ರಕ್ತದಾನದಿಂದ ಆರೋಗ್ಯ ವೃದ್ಧಿ: ಮಾಲಗತ್ತಿ ಶ್ರೀ

ಸುದ್ದಿ ಸಂಗ್ರಹ ಶಹಾಬಾದ ರಕ್ತದಾನ ಮಾಡುವದರಿಂದ ಜೀವ ಉಳಿಸಿದ ಭಾವನೆ ಜೊತೆಗೆ ದಾನಿಯ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದ ಪೂಜ್ಯ ಚನ್ನಬಸವ ಶರಣರು ಹೇಳಿದರು. ತಾಲೂಕಿನ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ಶ ಶಹಾಬಾದ ತಾಲೂಕ ಪತ್ರಕರ್ತರು ಹಾಗೂ ಕಲಬುರಗಿಯ ಜೀವನ ಆಧಾರ ಮೆಡಿಕಲ್ ಫೌಂಡೇಷನ್ ಮತ್ತು ರಕ್ತ ನಿಧಿಕೇಂದ್ರದ ಸಹಯೋಗದೊಂದಿಗೆ ಉಚಿತ ಆರೋಗ್ಯತಪಾಸಣೆ, ಔಷಧ ವಿತರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬರುವ ಮುನ್ನ ಆಗಾಗ್ಗೆ […]

Continue Reading

ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ

ಸೇಡಂ: ವಿಜಯನಗರ ಜಿಲ್ಲೆಯಲ್ಲಿ ಫೆ.28 ರಂದು ನಡೆಯುವ ಪ್ರಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕವಿ, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಫೆ.28 ರಿಂದ ಮಾ.2 ವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 10.30 ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಲಿರುವ ಯುವ ಕವಿ ಗೋಷ್ಠಿಯಲ್ಲಿ ವಿಜಯಭಾಸ್ಕರರೆಡ್ಡಿ ತಮ್ಮ ಕವಿತೆ ವಾಚಿಸಲಿದ್ದಾರೆ. ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದಾರೆ, ಸಾಹಿತಿ ಎಸ್.ವಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

Continue Reading

ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾಗಲಿ: ಸಿದ್ದಲಿಂಗ ಶ್ರೀ

ಸುದ್ದಿ ಸಂಗ್ರಹ ಶಹಾಬಾದ ಸಮಾಜ ಸಂಘಟನೆಯಲ್ಲಿ ವಯಕ್ತಿಕ ಹಿತಾಸಕ್ತಿ, ರಾಜಕೀಯ ರಹಿತವಾದಾಗ ಮಾತ್ರ ಸಮಾಜದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ತಾಂಡಾದ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾದಾಗ ಸಂತ ಸೇವಾಲಾಲ್ ಮಹಾರಾಜರಿಗೆ ಸಂತೃಪ್ತಿಯಾಗುತ್ತದೆ ಎಂದು ರಾವೂರ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ನಗರದ ರೈಲು ನಿಲ್ದಾಣದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ರಾಜಕೀಯ ಮತ್ತು ವೈಯಕ್ತಿಕ ದ್ವೇಷಗಳನ್ನು ಸಮಾಜದ ಹೊರಗೆ ಇಡಬೇಕು. ಸಮಾಜದ ಉನ್ನತಿಗಾಗಿ ದುಡಿಯಬೇಕು ಎಂದರು. […]

