ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ: ಗುರುರಾಜ ಸಂಗಾವಿ

ಸುದ್ದಿ ಸಂಗ್ರಹ ಶಹಾಬಾದ್: ಪಠ್ಯ ಶಿಕ್ಷಣದ ಜೊತೆಗೆ ಸಮುದಾಯದ ಪರಿಚಯ, ಸೇವೆಯ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆಯ ಮೂಲಕ ಸಮಗ್ರತೆ ಪರಿಕಲ್ಪನೆ ಸೇರಿದಂತೆ ಹಲವು ಚಿಂತನೆಗೆ ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಗುರುರಾಜ ಸಂಗಾವಿ ಹೇಳಿದರು. ನಗರದ ಎಸ್ಎಸ್ ಮರಗೋಳ ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಎನ್ಎಸ್ಎಸ್ ಮತ್ತು ಬಿ ಘಟಕದ ವಾರ್ಷಿಕ ವಿಶೇಷ ಶಿಬಿರವ ಉದ್ಘಾಟಿಸಿ ಮಾತನಾಡಿದ ಅವರು, […]

Continue Reading

ಅಳ್ಳೊಳ್ಳಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅಮಾನತು

ಚಿತ್ತಾಪುರ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ಕಂಡುಬಂದಿರುವ ಪ್ರಯುಕ್ತ ಅಳ್ಳೊಳ್ಳಿ ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್’ಸಿಂಗ್ ಮೀನಾ ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಅವರು ಅರ್ಜಿ ಸಲ್ಲಿಸಿ ಮಾಹಿತಿ ಕೇಳಿರುವ ಪ್ರಯುಕ್ತ ಅಳ್ಳೊಳ್ಳಿ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರು ಕರೆ ಮಾಡಿ, ಬ್ಲಾಕಮೇಲ್ ಮಾಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ […]

Continue Reading

ಸಮಾಜಕ್ಕೆ ಸಿದ್ದಮುನಿಂದ್ರ ಶಿವಯೋಗಿಗಳ ಕೊಡುಗೆ ಅಪಾರ

ಚಿತ್ತಾಪುರ: ಮಠ ಕಟ್ಟದೆ, ಭಕ್ತರ ಮನಸ್ಸನ್ನು ಕಟ್ಟಿರುವ ಪವಾಡ ಪುರುಷ, ನಡೆದಾಡುವ ದೇವರು, ಸದಾ ಸಮಾಜಪರ ಕಾಳಜಿ ಹೊಂದಿದ್ದ ಸಿದ್ದಮುನಿಂದ್ರ ಶಿವಯೋಗಿಗಗಳ ಕೊಡುಗೆ ಅಪಾರ ಎಂದು ಕಲಬುರಗಿಯ ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು. ತಾಲೂಕಿನ ಬೆಳಗುಂಪಾ ಪರ್ವತೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ಜರುಗಿದ ಮಠದ ಪೂಜ್ಯ ಸಿದ್ದಮುನಿಂದ್ರ ಶಿವಯೋಗಿಗಳ ದ್ವಿತೀಯ ವರ್ಷದ ಲಿಂಗೈಕ್ಯ ಸ್ಮರಣೋತ್ಸವ ಹಾಗೂ ತನಾರತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಧ್ಯಾನದಿಂದ ಮನಸ್ಸು ಶುದ್ಧಿ, ದಾನದಿಂದ ಸಮಾಜ ಶುದ್ದಿಯಾಗುತ್ತದೆ. ಸಮಾಜದಲ್ಲಿ ಗುರುವಿನ […]

Continue Reading

ದೂರಿಗೆ ಸ್ಪಂಧಿಸದ ಅಧಿಕಾರಿಗಳು: ಮಾನಸಿಕ ಆಘಾತದಿಂದ ವರದಿಗಾರ ಆಸ್ಪತ್ರೆ ಪಾಲು

ಚಿತ್ತಾಪುರ: ಮಾ.5 ರಂದು ತಾಲೂಕಿನ ಆಲಹಳ್ಳಿ ಗ್ರಾ‌.ಪಂ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕೆ ಅವರು ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಇರುವದು ನಾಗಯ್ಯ ಸ್ವಾಮಿ ಅವರ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜ್‌ ಎಸ್ ಮಲ್ಕಂಡಿ ಆರೋಪಿಸಿದ್ದಾರೆ ಮಾ.6 ರಂದು ದೂರು ನೀಡಿದರೂ ಸ್ಪಂದನೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗಯ್ಯ ಸ್ವಾಮಿ ಅವರು ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ […]

Continue Reading

ದೇವಿ ಪುರಾಣ ಆಲಿಸಿದರೆ ಚಿಂತೆಗಿಲ್ಲ ಜಾಗ: ಸಿದ್ದಸೋಮೇಶ್ವರ ಶಿವಾಚಾರ್ಯರು

ಚಿತ್ತಾಪುರ: ದೇವಿ ಪುರಾಣ ಆಲಿಸುವುದರಿಂದ ನಮ್ಮ ಜೀವನದ ಚಿಂತೆ ದೂರವಾಗಿ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಗುಂಡೆಪಲ್ಲಿಯ ಸೋಮೇಶ್ವರ ಮಠದ ಸಿದ್ದಸೋಮೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಇತಿಹಾಸವನ್ನು ಹೇಳಿಕೊಡುವ ದೇವಿ ಪುರಾಣ ತುಂಬಾ ವಿಶೇಷವಾಗಿದೆ. ಬೇರೆ ಎಲ್ಲಾ ಪುರಾಣಕ್ಕು ದೇವಿ ಪುರಾಣಕ್ಕು ತುಂಬಾ ವ್ಯತ್ಯಾಸವಿದೆ, ದೇವಿ ಪುರಾಣ ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ ಇಷ್ಟೊಂದು ವಿಶೇಷವಾಗಿದೆ […]

