ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತಸಾಗರ: ಒಂದೆ ದಿನ 81 ಸಾವಿರಕ್ಕೂ ಹೆಚ್ಚು ಜನರಿಂದ ದರ್ಶನ

ಸುದ್ದಿ ಸಂಗ್ರಹ ಹೈದರಾಬಾದ್ಕಳೆದ ನಾಲ್ಕೈದು ದಿನಗಳಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನ ಫುಲ್ ರಶ್ ಆಗಿದೆ. ತಿಮ್ಮಪ್ಪನ ದರ್ಶನ ಪಡೆಯಲು ಉಚಿತ ದರ್ಶನಕ್ಕಾಗಿ ಕಿಲೋಮೀಟರ್ ಗಟ್ಟಲೆ ಭಕ್ತರು ಕ್ಯೂ ನಿಂತಿದ್ದಾರೆ. ನಿನ್ನೆ ಒಂದೆ ದಿನ ಸುಮಾರು 81 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ನಂತರ ಸರ್ವ ದರ್ಶನಕ್ಕೆ ಹೋಗುವ ಭಕ್ತರಿಗೆ 18-24 ಗಂಟೆಗಳು ಬೇಕಾಗುತ್ತಿದೆ. ಸರ್ವ ದರ್ಶನಕ್ಕೆ ಟೋಕನ್ ಪಡೆದ ಭಕ್ತರಿಗೆ 4 ರಿಂದ 6 ಗಂಟೆಗಳು ಬೇಕಾಗುತ್ತದೆ. ನಿನ್ನೆ ಒಂದೆ ದಿನ […]

Continue Reading

ಮುಗಳನಾಗಾವಿ: ರೈತರಿಗೆ ಉಚಿತ ತೊಗರಿ ಬೀಜ ವಿತರಣೆ

ಸುದ್ದಿ ಸಂಗ್ರಹ ಶಹಾಬಾದ್ಕೃಷಿ ಇಲಾಖೆ ವತಿಯಿಂದ ಮುಗಳನಾಗಾವಿ ಗ್ರಾಮದ ರೈತರಿಗೆ ಉಚಿತವಾಗಿ ತೊಗರಿ ಬೀಜ ವಿತರಿಸಲಾಯಿತು. ತಾ‌.ಪಂ ಮಾಜಿ ಸದಸ್ಯ ನಾಮದೇವ ರಾಠೋಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಮುಗಳನಾಗಾವಿ ಗ್ರಾಮ ಪಂಚಾಯಿತಿ ಭಾಗದಲ್ಲಿ ಮೂಲಭೂತ ಸೌಲಭ್ಯ ಮತ್ತು ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿ ಮಾಡಿದ್ದು, ತಾಲೂಕಿನ ರೈತರ ಸಮಸ್ಯೆಯನ್ನು ಆಲಿಸಿ ಅವರಿಗೆ ಪೂರಕವಾಗಿ ದೂರದೃಷ್ಟಿಯೊಂದಿಗೆ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಿದಾರೆ. ಈ ಯೋಜನೆಗಾಗಿ ಸಚಿವರಿಗೆ, ಕೃಷಿ ಇಲಾಖೆಯ […]

