ವಾಡಿ: ಬಿಜೆಪಿ ಕಛೇರಿಯಲ್ಲಿ ಸಮರ್ಪಣಾ ದಿನಾಚರಣೆ

ಸುದ್ದಿ ಸಂಗ್ರಹ ವಾಡಿಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜನಸಂಘದ ಸಿದ್ದಾಂತವಾದಿ ಪಂಡಿತ ದೀನ್‍ದಯಾಳ್ ಉಪಾಧ್ಯಾಯರಪುಣ್ಯತಿಥಿ ನಿಮಿತ್ಯ ಸಮರ್ಪಣಾ ದಿನ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತೀಯ ಜನಸಂಘದ ಪ್ರಮುಖ ಸಿದ್ಧಾಂತಿ, ತತ್ವಜ್ಞಾನಿ ಮತ್ತು ರಾಷ್ಟ್ರೀಯ ನಾಯಕರಾಗಿದ್ದ ಪಂಡಿತ್ ಜೀ, ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ ಪರಿಕಲ್ಪನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳ್ಗೆಗೆ ಶ್ರಮಿಸಿದ ಮಹಾನ್ ರಾಷ್ಟ್ರಪ್ರೇಮಿ ಎಂದರು. ದೇಶದ ಏಕತೆಗಾಗಿ, ಸಂಘಟನೆಯ ಸೇವೆಯಲ್ಲಿದ್ದ […]

Continue Reading

ನೇತಾಜಿ ಸುಭಾಷ್ ಚಂದ್ರ ಬೋಸ್’ರ ವಿಚಾರ, ಆದರ್ಶ ಮೌಲ್ಯಗಳು ಎತ್ತಿ ಹಿಡಿಯುವದು ಅವಶ್ಯಕ: ಡಾ.ರಮೇಶ ಲಂಡನಕರ್

ಸುದ್ದಿ ಸಂಗ್ರಹ ಶಹಾಬಾದನೇತಾಜಿಯವರ ವಿಚಾರ, ಆದರ್ಶ ಮೌಲ್ಯಗಳು ಎತ್ತಿ ಹಿಡಿಯುವುದು ಅವಶ್ಯಕ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಮೇಶ ಲಂಡನಕರ್ ಹೇಳಿದರು. ನಗರದ ಸಿದ್ದರಾಮೇಶ್ವರ ಶಾಲಾ ಮೈದಾನದಲ್ಲಿ ಎಐಡಿಎಸ್‌ಓ ಎಐಡಿವೈಓ ಮತ್ತು ಎಐಎಂಎಸ್‌ಎಸ್‌ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ ಚಂದ್ರ ಬೋಸ್’ರ 129ನೇ ಜನ್ಮದಿನದ ನಿಮಿತ್ಯ ನಡೆದ 13ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತ ದೇಶ ಸ್ವಾತಂತ್ರಗೊಳಿಸುವುದಷ್ಟೆ ಅಲ್ಲ, ಸಮಗ್ರ ಸಮಾನತೆಯ ಸ್ವಾತಂತ್ರ್ಯ ಮತ್ತು ಶೋಷಣೆ ಇಲ್ಲದ ಸಮಾಜ ನಿರ್ಮಿಸಬೇಕು. […]

Continue Reading

ಉದ್ಯಮಿಗೆ 2 ಕೋಟಿ ರೂ ಪಂಗನಾಮ: ಕರ್ತವ್ಯ ಲೋಪ ಸಾಬೀತು, ಡಿವೈಎಸ್‌ಪಿ ಕಲ್ಪನಾ ವರ್ಮಾ ಅಮಾನತು

ಸುದ್ದಿ ಸಂಗ್ರಹ ನವದೆಹಲಿ ಛತ್ತೀಸ್‌ಗಢದಲ್ಲಿ ಉದ್ಯಮಿಯೊಬ್ಬರು ಮಾಡಿದ ಆರೋಪದ ಹಿನ್ನೆಲೆಯಲ್ಲಿ, ಡಿವೈಎಸ್‌ಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಉದ್ಯಮಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯ ನಂತರ, ಪೊಲೀಸ್ ಅಧಿಕಾರಿ ಕಲ್ಪನಾ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ. ಡಿಸೆಂಬರ್ 16 ರಂದು ಉದ್ಯಮಿ ದೀಪಕ್ ಟೋಂಡನ್ ಅವರು ದಂತೆವಾಡ ಡಿವೈಎಸ್‌ಪಿ ಕಲ್ಪನಾ ವರ್ಮಾ ವಿರುದ್ಧ ಛತ್ತೀಸ್‌ಗಢ ಪೊಲೀಸ್ ಮಹಾನಿರ್ದೇಶಕ ಅರುಣ್ ದೇವ್ ಗೌತಮ್ ಅವರಿಗೆ ಲಿಖಿತ ದೂರು ನೀಡಿದ್ದರು. […]