Continue Reading

ಭೀಮೇಶ್ವರ ಟ್ರಸ್ಟ್ ವತಿಯಿಂದ ಹಣ್ಣು, ಖಜೂರಿ ವಿತರಣೆ

ತೆಂಗಳಿ: ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ವೃತ ಮಾಡುವ ಮುಸ್ಲಿಂ ಬಾಂಧವರಿಗೆ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ರವಿವಾರ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು. ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು. ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಉಪವಾಸ ವೃತ ಕೈಗೊಳ್ಳುತ್ತಾರೆ. ಈ ವರ್ಷವು ಉಪವಾಸ ವೃತ ಆರಂಭಿಸಲಾಗಿದೆ. ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ ಎಂದರು. ತೆಂಗಳಿ […]

Continue Reading

ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯ್ತಿ ಪಾಸ್‌ ವಿತರಣೆ ಮಾಡಲು ಮಹ್ಮದ್ ಇಬ್ರಾಹಿಂ ಆಗ್ರಹ 

ಚಿತ್ತಾಪುರ: ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಪಾಸ್ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಹೊಂಗಿರಣ ತಾಲೂಕಾ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಮ್ ಒತ್ತಾಯಿಸಿದರು.  ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಹಸೀಲ್ದಾ‌ರರಿಗೆ ಸಲ್ಲಿಸಿ  ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 60 ವರ್ಷ […]

Continue Reading

ಶಹಾಬಾದ ಹೋಳಿ ಹಬ್ಬ ಮಾದರಿಯಾಗಲಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ

ಸುದ್ದಿ ಸಂಗ್ರಹ ಶಹಾಬಾದ: ಹೋಳಿ ಹಬ್ಬದಲ್ಲಿ ಕಾಮದಹನ ಮಾಡುವಾಗ ವಿದ್ಯುತ್ ತಂತಿ, ಕೇಬಲ್, ವಿದ್ಯುತ್ ಟಿಸಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ದಿನದಂದು ಒತ್ತಾಯಪೂರ್ವಕವಾಗಿ ಬಣ್ಣ ಎರಚುವುದು ಅಥವಾ ಶಾಂತಿ ಕದಡುವ ಕೆಲಸ ಮಾಡಬಾರದು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬ ಅಚರಿಸಿ ಮಾದರಿಯಾಗಲಿ ಎಂದರು. […]

Continue Reading

ಮಾನವನಿಂದ ಮಾನವನ ಶೋಷಣೆ ತಪ್ಪಿಸಲು ಜೆ.ವಿ ಸ್ಟಾಲಿನ್ ವಿಚಾರಗಳು ಅಗತ್ಯ

ಸುದ್ದಿ ಸಂಗ್ರಹ ಶಹಾಬಾದ ವಿಶ್ವದಲ್ಲಿ ಬಂಡವಾಳಶಾಹಿಗಳ ಹಾಗೂ ಸಾಮ್ರಾಜ್ಯಶಾಹಿಗಳ ಮಾರುಕಟ್ಟೆಗಾಗಿ ಯುದ್ಧವನ್ನು ಪ್ರಚೋದಿಸುತ್ತಿದ್ದು ಮಾನವ ಕುಲವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವದು ಒಂದು ಕಡೆಯಾದರೆ, ಮಾನವನ ಶ್ರಮ ನಿರಂತರವಾಗಿ ಶೋಷಣೆ ಮಾಡುತ್ತಿರುವದು ಮತ್ತೊಂದೆಡೆ ಕಾಣಬಹುದು ಎಂದು ಎಸ್’ಯುಸಿಐ (ಸಿ) ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ ಕೆ ಮಾನೆ ಹೇಳಿದರು. ಹನುಮಾನ ನಗರದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಜೆ.ವಿ ಸ್ಟಾಲಿನ್ ಅವರ 72ನೇ ಸ್ಮರಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದುಡಿಯುವ […]

Continue Reading

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಆಯ್ಕೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರರೆಡ್ಡಿ ದುಗನೂರ ಆಯ್ಕೆಯಾಗಿದ್ದಾರೆ ಎಂದು ಚಿತ್ತಾಪುರ ಪ್ರಾದೇಶಿಕ ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳು ಆಯ್ಕೆ ದಿಗ್ಗಾಂವ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ದೇವಿಂದ್ರಪ್ಪ ಎನ್ ದೊರೆ (ಉಪಾಧ್ಯಕ್ಷರು), ಅಲ್ಲೂರು(ಬಿ) ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ವೆಂಕಟಪ್ಪ (ಪ್ರಧಾನ ಕಾರ್ಯದರ್ಶಿ), ಚಿತ್ತಾಪುರ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ರಮೇಶ ಸಾಲೂಟಗಿ (ಖಜಾಂಚಿ), ಕೊಂಚೂರ […]

Continue Reading