ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಎಷ್ಟಿರಬೇಕು ? ಆರೋಗ್ಯವಾಗಿರಲು ಇಷ್ಟು ಕೆಜಿ ಇರಬೇಕಂತೆ

ವಯಸ್ಸು, ಎತ್ತರ ಮತ್ತು ಲಿಂಗವನ್ನು ಅವಲಂಬಿಸಿ ತೂಕವು ಕಡಿಮೆ ಅಥವಾ ಹೆಚ್ಚಿರಬಹುದು. ಆದರೆ ಪ್ರತಿ ವಯಸ್ಸಿನವರು ಒಂದು ಕನಿಷ್ಠ ತೂಕವನ್ನು ಹೊಂದಿರಲೇಬೇಕು. ಅದರ ಮಾಹಿತಿ ಇಲ್ಲಿದೆ ನೋಡಿ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುತ್ತಾರೆ. ಮಕ್ಕಳು ತಮ್ಮನ್ನು ತಾವು ಸದೃಢವಾಗಿಟ್ಟುಕೊಳ್ಳಲು ಚಿಕ್ಕ ವಯಸ್ಸಿನಿಂದಲೇ ಸರಿಯಾದ ಮಾಹಿತಿ ನೀಡುವದು ಉತ್ತಮ. ಇದರ ಭಾಗವಾಗಿ ಮೊದಲಿಗೆ ತೂಕವನ್ನು ನಿಯಂತ್ರಣದಲ್ಲಿಡುವದು ಮುಖ್ಯವಾಗಿರುತ್ತದೆ. ಆದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ತೂಕ ಎಷ್ಟು ಸರಿ ಎಂಬುದು ಹಲವರಿಗೆ ತಿಳಿದಿಲ್ಲ. ಅಂತಹ […]

Continue Reading

UPI ನಿಯಮಗಳಲ್ಲಿ ದೊಡ್ಡ ಬದಲಾವಣೆ: ಗೂಗಲ್ ಪೇ, ಫೋನ್ ಪೇ ಬಳಕೆದಾರರು ತಪ್ಪದೆ ಓದಿ

ನವದೆಹಲಿ: ನವೆಂಬರ್ 1ರ ನಂತರ ನಿಮ್ಮ ಯುಪಿಐ ಲೈಟ್ ಬ್ಯಾಲೆನ್ಸ್ ನಿರ್ದಿಷ್ಟ ಮಿತಿಗಿಂತ ಕಡಿಮೆಯಾದರೆ, ಸ್ವಯಂ ಟಾಪ್ – ಅಪ್ ವೈಶಿಷ್ಟ್ಯದ ಮೂಲಕ ಮತ್ತೆ ಯುಪಿಐ ಲೈಟ್’ಗೆ ಹಣವನ್ನು ಸೇರಿಸಲಾಗುತ್ತದೆ. ಯುಪಿಐ ಲೈಟ್ ಬಳಕೆದಾರರಿಗೆ ಶುಭ ಸುದ್ದಿಯೊಂದಿಗೆ ನವೆಂಬರ್ 1 ರಿಂದ ಯುಪಿಐ ಲೈಟ್ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ದೊಡ್ಡ ಬದಲಾವಣೆಗಳು ಆಗಲಿವೆ. ನವೆಂಬರ್ 1 ರಿಂದ UPI ಲೈಟ್ ಬಳಕೆದಾರರು ಹೆಚ್ಚಿನ ಪಾವತಿ ಮಾಡಲು ಸಾಧ್ಯವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಯುಪಿಐ ಲೈಟ್‌ ವಹಿವಾಟು ಮಿತಿಯನ್ನು […]

Continue Reading

ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ಪ್ರಧಾನಿ ಮೋದಿ

ಬೆಂಗಳೂರು: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನರಾದ ಸುದ್ದಿ ತಿಳಿದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೋದಿ ಅವರು ಸುದೀಪ್ ಅವರಿಗೆ ಸಾಂತ್ವನದ ಪತ್ರ ಬರೆದಿದ್ದಾರೆ. ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಇರುವ ಸುದೀಪ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ. ಪತ್ರದ ಮೂಲಕ ಮೋದಿ ಧೈರ್ಯ ತುಂಬಿದ್ದಾರೆ. ಆ ಪತ್ರದ ಪ್ರತಿಯನ್ನು ಸುದೀಪ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ತಾಯಿ ಸರೋಜಾ ಸಂಜೀವ್ […]

Continue Reading

ಶಹಾಬಾದ, ಕಾಳಗಿ ಜಾನುವಾರು ಕಳ್ಳರ ಬಂಧನ

ಶಹಾಬಾದ: ಅ.15 ರಂದು ಕಾಳಗಿಯಲ್ಲಿ ಮತ್ತು ಅ.21 ರಂದು ಶಹಾಬಾದನಲ್ಲಿನ ಜಾನುವಾರುಗಳ ಕಳ್ಳತನ ಮಾಡಿದ ಕಳ್ಳರ ಬಂಧಿಸಲಾಗಿದೆ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಳಗಿಯಲ್ಲಿ ಅ.15 ರಂದು ರಾತ್ರಿ ಸುಮಯದಲ್ಲಿ 35 ಸಾವಿರ ಮೌಲ್ಯದ ಕಪ್ಪು ಬಣ್ಣದ ಒಂದು ಆಕಳು ಮತ್ತು 30 ಸಾವಿರ ಮೌಲ್ಯದ ಕೆಂಪು ಬಣ್ಣದ ಒಂದು ಆಕಳು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು ಮತ್ತು ಶಹಾಬಾದ ನಗರದ […]

Continue Reading

ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್‌: 20 ಲಕ್ಷ ಬೇಡಿಕೆಯಿಟ್ಟಿದ್ದ ದಂಪತಿಗೆ ಬಂಧನ.

ಕಲಬುರಗಿ: ಮಾಜಿ ಸಚಿವರಿಗೆ ಹನಿಟ್ರ್ಯಾಪ್ ವಿಡಿಯೊ ತುಣುಕು ತೋರಿಸಿ 20 ಲಕ್ಷ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಲು ಯತ್ನಿಸಿದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ ಹಾಗೂ ಆಕೆಯ ಪತಿ ಬೆಂಗಳೂರು ಸಿಸಿಬಿ ಪೊಲೀಸ್ ಅತಿಥಿಯಾಗಿದ್ದಾರೆ. ಹನಿಟ್ರ್ಯಾಪ್ ನೆಪದಲ್ಲಿ ತಮಗೆ 20 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ನಲಪಾಡ್ ಬ್ರಿಗೇಡ್ ಕಲಬುರಗಿ ಘಟಕದ ಅಧ್ಯಕ್ಷೆ, ಆಳಂದ ಕಾಲೋನಿ ನಿವಾಸಿ […]

Continue Reading

ಪ್ರೆಯಸಿಯ ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪೊಲೀಸ್ ಪೇದೆ

ಕೊಡಗು: ಪೊಲೀಸ್​ ಪೇದೆಯೊರ್ವ ಕೊಲೆ ಮಾಡಲು ಯತ್ನಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್​ ಪೇದೆ ​​​​ಕೊಟ್ರೇಶ್​ ಮತ್ತು ಕೊಲೆಗೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕೊಟ್ರೇಶ್​ ಪ್ರಿಯತಮೆ ಆಯಿಷಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಟ್ರೇಶ್​​ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಠಾಣೆಯಲ್ಲಿ ಪೊಲೀಸ್​ ಪೇದೆಯಾಗಿದ್ದಾರೆ. ಶನಿವಾಸಂತೆಯ ನಿವಾಸಿ ಇಫ್ರಾಜ್ ಎಂಬುವರು ಆರು ವರ್ಷಗಳ ಹಿಂದೆ ಆಯಿಷಾಳನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಇಬ್ಬರ ಮಧ್ಯೆ ಅಷ್ಟೊಂದು ಅನ್ಯೊನತೆ […]

Continue Reading

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ, ಕ್ರಮಕ್ಕೆ ಸಂಘ ಒತ್ತಾಯ

ಚಿತ್ತಾಪುರ: ತಾಲೂಕಿನಲ್ಲಿ ಅಕ್ಟೋಬರ್ ತಿಂಗಳ ಸಾರ್ವಜನಿಕರ ಆಹಾರ ವಿತರಣೆ ವ್ಯವಸ್ಥೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮುಖಾಂತರ ವಿತರಣೆ ಮಾಡುವದಕ್ಕಾಗಿ ಸರ್ವರ್ ಸಮಸ್ಯೆ ತುಂಬಾ ಉಂಟಾಗಿದೆ. ಕೂಡಲೇ ಸರ್ವರ್ ಸಮಸ್ಯೆ ಪರಿಹಾರ ಮಾಡಿ ಪಡಿತರ ವಿತರಣೆಗೆ ಸುಗಮವಾಗಿ ಕಲ್ಪಿಸಬೇಕು ಎಂದು ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಉಪಾಧ್ಯಕ್ಷ, ತಾಲೂಕು ಅಧ್ಯಕ್ಷ ಧನರಾಜ್ ಯಾದವ ಹೇಳಿದರು.  ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಆಹಾರ ಇಲಾಖೆಯವರು ಈ ಮೊದಲು ಎನ್ಐಸಿ […]