Continue Reading

ವಿಧಾನಸೌಧದ ಪಕ್ಕದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಧಾರ್ಮಿಕ ಸೌಧ: 27 ಕೋಟಿ ವೆಚ್ಚದಲ್ಲಿ ನಿರ್ಮಾಣ

ಸುದ್ದಿ ಸಂಗ್ರಹ ಬೆಂಗಳೂರುವಿಧಾನಸೌಧದ ಸಮೀಪದ ಎಂ‌‌.ಎಸ್ ಬಿಲ್ಡಿಂಗ್ ಎದುರುಗಡೆ ಇರುವ ಮುಜರಾಯಿ ಇಲಾಖೆಯ ಜಾಗದಲ್ಲಿ ಧಾರ್ಮಿಕಸೌಧ ನಿರ್ಮಾಣವಾಗಲಿದೆ. ದೇಶದಲ್ಲೆ ಮೊದಲ ಬಾರಿಗೆ ಇಂತಹದೊಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಹೊಯ್ಸಲ ಮಾದರಿಯಲ್ಲಿ ಈ ಕಟ್ಟಡ ತಲೆ ಎತ್ತಲಿದೆ. ಧಾರ್ಮಿಕ ಸೌಧ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಸೋಮವಾರ ನೆರವೇರಿದೆ. ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸುವರು. ದೇಶದ ಪ್ರಥಮ ಧಾರ್ಮಿಕ ಸೌಧದೇಶದ ಪ್ರಥಮ ಧಾರ್ಮಿಕ ಸೌಧ ಇದಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. […]

Continue Reading

ಮೂರ್ಛೆ ರೋಗದ ಬಗ್ಗೆ ಎಚ್ಚರವಿರಲಿ: ಡಾ.ಅನುಪಮಾ

ಸುದ್ದಿ ಸಂಗ್ರಹ ಕಲಬುರಗಿ ಮೆದುಳಿನ ಅಸಹಜ ಚಟುವಟಿಕೆಯಿಂದ ಮೂರ್ಛೆ ರೋಗ ಬರುತ್ತದೆ. ಪ್ರಜ್ಞಾರಹಿತ ಕೈಕಾಲುಗಳ ಸೆಳೆತ, ತಲೆತಿರುಗುವಿಕೆ ಮತ್ತು ಕಣ್ಣು ಗುಡ್ಡೆ ಮೇಲ್ಮುಖವಾಗಿ ತಿರುಗುವ ಲಕ್ಷಣ ಕಂಡುಬಂದರೆ ತಜ್ಞ ವೈದ್ಯರಿಗೆ ಭೇಟಿಯಾಗಿ ತಪಾಸಣೆ ನಡೆಸಿ, ಚಿಕಿತ್ಸೆ ಪಡೆಯಬೇಕು. ಇದರ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಮೂರ್ಛೆ ರೋಗ ಜಾಗೃತಿ ದಿನಾಚರಣೆ”ಯಲ್ಲಿ […]

Continue Reading

ಗಂಡನಿಲ್ಲದ ವೇಳೆ ಜಮೀನ್ದಾರ್‌ಗೆ ಸುಚಿತ್ರಾ ಬುಲಾವ್: ಕಲಬುರಗಿ ಜಮೀನ್ದಾರ ಜೊತೆ 3 ವರ್ಷ ಲವ್ವಿ-ಡವ್ವಿ

ಸುದ್ದಿ ಸಂಗ್ರಹ ಕಾರವಾರ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾಳ ನೌಟಂಕಿ ಆಟ ಒಂದೊಂದೆ ಬಟಾಬಯಲಾಗುತ್ತಿದೆ. ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿ-ಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು. ಆತನೊಂದಿಗಿರುವ ಖಾಸಗಿ ಕ್ಷಣದ ಫೋಟೋ ಲಭ್ಯವಾಗಿವೆ. ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ […]