Continue Reading

ಕಲಬುರಗಿ ಜಿಲ್ಲೆಯ ಆರು ಪೊಲೀಸರಿಗೆ ಡಿಜಿ–ಐಜಿಪಿ ಪ್ರಶಸ್ತಿ

ಸುದ್ದಿ ಸಂಗ್ರಹ ಕಲಬುರಗಿಅತ್ಯುತ್ತಮ ಸೇವೆಗಾಗಿ ಕಲಬುರಗಿ ವಲಯದ ಡಿಐಜಿ ಶಾಂತನು ಸಿನ್ಹಾ ಸೇರಿದಂತೆ ಜಿಲ್ಲೆಯ ಆರು ಪೊಲೀಸರು 2025–26ನೇ ಸಾಲಿನ ಡಿಜಿ–ಐಜಿಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕಲಬುರಗಿ ಪೊಲೀಸ್‌ ಕಮಿಷನರೇಟ್‌ನ ಸಿಸಿಬಿ ಇನ್‌ಸ್ಪೆಕ್ಟರ್‌ ಅರುಣಕುಮಾರ, ಆಳಂದ ಸಿಪಿಐ ಶರಣಬಸಪ್ಪ ಕೊಡ್ಲಾ, ಡಿಎಆರ್‌ನ ಆರ್‌ಪಿಐ ಚಂದ್ರಶೇಖರ ಹಾಗೂ ಈಶಾನ್ಯ ವಲಯ ಪೊಲೀಸ್‌ ಕಚೇರಿಯ ಹೆಡ್‌ ಕಾನ್‌ಸ್ಟೆಬಲ್‌ ಅರುಣಕುಮಾರ ಈ ಪ್ರಶಸ್ತಿಗೆ ಪಾತ್ರರಾದ ಇತರ ಪೊಲೀಸರು. ದೆಹಲಿ ಮೂಲದ ಶಾಂತನು ಸಿನ್ಹಾ 2009ರ ಬ್ಯಾಚ್‌ನ […]

Continue Reading

ಯಲ್ಲಾಲಿಂಗ ಆಶ್ರಮದಲ್ಲಿ ನಾಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ಸಮೀಪದ ಮಹಾನಗರ ತಾಂಡದ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಸದ್ಗುರು ಶ್ರೀ ಜೇಮಸಿಂಗ ಮಹಾರಾಜರ 78ನೇ ಹುಟ್ಟು ಹಬ್ಬದ ನಿಮಿತ್ತ ಜೂನ್ 24 ರಂದು ಬೆಳಗ್ಗೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಮಠದ ಪರವಾಗಿ ಪ್ರಕಾಶ ರಾಠೋಡ, ನೀಲಕಂಠ ಚವ್ಹಾಣ್ ಹೇಳಿದ್ದಾರೆ. ಆಶ್ರಮದ ಯಲ್ಲಾಲಿಂಗ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಯುವುದು ನಂತರ ಆಯುಷ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ […]

Continue Reading

ಸಿದ್ದಲಿಂಗ ಬಾಳಿ ಅವರಿಗೆ ಪ್ರತಿಷ್ಠಿತ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ

ಸುದ್ದಿ ಸಂಗ್ರಹ ಶಹಾಬಾದ್ ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳಲ್ಲಿ ಆಸಕ್ತಿದಾಯಕ ಕಲಿಕೆ ಮೂಡಿಸುವುದರೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಕಾರಣರಾಗಿರುವ ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯ ಕ್ರಿಯಾಶೀಲ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ರಾವೂರ ಅವರಿಗೆ ಜೂನ್ 21ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಚೇತನ ಪ್ರತಿಷ್ಠಾನ ಧಾರವಾಡ, ಆರ್ಯಭಟ ಎಜುಕೇಷನ್ ಟ್ರಸ್ಟ್ ವತಿಯಿಂದ ಜೂನ್ 21ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್’ನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ ಅಖಿಲ […]

Continue Reading

ಜೂ.22 ರವರೆಗೆ ದೇಶದಲ್ಲಿ ಟೆಲಿಗ್ರಾಂ ನಿಷೇಧ: ನೀಟ್‌ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ

ಸುದ್ದಿ ಸಂಗ್ರಹ ನವದೆಹಲಿನೀಟ್‌ ಮರುಪರೀಕ್ಷೆಗೆ ಮುಂಚಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಜೂನ್‌ 22ರ ವರೆಗೆ ದೇಶದಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ ನಿಷೇಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶಿಫಾರಸಿನ ಮೇರೆಗೆ ʻಮಾಹಿತಿ ತಂತ್ರಜ್ಞಾನ ಕಾಯ್ದೆ-2020 ರ ಸೆಕ್ಷನ್ 69Aʼ ಅಡಿಯಲ್ಲಿ ಟೆಲಿಗ್ರಾಂ ಗೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರೊಂದಿಗೆ ಜೂನ್ 30ರ ವರೆಗೆ ಟೆಲಿಗ್ರಾಂನ Message Editing ವೈಶಿಷ್ಟ್ಯವನ್ನ ಸ್ಥಗಿತಗೊಳಿಸಲು ಸೂಚನೆ ನೀಡಿದೆ. ಈಗಾಗಲೇ ಪೋಸ್ಟ್ ಮಾಡಿದ ಸಂದೇಶಗಳನ್ನ ನಂತರ ಎಡಿಟ್‌ ಮಾಡಿ (Editing) ಪ್ರಶ್ನೆಪತ್ರಿಕೆ ಸೋರಿಕೆಯ […]

