ಕಲಬುರಗಿಯಲ್ಲಿ ರೌಡಿಗಳ ಪರೇಡ್‌: ಮತ್ತೆ ಬಾಲ ಬಿಚ್ಚಿದ್ರೆ ಹುಷಾರ್‌

ಸುದ್ದಿ ಸಂಗ್ರಹ ಕಲಬುರಗಿನಗರದಲ್ಲಿ ಶನಿವಾರ 327 ರೌಡಿಗಳ ಪರೇಡ್‌ ನಡೆಸಿದ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಅವರು, ಮತ್ತೆ ಬಾಲ ಬಿಚ್ಚಿದ್ರೆ ಹುಷಾರ್‌, ಇನ್ಮುಂದೆ ಒಂದೆ ಒಂದು ಸಣ್ಣ ಕೇಸ್‌ನಲ್ಲಿ ಭಾಗಿಯಾದ್ರೂ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರದ ಸಿಎಆರ್‌ ಪರೇಡ್ ಮೈದಾನದಲ್ಲಿ ಈ ರೌಡಿಗಳ ಪರೇಡ್‌ ನಡೆಯಿತು. ನಗರ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿನ 10 ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಶನಿವಾರ ಬೆಳ್ಳಂಬೆಳಗ್ಗೆ ರೌಡಿಗಳ ಮನೆ ತಪಾಸಣೆ ನಡೆಸಿದರು. ಬೆಳಕು […]

Continue Reading

ಕಲಬುರಗಿ: ಕಬ್ಬಿಣದ ರಾಡ್‌ನಿಂದ ಹೊಡೆದು ಸೆಕ್ಯುರಿಟಿ ಗಾರ್ಡ್ ಹತ್ಯೆ

ಸುದ್ದಿ ಸಂಗ್ರಹ ಕಲಬುರಗಿನಗರದ ರಾಮ ಮಂದಿರದ ಬಳಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಭದ್ರತಾ ಸಿಬ್ಬಂದಿಯೊಬ್ಬರನ್ನು ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ​ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ (45) ಕೊಲೆಯಾದ ದುರ್ದೈವಿ. ಹಾಲಿ ನಗರದ ರಾಣೇಶಪೀರ್ ದರ್ಗಾ ಪ್ರದೇಶದಲ್ಲಿ ನೆಲೆಸಿದ್ದರು. ರವಿಚಂದ್ರ ಕಳೆದ ನಾಲ್ಕು ವರ್ಷಗಳ ಹಿಂದಷ್ಟೆ ಬಿಎಸ್‌ಎಫ್‌ನಿಂದ್‌ ನಿವೃತ್ತರಾಗಿದ್ದರು. ಸದ್ಯ ಕಲಬುರಗಿಯ ಇಂಡಿಯನ್ ಆಯಿಲ್ ಡಿಪೊದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ದಿನದ […]

Continue Reading

ಹಾಸನದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ: ಪ್ರಯಾಣಿಕರು ಸೇಫ್

ಸುದ್ದಿ ಸಂಗ್ರಹ ಹಾಸನಚಲಿಸುತ್ತಿದ್ದ ಖಾಸಗಿ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಹೊತ್ತಿ ಉರಿದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಹಾಸನ ತಾಲೂಕಿನ, ಶಾಂತಿ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿ 36 ಜನ ಪ್ರಯಾಣಿಸುತ್ತಿದ್ದರು. ಶಾಂತಿ ಗ್ರಾಮದ ಬಳಿ ಬಸ್‌ನ ಟೈರ್ ಸ್ಫೋಟಗೊಂಡಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ರಸ್ತೆಯಲ್ಲಿ […]

Continue Reading

ಬೈಕ್​ಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ ? ಪೆಟ್ರೋಲ್ ಮಾತ್ರ ಬಳಸುವುದರ ರಹಸ್ಯವೇನು ?

