ಪುರಸಭೆ ಅಧ್ಯಕ್ಷ ಸ್ಥಾನ ಬಂಜಾರ ಸಮಾಜಕ್ಕೆ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ

ಪಟ್ಟಣ

ಚಿತ್ತಾಪುರ: ಪುರಸಭೆಯ ಇತಿಹಾಸದಲ್ಲಿ ಇದುವರೆಗೆ ಬಂಜಾರ ಸಮಾಜಕ್ಕೆ ಅಧ್ಯಕ್ಷರಾಗಲು ಅವಕಾಶ ಸಿಕ್ಕಿಲ್ಲ, ಹೀಗಾಗಿ ಈ ಬಾರಿ ಬೇಬಿಬಾಯಿ ಸುಭಾಷ್ ಜಾಧವ ಅವರಿಗೆ ಪುರಸಭೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಡಬೇಕು ಎಂದು ಸಮಾಜದ
ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ
ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೋಮವಾರ ಭೇಟಿ ಮಾಡಿ ಮನವಿ‌ ಮಾಡಲಾಯಿತು.

ಚಿತ್ತಾಪುರ ಪುರಸಭೆ ಇತಿಹಾಸದಲ್ಲಿಯೇ ಇದುವರೆಗೆ
ಬಂಜಾರ ಸಮುದಾಯದವರು ಪುರಸಭೆ
ಅಧ್ಯಕ್ಷರಾಗಿಲ್ಲ, ಆದಕಾರಣ ಈ ಬಾರಿ ನಮ್ಮ
ಸಮಾಜಕ್ಕೆ ಅವಕಾಶ ಮಾಡಿಕೊಡಿ ಎಂದು
ಬಂಜಾರ ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರು
ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ
ಸದಸ್ಯ ಅರವಿಂದ ಚವ್ಹಾಣ, ಬಂಜಾರ ಸಮಾಜದ
ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಪುರಸಭೆ
ಸದಸ್ಯ ಜಗದೀಶ್ ಡಿ ಚವ್ಹಾಣ, ಹರಿನಾಥ್ ಚವ್ಹಾಣ, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ
ಹರಿನಾಥ್ ಚವ್ಹಾಣ, ತಾಲೂಕು ಪಂಚಾಯತಿ ಮಾಜಿ
ಸದಸ್ಯ ಹರಿಶ್ಚಂದ್ರ ರಾಠೋಡ, ಗ್ರಾಮ ಪಂಚಾಯತ
ಮಾಜಿ ಅಧ್ಯಕ್ಷರಾದ ಚಂದು ಜಾಧವ, ಬೋರು
ರಾಠೋಡ, ಗ್ರಾಮ ಪಂಚಾಯತ ಮಾಜಿ ಸದಸ್ಯ
ಗೋಪಿ ರಾಠೋಡ, ರವಿ ರಾಠೋಡ ಮೊಗಲಾ,
ವಿಜಯ ಕುಮಾರ್ ಯಾಗಾಪುರ, ದೇವಿದಾಸ
ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ,
ಕುಮಾರ್ ಚವ್ಹಾಣ ಯಾಗಾಪುರ, ರವಿ ಜಾಧವ,
ವಿಠಲ್ ರಾಠೋಡ, ಭೀಮನಹಳ್ಳಿ, ಕಿಶನ್ ರಾಠೋಡ,
ಶಂಕರ್ ಚೊಕಲ್ಲಾ ಚವ್ಹಾಣ, ಮಹದೇವ್ ರಾಠೋಡ,
ಸುಭಾಷ್ ಜಾಧವ, ವಿಜಯಕುಮಾರ್ ಚವ್ಹಾಣ,
ಸಂತೋಷ ರಾಠೋಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *