ದಸರಾ ಹಬ್ಬ: ಸಹೋದರತ್ವ ಭಾವನೆಯಿಂದ ಬನ್ನಿ ವಿನಿಮಯ

ತೆಂಗಳಿ: ದಸರಾ ಹಬ್ಬ ಪ್ರಯುಕ್ತ ಶನಿವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಿವಿಧ ವಾದ್ಯಗಳೊಂದಿಗೆ ಸಂಚರಿಸಿ ಶ್ರೀ ಅಂಬಾಭವಾನಿ ದೇವಸ್ಥಾನದ ಆವರಣಕ್ಕೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಒಬ್ಬರಿಂದೊಬ್ಬರಿಗೆ ಬನ್ನಿ ಕೊಟ್ಟು ಯಾವಾಗಲೂ ಪ್ರೀತಿ, ಪ್ರೇಮದಿಂದ ಬಾಳೋಣ ಎಂದು ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿ (ದಸರಾ) ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ, ಗ್ರಾ‌.ಪಂ ಸದಸ್ಯ ಭೀಮಾಶಂಕರ ಮಾಲಿಪಾಟೀಲ, ಮಡಿವಾಳಯ್ಯ ಸಾಲಿ, ಓಂಪ್ರಕಾಶ ಹೆಬ್ಬಾಳ,‌ ವೀರಭದ್ರಪ್ಪ ಬಾಳದೆ, ಪ್ರಭಾಕರ […]

Continue Reading

ಬೆಳೆ ಸಮೀಕ್ಷೆಯೇ ಮುಗಿದಿಲ್ಲ ಅಧಿಕಾರಿಗಳ ಸಭೆ ಕರೆದಿರುವದು ಯಾವ ಪುರುಷಾರ್ಥಕ್ಕೆ ಶಾಸಕ ಮತ್ತಿಮೂಡ ಅವರೇ ? : ಸಿದ್ದುಗೌಡ ಅಫಜಲಪುರಕರ್

ಕಲಬುರಗಿ: ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ರಾತ್ರೋ ರಾತ್ರಿ ರೈತರ ಬಗ್ಗೆ ಜ್ಞಾನೋದಯವಾಯಿತಾ, ಒಮ್ಮೆಲೆ ರೈತರ ಬಗ್ಗೆ ಕಾಳಜಿವಹಿಸಿ , ಗ್ರಾಮೀಣ ಭಾಗದ ಕೃಷಿ ಅಧಿಕಾರಿಗಳ ಸಭೆ ನಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ, ಇನ್ನು ಸಮೀಕ್ಷೆಯೆ ಪೂರ್ಣಗೊಂಡಿಲ್ಲ ಸಭೆ ಕರೆದಿರುವದು ಯಾವ ಪುರುಷಾರ್ಥಕ್ಕೆ ಎಂದು ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಜಿ ಅಫಜಲಪುರಕರ್ ಪ್ರಶ್ನಿಸಿದ್ದಾರೆ. ರೈತರ ಬಗ್ಗೆ ಇಷ್ಟೊಂದು ಕಾಳಜಿ ಬರಲು ಕಾರಣವೇನು ? ಇದೆ ಕಾಳಿಜಿ, ಬೆಳೆ ಕಟಾವಿಗೆ ಬಂದು ರಾಶಿ ಮಾಡುವ ಸಂದರ್ಭದಲ್ಲಿ […]

Continue Reading

ರತನ್ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಮಾಯಾ ಟಾಟಾ

ಮುಂಬಯಿ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಉದ್ಯಮ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು ? ಹೀಗೊಂದು ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರವೂ ಸಿದ್ಧವಾಗಿದೆ. ರತನ್‌ ಟಾಟಾ ಅವರ ಸೋದರ ಸೊಸೆ ಮಾಯಾ ಟಾಟಾ ಅವರು ಭಾರತದ ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಾಮ್ರಾಜ್ಯಗಳಲ್ಲಿ ಒಂದಾದ ಟಾಟಾ ಗ್ರೂಪ್‌ನ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಯಾರಿವರು ಮಾಯಾ ಟಾಟಾ ? ಕೇವಲ 34ನೇ ವಯಸ್ಸಿನಲ್ಲೇ ಈಗಾಗಲೇ ಟಾಟಾ ಗ್ರೂಪ್‌ನಲ್ಲಿ ಗಮನಾರ್ಹ ಕೆರಿಯರ್‌ ಎತ್ತರಕ್ಕೆ ಏರಿರುವವರು ಮಾಯಾ. ಸಂಸ್ಥೆಯ ಭವಿಷ್ಯವನ್ನು ಇವರು ಕಾಪಾಡಬಲ್ಲರು […]