ಸುದ್ದಿ ಸಂಗ್ರಹ ನವದೆಹಲಿನೀವು ಯಾವತ್ತಾದರೂ ಬೈಕ್, ಸ್ಕೂಟಿಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ ? ಪೆಟ್ರೋಲ್ ಇಂಜಿನ್ ಮಾತ್ರ ಏಕೆ ಇರುತ್ತದೆ ಎಂಬುದನ್ನು ಯೋಚಿಸಿದ್ದಿರಾ ? ಬೈಕ್‌ಗಳಲ್ಲಿ ಪೆಟ್ರೋಲ್ ಬದಲಿಗೆ ಡಿಸೆಲ್ ಎಂಜಿನ್‌ ಬಳಸಿದರೆ ಏನಾಗುತ್ತದೆ ? ಎಂಬುದರ ವಿವರ ಇಲ್ಲಿದೆ. ಸಾಮಾನ್ಯವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಒಂದೆ ರೀತಿ ಕಾರ್ಯನಿರ್ವಹಿಸುವುದಿಲ್ಲ, ಅವು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪೆಟ್ರೋಲ್ ಎಂಜಿನ್‌ನಲ್ಲಿ ಇಂಧನ ಹೊತ್ತಿಸಲು ಸ್ಪಾರ್ಕ್ ಪ್ಲಗ್ ಬಳಸಲಾಗುತ್ತದೆ. ಆದರೆ ಡೀಸೆಲ್ ಎಂಜಿನ್‌ನಲ್ಲಿ ಇದು ಕೆಲಸ ಮಾಡುವುದಿಲ್ಲ. […]

Continue Reading

ಅಕ್ರಮವಾಗಿ ದೇಶಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಹುಬ್ಬಳ್ಳಿಯಲ್ಲಿ ಲಾಕ್

ಸುದ್ದಿ ಸಂಗ್ರಹ ಹುಬ್ಬಳ್ಳಿಕಾನೂನು ಬಾಹಿರವಾಗಿ ದೇಶಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ಹುಬ್ಬಳ್ಳಿ ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿ ಯಾವುದೆ ಗುರುತಿನ ದಾಖಲೆಗಳಿರಲಿಲ್ಲ. ದಾಖಲೆಗಳಿಲ್ಲದಿದ್ದರೂ ನಾಲ್ವರು ವಿದೇಸಿಗರು ರೈಲಿನಲ್ಲಿ ಪ್ರಯಾಣ ಮಾಡಿ ಹುಬ್ಬಳ್ಳಿವರೆಗೆ ಬಂದಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿರುವ ಆರ್‌ಪಿಎಫ್ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಆರ್‌ಪಿಎಫ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ […]

Continue Reading

ಇಂದಿನಿಂದ ಮಲ್ಲಾರಾಧ್ಯ ಕೋರಿಸಿದ್ದೇಶ್ವರ ಜಾತ್ರೆ: ನಾಳೆ ರಥೋತ್ಸವ

ಸುದ್ದಿ ಸಂಗ್ರಹ ಕಲಬುರಗಿಯಡ್ರಾಮಿ ತಾಲೂಕಿನ ಶ್ರೀ ಕ್ಷೇತ್ರ ಕಾಕಂಟಗಿ ಸದ್ಗುರು ಶ್ರೀ ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಇಂದು ಮೇ.16 ಮತ್ತು 17ರಂದು ಪೀಠಾಧಿಪತಿ ಡಾ. ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ನಡೆಯಲಿದೆ. ಪವಾಡ ಪುರುಷ, ಲೀಲಾಮೂರ್ತಿ ಮೂರ್ತಿ ಸದ್ಗುರು ಮಲ್ಲಾರಾಧ್ಯ ಮಹಾತ್ಮಾ ಕೋರಿಸಿದ್ದೇಶ್ವರ ಜಾತ್ರೆ ಪ್ರತಿ ವರ್ಷದ ಪದ್ಧತಿಯಂತೆ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಲಿದೆ. ನಾಲವಾರ- ಕಾಕಂಟಗಿ ಉಭಯ ಮಠದ ಪೀಠಾಧ್ಯಕ್ಷ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಾದಾಮಿ ಅಮಾವಾಸ್ಯೆಯಂದು ಇಂದು ರಾತ್ರಿ […]

Continue Reading

ಮೇ 26ರಿಂದ ಕೇರಳಕ್ಕೆ ಮುಂಗಾರು ಎಂಟ್ರಿ

ಸುದ್ದಿ ಸಂಗ್ರಹ ನವದೆಹಲಿಈ ವರ್ಷದ ನೈಋತ್ಯ ಮುಂಗಾರು ಮೇ 26ರಿಂದ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತಿವರ್ಷ ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ ಈ ಬಾರಿ 5 ದಿನ ಮುಂಚಿತವಾಗಿ ಆರಂಭವಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 26ಕ್ಕೆ ನಾಲ್ಕು ದಿನಗಳ ವ್ಯತ್ಯಾಸದ ಸಾಧ್ಯತೆಯೊಂದಿಗೆ ಮುಂಗಾರು ಕೇರಳ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷವೂ ಮೇ 24ರಂದು ಮುಂಗಾರು ಕೇರಳ ಪ್ರವೇಶಿಸಿತ್ತು. […]

Continue Reading

ಮಹಿ ನಿವೃತ್ತಿ ಮುಚ್ಚಿಟ್ಟಿತಾ ಫ್ರಾಂಚೈಸಿ ? – ಸಿಎಸ್‌ಕೆ ಮೆಂಟರ್ ಆಗೋಕೆ ರೆಡಿನಾ ಧೋನಿ ?

