ಸರ್ವೆ ಮಾಡುವಾಗ ಮೊಬೈಲ್ ಸ್ಪೋಟ, ಜಾತಿಗಣತಿ ಕಾರ್ಯಕ್ಕೆ ಅಡೆತಡೆ

ತಾಲೂಕು

ಚಿತ್ತಾಪುರ: ಜಾತಿಗಣತಿ ಮಾಡುವಾಗ ಏಕಾಏಕಿ ಮೊಬೈಲ್ ಸ್ಪೋಟಗೊಂಡಿರುವ ಘಟನೆ ದಂಡೋತಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ದಂಡೋತಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 9.36ಕ್ಕೆ 42 ps ನಲ್ಲಿ ಶಿಕ್ಷಕ ಜಗನ್ನಾಥ ರಾಠೋಡ ಜಾತಿಗಣತಿ ಕಾರ್ಯ ಮಾಡುವಾಗ ಅವರು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಮೊಬೈಲ್’ಗೆ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ನಾನಾ ಪ್ರಯತ್ನ ಮಾಡಿದರು ಮೊಬೈಲ್ ಫೋನ್ ಸುಟ್ಟು ಕರಕಲಾಗಿದೆ ಎಂದು ಶಿಕ್ಷಕ ಜಗನ್ನಾಥ ರಾಠೋಡ ಹೇಳಿದ್ದಾರೆ.

ಶಿಕ್ಷಕ, ಜಾತಿಣತಿದಾರ ಜಗನ್ನಾಥ ರಾಠೋಡ ಅವರು, ಜಾತಿಗಣತಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಮೊಬೈಲ್ ಫೋನ್ ಸುಟ್ಟು ಕರಕಲಾಗಿರುವ ಕಾರಣ ನ್ಯಾಯಾಮೂರ್ತಿ ಎಚ್.ಎನ್ ನಾಗಮೋಹನ್ ದಾಸ ಆಯೋಗವು ನಮಗೆ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *