ನೋಡುವವರಿಲ್ಲ, ಟಿಆರ್​ಪಿಯೂ ಇಲ್ಲ: ಕಳೆಗುಂದಿದ ಐಪಿಎಲ್ ಜನಪ್ರಿಯತೆ

ಸುದ್ದಿ ಸಂಗ್ರಹ2026ರ ಐಪಿಎಲ್‌ನಲ್ಲಿ (IPL 2026) ಈಗಾಗಲೇ 47 ಪಂದ್ಯಗಳು ಮುಗಿದಿವೆ. ಅಂದರೆ ಐಪಿಎಲ್​ನ ಅರ್ಧ ಪ್ರಯಾಣ ಮುಗಿದಂತ್ತಾಗಿದೆ. ಆರಂಭದಲ್ಲಿ ಐಪಿಎಲ್​ಗೆ ಸಿಕ್ಕ ಬೆಂಬಲ ಪಂದ್ಯಗಳು ಮುಂದುವರೆದಂತೆ ಕಳೆಗುಂದಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಬರಿ ಬ್ಯಾಟರ್​ಗಳ ಪಾರುಪತ್ಯವೇ ಹೆಚ್ಚಾಗಿರುವುದು. ಇದರ ಜೊತೆಗೆ ಇನ್ನು ಅನೇಕ ಕಾರಣಗಳು ಐಪಿಎಲ್​ ಮೇಲೆ ಅಭಿಮಾನಿಗಳು ಉತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತಿವೆ. ಇದೀಗ ಅದಕ್ಕೆ ಪೂರಕವೆಂಬಂತೆ ಹೊರಬಿದ್ದಿರುವ ವರದಿಯೊಂದು ಐಪಿಎಲ್ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, […]

Continue Reading

ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ECI ಪ್ರಮಾಣ ಪತ್ರ

ಸುದ್ದಿ ಸಂಗ್ರಹ ಚಿಕ್ಕಮಗಳೂರುಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎನ್‌ ಜೀವರಾಜ್ ಅವರಿಗೆ ಚುನಾವಣಾ ಅಧಿಕಾರಿ ಗೌರವಕುಮಾರ್ ಶೆಟ್ಟಿ ಪ್ರಮಾಣ ಪತ್ರ ನೀಡಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನನ್ನನ್ನು ಗೆಲ್ಲಿಸಿದ್ದರು. ಆದರೆ ಇಲ್ಲಿಯ ಕೆಲವರು ಸೋಲಿಸಿದ್ದರು. ಕಾನೂನಿನ ಹೋರಾಟದ ಮೂಲಕ ನನಗೆ ಜಯಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ವೋಟ್ ಟ್ಯಾಂಪರಿಂಗ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಅವರು, ಟ್ಯಾಂಪರಿಂಗ್ ಆರೋಪದಡಿ ತಮ್ಮ ವಿರುದ್ಧ ದಾಖಲಾದ ಪ್ರಕರಣ ಠಾಣಾ ವ್ಯಾಪ್ತಿಗೆ […]

Continue Reading

ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಗೆಲುವು: ಇಂದು ಸಂಜೆ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಸುದ್ದಿ ಸಂಗ್ರಹ ನವದೆಹಲಿಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ, ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ. ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿ ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಅಲ್ಲಿ ನೆರೆಯಲಿರುವ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಈ ಮಹತ್ವದ ಬೆಳವಣಿಗೆಯನ್ನು ಬಿಜೆಪಿಯ ಮುಖ್ಯ ವಕ್ತಾರ ಅನಿಲ್ ಬಲೂನಿ ಅವರು […]

Continue Reading

ಮೇ 9 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿ ಸಂಗ್ರಹ ಬೆಂಗಳೂರುಮೇ 5 ರಿಂದ 9 ರವರೆಗೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಒಟ್ಟಾರೆ ಬೆಂಗಳೂರು ನಗರ ಸೇರಿದಂತೆ 23 ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಲಿದೆ. ಮೇ 4ರಂದು ಎಲ್ಲೆಲ್ಲಿ ? ಮೇ 4 ಸೋಮವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಂದೆರಡು […]

Continue Reading

ಡಿಕೆಶಿ ಲ್ಯಾಂಡ್‌ ಆಗಬೇಕಿದ್ದ ಸ್ಥಳದಲ್ಲಿ ಸುದೀಪ್ ಹೆಲಿಕಾಪ್ಟರ್ ಲ್ಯಾಂಡಿಗ್‌: ಅಧಿಕಾರಿಗಳಲ್ಲಿ ಕೆಲಕಾಲ ಆತಂಕ