Continue Reading

ಸುಕ್ಷೇತ್ರಗಳ ದರ್ಶನದಿಂದ ಅಧ್ಯಾತ್ಮಿಕ ಜ್ಞಾನ, ನೆಮ್ಮದಿ ದೊರೆಯಲು ಸಾಧ್ಯ

ಚಿತ್ತಾಪುರ: ದೇಶ ಸುತ್ತು-ಕೋಶ ಓದು ಎಂಬ ಮಾತಿನಂತೆ, ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ ಅರಿಯಲು ಅಧ್ಯಯನ ಮಾಡುವದರ ಜೊತೆಗೆ ಐತಿಹಾಸಿಕ ಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡುವುದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಮನಸಿಗೆ ನೆಮ್ಮದಿ ದೊರೆಯಲು ಸಾಧ್ಯವಿದೆ ಎಂದು ಸಮಾಜ ಸೇವಕ ನರಸಪ್ಪ ಬಿರಾದಾರ ದೇಗಾಂವ ಮತ್ತು ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು. ತಾಲೂಕಿನ ಸುಕ್ಷೇತ್ರ ನಾಲವಾರನ ಕೋರಿಸಿದ್ದೇಶ್ವರ ಮಠಕ್ಕೆ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿಗೆ ಕೋರಿಸಿದ್ದೇಶ್ವರ […]

Continue Reading

ಸುಕ್ಷೇತ್ರಗಳ ದರ್ಶನದಿಂದ ಅಧ್ಯಾತ್ಮಿಕ ಜ್ಞಾನ, ನೆಮ್ಮದಿ ದೊರೆಯಲು ಸಾಧ್ಯ

ಚಿತ್ತಾಪುರ: ದೇಶ ಸುತ್ತು-ಕೋಶ ಓದು ಎಂಬ ಮಾತಿನಂತೆ, ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ ಅರಿಯಲು ಅಧ್ಯಯನ ಮಾಡುವದರ ಜೊತೆಗೆ ಐತಿಹಾಸಿಕ, ಸುಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡುವುದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಮನಸಿಗೆ ನೆಮ್ಮದಿ ದೊರೆಯಲು ಸಾಧ್ಯ ಎಂದು ಸಮಾಜ ಸೇವಕರಾದ ನರಸಪ್ಪ ಬಿರಾದಾರ ದೇಗಾಂವ ಮತ್ತು ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು. ತಾಲೂಕಿನ ಸುಕ್ಷೇತ್ರ ನಾಲವಾರನ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿಗೆ […]

Continue Reading

ಸಾಮ್ರಾಟ ಅಶೋಕ ಸಮಾಜಮುಖಿ ಅರಸ

ಚಿತ್ತಾಪುರ: ಇಂದ್ರಿಯಗಳ ಸಂಯಮ, ಭಾವಶುದ್ಧಿ ಚಿಂತನೆ, ಕೃತಜ್ಞತಾ ಭಾವ, ದೃಢ ಭಕ್ತಿ, ದಯೆ, ದಾನ, ಆತ್ಮ ಶುದ್ಧತೆ, ಸತ್ಯ, ಸೇವಾಗುಣದಂತಹ ತತ್ವಗಳನ್ನು ಅಳವಡಿಸಿಕೊಂಡು ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಕಂಡ ಸಾಮ್ರಾಟ ಅಶೋಕ ಅಪರೂಪದ ಅರಸನಾಗಿದ್ದರು ಎಂದು ಸಮಾಜ ಸೇವಕ, ಚಿಂತಕ ಡಾ.ಸುನೀಲಕುಮಾರ ಎಚ್ ವಂಟಿ ಹೇಳಿದರು. ತಾಲೂಕಿನ ಸನ್ನತಿ ಗ್ರಾಮದ ಬುದ್ಧ ವಿಹಾರದ ಅಶೋಕ ಶಾಸನದ ಸ್ಥಳಕ್ಕೆ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಐತಿಹಾಸಿಕ ಕ್ಷೇತ್ರಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-11’ರಲ್ಲಿ ಮಾತನಾಡಿದ […]

Continue Reading

ಸಂಸ್ಕೃತಿ, ಪರಂಪರೆಯ ಕುರುಹಾದ ಮಾತೃಭಾಷೆಯ ರಕ್ಷಣೆ ಅಗತ್ಯ  

ಚಿತ್ತಾಪುರ: ಮಾತೃಭಾಷೆ ಸಂಸ್ಕೃತಿ, ಪರಂಪರೆಯ ಕುರುಹುವಾಗಿದೆ ಇದರ ರಕ್ಷಣೆ ಅಗತ್ಯವಾಗಿದೆ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.  ತಾಲೂಕಿನ ಕನಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಮಾತೃಭಾಷೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಮಾತು ಮನುಷ್ಯನಿಗೆ ದೇವರು ನೀಡಿದ ವಿಶೇಷ ವರವಾಗಿದೆ. ಇದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ ಎಂದರು.  ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ,  ಮಾತೃಭಾಷೆಯನ್ನು ಹೃದಯದಿಂದ ಪ್ರೀತಿಸಿ, ಗೌರವಿಸಬೇಕು. […]

