಪೂರ್ಣ ಬಣ್ಣಕ್ಕಿ, ಪಿಡಿಒ, […]

Continue Reading