ಸುದ್ದಿ ಸಂಗ್ರಹ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪೈಲಟ್ ಗೊಂದಲದಿಂದ ಕಿಚ್ಚ ಸುದೀಪ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಇಳಿಯುವಾಗ ಹೆಲಿಪ್ಯಾಡ್ ಬದಲಾಯಿಸಿದ್ದು ಅಧಿಕಾರಿಗಳಲ್ಲಿ ಕೆಲಕಾಲ ಗೊಂದಲ, ಆತಂಕ ಸೃಷ್ಟಿ ಮಾಡಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಲ್ಯಾಂಡ್ ಆಗಬೇಕಿದ್ದ ಸ್ಥಳದಲ್ಲಿ ಸುದೀಪ್ ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಿದೆ. ಸಿಂಧನೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಘಟನೆ ನಡೆದಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬೇರೆ ಬೇರೆ ಹೆಲಿಕ್ಯಾಪ್ಟರ್ ನಲ್ಲಿ ಡಿಕೆಶಿ ಹಾಗೂ ಸುದೀಪ್ ಆಗಮಿಸಿದ್ದು ನಟ ಕಿಚ್ಚ ಸುದೀಪ್ ಬಂದಿದ್ದ ಹೆಲಿಕ್ಯಾಪ್ಟರ್ ಪೈಲೆಟ್ ಗೊಂದಲಕ್ಕೀಡಾಗಿದ್ದಾರೆ. […]

Continue Reading

ವಾಡಿ: ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಿಗೆ ಮನವಿ

ಸುದ್ದಿ ಸಂಗ್ರಹ ವಾಡಿಪಟ್ಟಣದ ರೈಲು ನಿಲ್ದಾಣದಲ್ಲಿನ ಕಾಮಗಾರಿ ವೀಕ್ಷಿಸಿಲು ಆಗಮಿಸಿದ ಕೇಂದ್ರ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕ ರಾಜೀವ್ ಶ್ರೀವಾತ್ಸವ ಅವರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ವಾಡಿ ರೈಲು ನಿಲ್ದಾಣದ ಅಭಿವೃದ್ಧಿ ಬಗ್ಗೆ ಹಾಗೂ ಇಲ್ಲಿನ ಕುಂದುಕೊರತೆಗಳ ಬಗ್ಗೆ ವಿವರಿಸಿ ಮನವಿ ಪತ್ರ ಸಲ್ಲಿಸಿದರು. ವಾಡಿ ಪಟ್ಟಣದ ರೈಲು ನಿಲ್ದಾಣದ ಅಭಿವೃದ್ಧಿ ಬಗ್ಗೆ ವಿವರಿಸಿದ ವೀರಣ್ಣ ಯಾರಿ, ಇದು ತನ್ನದೆಯಾದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ.ಬಾಬಾ ಸಾಹೇಬ್ […]

Continue Reading

ಕಲಬುರಗಿ: ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ನೂತನ ಜಿಲ್ಲಾಧಿಕಾರಿ

ಕಲಬುರಗಿ: ಬೆಂಗಳೂರಿನ ಆರ್ಥಿಕ ಇಲಾಖೆಯ (ಬಜೆಟ್‌ ಮತ್ತು ಸಂಪನ್ಮೂಲ) ಜಂಟಿ ಕಾರ್ಯದರ್ಶಿಯಾಗಿದ್ದ, 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೊಹಮ್ಮದ್‌ ಇಕ್ರಾಮುಲ್ಲಾ ಶರೀಫ್ ಅವರನ್ನು ಕಲಬುರಗಿ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಷರೀಫ್‌ ಅವರು ಪ್ರಸ್ತುತ ಹಣಕಾಸು ಇಲಾಖೆಯ (ಬಜೆಟ್ ಮತ್ತು ಸಂಪನ್ಮೂಲ) ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಜಿಲ್ಲಾಧಿಕಾರಿಯಾಗಿದ್ದ ಬಿ.ಫೌಜಿಯಾ ತರನ್ನುಮ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಅಧೀನದ ಗ್ರಾಮೀಣ ಕುಡಿಯುವ […]