Continue Reading

ನಮ್ಮ ನೆಲದ ಸಾಧಕರಿಗೆ ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಲಿ: ಪರ್ವತರೆಡ್ಡಿ ಪಾಟೀಲ

ಸೇಡಂ: ಕಕ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ. ಅವರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ತಾ‌.ಪಂ ಮಾಜಿ ಸದಸ್ಯ ಮತ್ತು ಶಿಕ್ಷಣ ಪ್ರೇಮಿ ಪರ್ವತರೆಡ್ಡಿ ಪಾಟೀಲ ನಾಮವಾರ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಕೋಡ್ಲಾ ಗ್ರಾಮದ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಪರೋಪಕಾರಿ, ಸಮಾಜ ಸೇವಕ ಲಿಂ.ಬಸವಂತರಾವ ಸಿ.ಪಾಟೀಲ ಅವರ ತೃತೀಯ ಲಿಂಗೈಕ್ಯ ಸ್ಮರಣೋತ್ಸವದ ಪ್ರಯುಕ್ತ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ […]

Continue Reading

ಶಿಸ್ತುಬದ್ದ ಅಧ್ಯಯನ, ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ

ಕಲಬುರಗಿ: ನಿರಂತರ ಅಧ್ಯಯನ, ಧನಾತ್ಮಕ ಚಿಂತನೆಯೊಂದಿಗೆ ನಿರಂತರವಾಗಿ ಪ್ರಯತ್ನಿಸಿದರೆ, ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಗುವಿವಿ ಸಿಂಡಿಕೇಟ್ ಸದಸ್ಯ ಹಾಗೂ ಪ್ರಗತಿಪರ ಚಿಂತಕ ಎಸ್.ಪಿ ಸುಳ್ಳದ ಹೇಳಿದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರಕಾರಿ ಪದವಿ ಪೂರ್ವ ಕಾಲೀಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾಲೇಜಿನ 67ನೇ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಗದಿತ ಗುರಿಯನ್ನಿಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು, ಶಾಂತತೆ, ಸಮಯ […]

Continue Reading

ಸವಿತಾ ಸಮಾಜದ ಕಾಯಕ ಶ್ರೇಷ್ಠ: ಬಸವರಾಜ ಮತ್ತಿಮೂಡ 

ಸುದ್ದಿ ಸಂಗ್ರಹ ಶಹಾಬಾದ ಸವಿತಾ ಸಮಾಜ ಬಾಂಧವರ ಹಾಗೂ ಹರಳಯ್ಯ ಸಮಾಜ ಬಾಂಧವರ ಕಾಯಕ ಶ್ರೇಷ್ಠವಾದದ್ದು, ಸಣ್ಣ ಸಮಾಜ ದೊಡ್ಡ ಸಮಾಜ ಎಂದು ಪ್ರತ್ಯೇಕಿಸಿ ನೋಡಬಾರದು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಖುರ್ಷಿದ್ ಮೋಹಲ್ಲಾದಲಿ ನಡೆದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಸವಿತಾ ಸಮಾಜದ ಸಮುದಾಯ ಭವನದ ಕಾಂಪೌಂಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜವು ಆರ್ಥಿಕವಾಗಿ ಹಿಂದೆ ಉಳಿದಿರಬಹುದು, ಆದರೆ ಶೈಕ್ಷಣಿಕವಾಗಿ ಮುಂದೆ ಬರುತ್ತಿರುವುದು ಸಂತೋಷದಾಯಕ, ಮುಂದೆ ಯಾವುದೆ ಕೆಲಸ ಕಾರ್ಯಕ್ಕೆ ನಾನು […]

Continue Reading