ಚಿತ್ತಾಪುರ: ಸಮೀಪದ ರಾವೂರ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವರಾಜ್ ಸಿದ್ದರಾಮಪ್ಪ ಅಳೊಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ್ ಹಿರಣ್ಣ ಹಾಲಿನೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಸುರೇಶ್ ಬೆಳ್ಳಗೋಳ, ದತ್ತಾತ್ರೇಯ ಕಾಳೆಕರ್, ಭೀಮಣ್ಣ ಕೆಸಬಳ್ಳಿ, ಸಿದ್ದು ಗೋಗಿ, ಸರಸ್ವತಿ ಬಿ ಜಡಿ, ಮಲ್ಲಮ್ಮ ಯರಗಲ್, ಬಾಹುಬಲಿ ಜೈನ್, ವಿಜಯ್ ಕುಮಾರ್ ಗುದಗಲ್, ರಾಯಪ್ಪ ತಳವಾರ್ ಯರಗಲ್, ಹನುಮಂತರಾಯ ವಂತಟ್ಟಿ ಗಾಂಧಿನಗರ ಉಪಸ್ಥಿತರಿದ್ದರು.

ಫಲಿತಾಂಶ ಹೊರಬೀಳುತ್ತಿದ್ದಂತೆ ರಾವೂರ ಗ್ರಾಮದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸರ್ವ ನಿರ್ದೇಶಕರಿಗೆ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚೆನ್ನಣ್ಣ ಬಾಳಿ, ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಗುರುನಾಥ್ ಗುದ್ಗಲ್, ಗೋವಿಂದ ಸಾಗರ್, ತಿಪ್ಪಣ್ಣ ವಗ್ಗರ್, ಮಾಳಪ್ಪ ಪೂಜಾರಿ ಕೊಳ್ಳಿ, ಸಾಹೇಬಗೌಡ ತಲ್ವಾರ್, ದೇವೇಂದ್ರ ತಳವಾರ್, ಬಸವರಾಜ್ ಮಡ್ಡಿ ರಾಮು ಸಕ್ಕರೆ ಶಿವಲಿಂಗ ಕರ್ಜಗಿ,
ಬಸವರಾಜ ಕೆರಳ್ಳಿ, ಮಲ್ಲಿಕಾರ್ಜುನ ಮುತ್ತಿಗೆ, ಶರಣಪ್ಪ, ಸಣ್ಣಮ್ಮ ಮಾಲಗತ್ತಿ, ಈಶ್ವರ್ ದೊಡ್ಡಮನಿ, ಬಸವರಾಜ್ ಅಳ್ಳೊಳ್ಳಿ, ಪುಂಡಲಿಕ್ ಕೇಸ್ ಬಳ್ಳಿ, ರಾಜು ಫರ್ಥಾಬಾದ್, ವೆಂಕಣ್ಣ, ಗೋವಿಂದ ಜಡಿ, ಉಮಾಕಾಂತ ಮಠಪತಿ ಸೇರಿದಂತೆ ಅನೇಕರು ಇದ್ದರು.