Continue Reading

ಕಲಬುರಗಿ- ಬೀದರ್‌ ಜನತೆಗೆ ಖು‌ಷಿ ಸುದ್ದಿ, ಸ್ಥಗಿತಗೊಂಡಿದ್ದ ವಿಮಾನ ಸೇವೆ ತಿಂಗಳಲ್ಲಿ ಪುನಾರಂಭ

ಸುದ್ದಿ ಸಂಗ್ರಹ ಕಲಬುರಗಿವಿಮಾನ ಸೇವೆ ವಿಷಯದಲ್ಲಿ ಕಲಬುರಗಿ- ಬೀದರ್‌ ಜಿಲ್ಲೆಯ ಜನರಿಗೆ ಇದೊಂದು ಖುಷಿ ಸುದ್ದಿ. ಎರಡು ಜಿಲ್ಲೆಗಳ ಏರ್‌ಪೋರ್ಟ್‌ನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ತಿಂಗಳಲ್ಲಿ ಆರಂಭಿಸುವ ಸಿದ್ಧತೆಗಳು ನಡೆದಿವೆ. ಕಲಬುರಗಿ ಏರ್‌ಪೋರ್ಟನಿಂದ 2025ರ ಅಕ್ಟೋಬರ್‌ 15ಕ್ಕೆ ಮತ್ತು ಬೀದರ್‌ನಿಂದ 2026ರ ಏಪ್ರಿಲ್‌ 16 ರಿಂದ ವಿಮಾನ ಸೇವೆ ಸ್ಥಗಿತವಾಗಿತ್ತು. ಎರಡು ಜಿಲ್ಲೆಗಳಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸ್ಟಾರ್‌ ಏರ್‌ ವಿಮಾನ ನಷ್ಟದ ಕಾರಣದಿಂದ ಸ್ಥಗಿತವಾಗಿತ್ತು. ಆದರೆ ರಾಜ್ಯ ಸರಕಾರ ಇದೀಗ ಸ್ಟಾರ್‌ ಏರ್‌ಗೆ ವಿಮಾನ ಸೇವೆಗಳ ನಿರ್ವಹಣೆಗಾಗಿ […]

Continue Reading

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 18.62 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

ಸುದ್ದಿ ಸಂಗ್ರಹ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18.62 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬಂದ ಮೂವರು ಪ್ಯಾಸೆಂಜರ್ ಬಳಿ ಇದ್ದ 18.62 ಕೋಟಿ ರೂ. ಮೌಲ್ಯದ 52.68 ಕೆಜಿ ಹೈಡ್ರೋಪೊನಿಕ್ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ ಎನ್‌ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.

Continue Reading

ನಿಮ್ಮ ಮೊಬೈಲ್ ಸೈರನ್ ಮೊಳಗಿಸಿದರೆ ಭಯ ಪಡಬೇಡಿ, ಇದು ತುರ್ತು ಎಚ್ಚರಿಕೆ ಸಂದೇಶ

ಸುದ್ದಿ ಸಂಗ್ರಹ ಬೆಂಗಳೂರುಪ್ರವಾಹ, ಭೂಕಂಪ, ಅತಿವೃಷ್ಟಿ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಮತ್ತು ತುರ್ತು ಸಂದರ್ಭದಲ್ಲಿ ನಾಗರಿಕರ ಮೊಬೈಲ್‌ಗೆ ನೇರವಾಗಿ ಎಚ್ಚರಿಕೆ ಸಂದೇಶ ಬಿತ್ತರಿಸುವ ‘ಸೆಲ್‌ ಬ್ರಾಡ್‌ಕಾಸ್ಟಿಂಗ್‌ ಅಲರ್ಟ್‌’ ಸೇವೆಯ ಆರಂಭಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಬೆಂಗಳೂರು ನಾಗರಿಕರ ಮೊಬೈಲ್‌ಗಳಿಗೆ ಮೇ 2 ಶನಿವಾರದಿಂದ ಎಚ್ಚರಿಕೆ ಸಂದೇಶ ಬರಲಿದೆ. ಆತಂಕ ಬೇಕಿಲ್ಲ: ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಮ್ಮ ಭಾಗದಲ್ಲಿ 2026ರ ಮೇ 2ರಂದು ‘ಸೆಲ್‌ ಬ್ರಾಡ್‌ಕಾಸ್ಟಿಂಗ್‌ ಅಲರ್ಟ್‌’ ತಾಂತ್ರಿಕ […]

Continue Reading