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಉಸಿರು ಮಹೇಂದ್ರ ಸಿಂಗ್‌ ಧೋನಿ ಅವರು 2026 ಐಪಿಎಲ್‌ನಲ್ಲಿ ನಿರಂತರ 11 ಪಂದ್ಯಗಳಿಗೂ ಗೈರಾಗುರುವುದು ಸಿಎಸ್‌ಕೆ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಾಲೀಮಿನಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದರೂ, ಪಂದ್ಯದ ವೇಳೆ ಧೋನಿ ಅಲಭ್ಯರಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಫ್ರಾಂಚೈಸಿ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಈ ಬಗ್ಗೆ ಸ್ಪಷ್ಟನೆ ನೀಡದ ಕಾರಣ, ಧೋನಿ ಸದ್ದಿಲ್ಲದೆ ನಿವೃತ್ತಿ ಪಡೆದಿದ್ದಾರೆಯೇ ಅಥವಾ ಕೇವಲ ಮೆಂಟರ್ ಪಾತ್ರಕ್ಕೆ ಸೀಮಿತವಾಗಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಇಂದು ಏಕನಾ ಕ್ರೀಡಾಂಗಣದಲ್ಲಿ […]

Continue Reading

ಸೇಡಂ: ಸಿಡಿಲಿಗೆ ಮತ್ತೊಬ್ಬ ವ್ಯಕ್ತಿ, ಎತ್ತು ಬಲಿ

ಸುದ್ದಿ ಸಂಗ್ರಹ ಸೇಡಂತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಗುಡುಗು, ಸಿಡಿಲು ಮಿಶ್ರಿತ ಮಳೆಗೆ ಮತ್ತೊಬ್ಬ ವ್ಯಕ್ತಿ ಮತ್ತು ಒಂದು ಎತ್ತು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಜಾಕನಪಲ್ಲಿ ಗ್ರಾಮದ ಆಶಪ್ಪ ಕಂಪಿನ್‌ (60) ಮೃತರು. ಅವರು ಹೊಲದಲ್ಲಿನ ಕಸ-ಕಟ್ಟಿಗೆ ಸುಡಲು ಹೋಗಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅಲ್ಲದೆ ಗ್ರಾಮದ ದೂರದಲ್ಲಿರುವ ದೊಡ್ಡಿಯಲ್ಲಿ ಕಟ್ಟಿದ ಎತ್ತೊಂದು ಸಿಡಿಲು ಬಡಿದು ಮೃತಪಟ್ಟಿದೆ. ಚಂದ್ರಪ್ಪ ಪುಲಮೋ‌ ಅವರಿಗೆ ಸೇರಿದ ಎತ್ತು ಇದಾಗಿದೆ. ಜಾಕನಪಲ್ಲಿ ಗ್ರಾಮಕ್ಕೆ […]

Continue Reading

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ

ಸುದ್ದಿ ಸಂಗ್ರಹ ನವದೆಹಲಿಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಆದೇಶ ಪ್ರಕಟಿಸಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಎಸ್‌ಐಆರ್‌ ನಡೆಯಲಿದೆ. ಈ ರಾಜ್ಯಗಳಲ್ಲಿ ಕಷ್ಟಕರವಾದ ಭೂಪ್ರದೇಶ, ಹವಾಮಾನ ಅಡಚಣೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳು, ವಿಶೇಷವಾಗಿ ಹಿಮಪಾತ ಪೀಡಿತ ಮತ್ತು ಎತ್ತರದ ಪ್ರದೇಶಗಳಿರುವುದರಿಂದ ಎಸ್‌ಐಆರ್‌ ಪ್ರಕ್ರಿಯೆ ಮುಂದೂಡಿದೆ. ಜನಗಣತಿಯ ಎರಡನೇ ಹಂತದ […]

Continue Reading