Continue Reading

ಶಹಾಬಾದ್: ಡಯಾಲಿಸಿಸ್ ಘಟಕ ಮತ್ತು ರಕ್ತದಾನ ಘಟಕ ಉದ್ಘಾಟನೆ

ಸುದ್ದಿ ಸಂಗ್ರಹ ಶಹಾಬಾದ್ರಕ್ತದಾನ ಘಟಕ ಮತ್ತು ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದ್ದು ತುಂಬಾ ಸಂತೋಷದ ವಿಷಯ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಡಯಾಲಿಸಿಸ್ ಕೇಂದ್ರ ಮತ್ತು ರಕ್ತದಾನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಘೋಷಣೆಯಾದ ನಂತರ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಸೌಲಭ್ಯ ದೊರೆಯುವಂತೆ ಗಮನ ಹರಿಸುತ್ತಿದ್ದೆನೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ಮಾತ್ರೆಗಳ ಮತ್ತು ಔಷಧಿಗಳ ಅವಶ್ಯಕತೆ ಇರುವಷ್ಟು ಪೂರೈಕೆ ಆಗದಿರುವುದು ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ, […]

Continue Reading

ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಸೀಮಿತವಾಗದೆ ಸಮಗ್ರ ವಿಕಾಸಕ್ಕೆ ಕಾರಣವಾಗಲಿ: ಮರಿಯಪ್ಪ ಹಳ್ಳಿ

ಸುದ್ದಿ ಸಂಗ್ರಹ ಶಹಾಬಾದ್ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಶಿಕ್ಷಣದ ಮಹತ್ತರ ಉದ್ದೇಶವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು. ನಗರದ ಇಂಗಿನಶೆಟ್ಟಿ ಸಭಾಗೃಹದಲ್ಲಿ ನಡೆದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟ ಶಾಲೆ, ನಂದಗೋಕುಲ ಶಾಲೆ, ವಿಜಯ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಹಬ್ಬ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ […]

Continue Reading

ಫೆ‌‌.9 ರಿಂದ ಶಹಾಬಾದ್ ಸಾಂಸ್ಕೃತಿಕ ಜನೋತ್ಸವ

ಸುದ್ದಿ ಸಂಗ್ರಹ ಶಹಾಬಾದ್ನೇತಾಜಿ ಸುಭಾಷ್ ಚಂದ್ರ ಬೋಸ್’ರ 129ನೇ ಜನ್ಮ ದಿನಾಚರಣೆ ಅಂಗವಾಗಿ 13ನೇ ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಹೇಳಿದರು. ಹನುಮಾನ ನಗರ ಸಂಘಟನಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿವೈಓ, ಎಐಡಿಎಸ್ಓ ಮತ್ತು ಎಐಎಂಎಸ್ಎಸ್ ವತಿಯಿಂದ ಸಿದ್ದರಾಮೇಶ್ವರ ಶಾಲಾ ಆವರಣದಲ್ಲಿ ಫೆ.9 ಮತ್ತು 10ರಂದು ಸಂಜೆ 5:30ಕ್ಕೆ ಸಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಸಂಸ್ಕೃತಿಕ ನಾಟಕ, ನೃತ್ಯ, ಜಾನಪದ ಗೀತೆ, ಕೋಲಾಟ, ಡೊಳ್ಳಿನ […]

Continue Reading

ಕಲಬುರಗಿ: ಸರಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಸುದ್ದಿ ಸಂಗ್ರಹ ಕಲಬುರಗಿನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯಿಂದ ಗುತ್ತಿಗೆ ಅವಧಿ ವಿಸ್ತರಣೆ ಹಿನ್ನಲೆಯಲ್ಲಿ ವಿಧಿ‌ಸಲಾದ 2.ಕೋಟಿ 3.7 ಲಕ್ಷ ರೂ ಗುತ್ತಿಗೆ ಶುಲ್ಕ ಭರಿಸಲು ಆದೇಶಿಸಲಾಗಿದೆ. ಆದರೆ ಸರ್ಕಾರಿ ನೌಕರರ ಸಂಘಕ್ಕೆ ಯಾವುದೆ ಆದಾಯ ಮೂಲಗಳಿಲ್ಲ ಹೀಗಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಭರಿಸಲು ತೊಂದರೆಯಾಗುತ್ತಿದೆ, ಅದಕ್ಕಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಸಂಪೂರ್ಣವಾಗಿ ವಿನಾಯಿತಿಗೊಳಿಸಲು ಸರ್ಕಾರಕ್ಕೆ ತಾವು ಪ್ರಸ್ತಾವನೆ […]

Continue Reading