Continue Reading

ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್: ಇದು ನಿಜವಾಗಿಯೂ ಪರಿಹಾರ ನೀಡುತ್ತಾ ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಐಸ್ ನೀರಿನಿಂದ ತುಂಬಿದ ಬಾಟಲಿಯನ್ನು ಕಾಲಿನ ಕೆಳಗೆ ಇಟ್ಟು ರೋಲ್ ಮಾಡಿದರೆ ಕಾಲು ನೋವು ಅಥವಾ ಪಾದದ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ, ಇದು “ಕೋಲ್ಡ್ ಥೆರಪಿ” ಮತ್ತು ಮಸಾಜ್‌, ಎರಡರ ಸಂಯೋಜನೆಯಂತೆ ಕೆಲಸ ಮಾಡುತ್ತದೆ. ಐಸ್‌ನ ತಂಪು ಕಾಲಿಗೆ ತಾಗಿದಾಗ ಆ ಭಾಗದ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕೋಚಗೊಳ್ಳುತ್ತವೆ. ಇದರಿಂದ ಊತ ಮತ್ತು ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ತಂಪಿನಿಂದ ನರಗಳು ಸ್ವಲ್ಪ […]

Continue Reading

ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಅನಂತ್‌ ಅಂಬಾನಿ ವಿಶೇಷ ಪೂಜೆ

ಸುದ್ದಿ ಸಂಗ್ರಹ ಉಡುಪಿರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರು ಬೈಂದೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ ತಮ್ಮ ಕುಟುಂಬದ ಗುರೂಜಿಯವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅನಂತ ಅಂಬಾನಿ, ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ದೇವಾಲಯದ ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ದೇವಿಯ ಕೃಪೆಗೆ ಪಾತ್ರರಾದ ಅವರಿಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರ ವತಿಯಿಂದ ಶಾಲು ಹೊದಿಸಿ […]

Continue Reading

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಸುದ್ದಿ ಸಂಗ್ರಹ ವಾಡಿಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಚಿತ್ತಾಪುರ ತಾಲೂಕಿನ ವಾಡಿ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮಾಡಿ ಪರಾರಿಯಾಗಿದ್ದ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮದ ಅಹ್ಮದ್ ಷಾ ಮತ್ತು ಅಕ್ರಮ ಶಸ್ತ್ರಾಸ್ತ್ರ ಬಂದೂಕು ತಯಾರು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಚಿತ್ತಾಪುರ ತಾಲೂಕಿನ ಸ್ಟೇಷನ್ ನಾಲವಾರ ತಾಂಡಾದ ನಿವಾಸಿ ನಿಂಗಪ್ಪ ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದರು‌‌. ಆರೋಪಿಗಳನ್ನು ಹುಡುಕಾಟ ನಡೆಸಿದ ವಾಡಿ ಪೊಲೀಸರು ನಿನ್ನೆ ಖಚಿತ […]

Continue Reading

ಮೂಕಾಂಬಿಕಾ ಸನ್ನಿಧಿಯಲ್ಲಿ ವಿಜಯ್ ಶತ್ರು ಸಂಹಾರ ಸಂಕಲ್ಪ

ಸುದ್ದಿ ಸಂಗ್ರಹ ಕೊಲ್ಲೂರುತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಭೇಟಿಯ ಬೆನ್ನಲ್ಲೆ ಅವರು ದೇವಿಯ ಸನ್ನಿಧಿಯಲ್ಲಿ ಮಾಡಿಕೊಂಡಿದ್ದಾರೆನ್ನಲಾದ ‘ಶತ್ರು ಸಂಹಾರ ಸಂಕಲ್ಪ’ ಈಗ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್, ಅಲ್ಲಿಂದ ಮಾಡರ್ನ್ ಉಡುಪಿನಲ್ಲೆ ಕೊಲ್ಲೂರು ಕಡೆಗೆ ಪ್ರಯಾಣ ಬೆಳೆಸಿದರು. ದಾರಿ ಮಧ್ಯೆ […]

Continue Reading