Continue Reading

300 ರೂ ಲಂಚ ಪಡೆದು ವಜಾಗೊಂಡಿದ್ದ ಬೆರಳಚ್ಚುಗಾರ್ತಿ, ಬಚಾವಾಗಲೆತ್ನಿಸಿ 10 ವರ್ಷ ನಂತರ ಹೈಕೋರ್ಟನಲ್ಲಿ ಶಾಕ್

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಮಹಿಳಾ ಬೆರಳಚ್ಚುಗಾರ್ತಿ ಎಚ್​.ಎಸ್​ ಕಂಠಿ ಅವರು 300 ರೂ. ಲಂಚ ಪಡೆದು ಬಚಾವಾಗಲು ಯತ್ನಿಸಿ ಹತ್ತು ವರ್ಷಗಳ ನಂತರ ಹೈಕೋರ್ಟ್​ನಲ್ಲಿ ಶಾಕ್ ದೊರೆತಿದೆ. ಸರ್ಕಾರ ವಜಾಗೊಳಿಸಿದ್ದ ಶಿಕ್ಷೆಯನ್ನು ಬದಲಾಯಿಸುವಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ಸಲಹೆ ನೀಡಿತ್ತು. ಆದರೆ ಈಗ ಹೈಕೋರ್ಟ್​ ಹೇಳಿದ್ದೆ ಬೇರೆ, ಏನು ಅಂತ ವಿವರ ಇಲ್ಲಿದೆ ನೋಡಿ. ಮಹಿಳಾ ಬೆರಳಚ್ಚುಗಾರ್ತಿಯೊಬ್ಬರು 300 ರೂ ಲಂಚ ಪಡೆದು ಸಿಕ್ಕಿಬಿದ್ದ ನಂತರ ಅವರನ್ನು ರಾಜ್ಯ ಸರ್ಕಾರ ವಜಾಗೊಳಿಸಿತ್ತು. ಈ ವಿಚಾರವಾಗಿ […]

Continue Reading

ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಬರುವ ವಾಹನಗಳು ಸೂಚಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ: ಪಿಎಸ್‌ಐ ಶ್ರೀಶೈಲ್ ಅಂಬಾಟಿ

ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಕ್ಷೇತ್ರದ ಶಕ್ತಿ ದೇವತೆ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ (ಪಲ್ಲಕ್ಕಿ ಉತ್ಸವ) ನಾಳೆ ಗುರುವಾರ ಇರುವದರಿಂದ ದೂರ ದೂರದ ಊರುಗಳಿಂದ ಬರುವ ಭಕ್ತಾದಿಗಳಿಗೆ ಪಾರ್ಕಿಂಗ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಹೀಗಾಗಿ ನಿಗದಿತವಾಗಿ ಗೊತ್ತು ಪಡಿಸಿದ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಪಿಎಸ್‌ಐ ಶ್ರೀಶೈಲ್ ಅಂಬಾಟಿ ಹೇಳಿದ್ದಾರೆ. ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆಗೆ ಬರುವ ಭಕ್ತಾದಿಗಳು ದಿಗ್ಗಾಂವ ಕ್ರಾಸ್ ದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದವರೆಗೆ […]

Continue Reading

‘ಬಿಗ್ ಬಾಸ್​’ ಈಗಿನ ಸೀಸನ್​ಗೆ ಸುದೀಪ್ ಸಂಭಾವನೆ ಎಷ್ಟು ಗೊತ್ತಾ ? ಈ ಹಿಂದೆ ಎಷ್ಟಿತ್ತು ?

ಬೆಂಗಳೂರು: ಸುದೀಪ್ ಬಿಗ್ ಬಾಸ್’ನ ಅತಿಯಾಗಿ ಪ್ರೀತಿಸುತ್ತಾರೆ. ಸ್ಪರ್ಧಿಗಳನ್ನು ತಮ್ಮ ಮನೆಯವರಂತೆ ಕಾಣುತ್ತಾರೆ. ಈ ಕಾರಣಕ್ಕೆ ಸುದೀಪ್ ಅವರು ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಮನೆಯಿಂದ ಊಟ ಕಳುಹಿಸುತ್ತಾರೆ. ಇದು ಅವರಿಗೆ ಬಿಗ್ ಬಾಸ್​ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ಶಾಕಿಂಗ್ ಅಪ್​ಡೇಟ್ ಕೊಟ್ಟಿದ್ದಾರೆ. ಈ ಸೀಸನ್ ಬಳಿಕ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. […]

Continue Reading