Continue Reading

ಚಿತ್ತಾಪುರ: ಹಜರತ್ ಸೈಯದ್ ಪೀರ್ ದರ್ಗಾ ಧ್ವಂಸಗೊಳಿಸಿದ ಕಿಡಿಗೇಡಿಗಳು

ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಹಜರತ್ ಸೈಯದ್ ಪೀರ್ ದರ್ಗಾವನ್ನು ಕಡಿಗೆಡಿಗಳು ಧ್ವಂಸಗೊಳಿಸಿದ್ದಾರೆ‌. ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಮಜಾ‌ರ್ (ಸಮಾಧಿ) ಕಿತ್ತು ಹಾಕಿದ ಕಿಡಿಗೇಡಿಗಳು, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ. ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ, ಗುರುವಾರ ಬೆಳಿಗ್ಗೆಯಿಂದ ನೂರಾರು ಜನರು ದರ್ಗಾಗೆ ಭೇಟಿ ನೀಡಿ , ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು, ದರ್ಗಾ ಮುಂಭಾಗದ ಹೊಲದಲ್ಲಿ […]

Continue Reading

ಸೇಡಂ ದಸರಾ ಉತ್ಸವದಲ್ಲಿ ಇಂದು ನಟಿ ಸಿತಾರಾ

ಸೇಡಂ: ಇಲ್ಲಿಯ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ 43ನೇ ವರ್ಷದ ದಸರಾ ಉತ್ಸವದಲ್ಲಿ ಅ. 10 ರಂದು ಗುರುವಾರ ಸಂಜೆ 7 ಕ್ಕೆ ಕಿರುತೆರೆ ಹಾಗೂ ಸಿನಿಮಾ ನಟಿ ಸಿತಾರಾ ಭಾಗವಹಿಸುವರು ಎಂದು ದೇವಾಲಯ ಕಮಿಟಿಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಹಳೆ ಬಜಾರದಲ್ಲಿರುವ ಐತಿಹಾಸಿಕ ಚಾಲುಕ್ಯ ಕಾಲದ ದೇವಾಲಯದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಪ್ರತಿಭಾನ್ವಿತ ನಟಿ ಸಿತಾರಾ ಅವರನ್ನು ಸತ್ಕರಿಸಲಾಗುವದು. 2005 ರಲ್ಲಿ ವಿಶ್ವವಿಖ್ಯಾತ ಹೆಗ್ಗೋಡಿನ ನೀನಾಸಂನಲ್ಲಿ ರಂಗ ತರಬೇತಿಯಾಗಿದ್ದು, 2011 […]

Continue Reading

ಹೆಬ್ಬಾಳ ಪ್ರೌಢಶಾಲೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಭೇಟಿ

ಕಾಳಗಿ: ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಭೇಟಿ ನೀಡಿದರು. ಶಾಲೆಗೆ ಭೇಟಿ ನೀಡಿ ಶಾಲೆಯ ಕಾರ್ಯವೈಖರಿ ಪ್ರಶಂಸೆ ಮಾಡಿದರು. ಅಕ್ಷರದಾಸೋಹ ಕಾರ್ಯಕ್ರಮ ವೀಕ್ಷಿಸುವ ಮೂಲಕ ವಿಧ್ಯಾರ್ಥಿಗಳಿಗೆ ಚಿಕ್ಕಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶಿವರಾಜ ಚೆಂಗಟಿ, ವಕೀಲರಾದ ಬಬ್ಬರ್ ಉಪಸ್ಥಿತರಿದ್ದರು.

Continue Reading

ದಿಗ್ಗಾಂವ ಗ್ರಾಮದ 120 ಮನೆಗಳಲ್ಲಿ ನುಗ್ಗಿದ ಮಳೆ ನೀರು, ತಹಸೀಲ್ದಾರ್ ಭೇಟಿ

ಚಿತ್ತಾಪುರ: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ದಿಗ್ಗಾಂವ ಗ್ರಾಮದ 110 ರಿಂದ 120 ಮನೆಯೊಳಗೆ ಹಳ್ಳದ ನೀರು ನುಗ್ಗಿದೆ, ಇದರಿಂದ ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳು ಹಾಳಾಗಿವೆ. ತಾಲೂಕಿನ ದಿಗ್ಗಾಂವ ಗ್ರಾಮಕ್ಕೆ ತಹಸೀಲ್ದಾರ್ ನಾಗಯ್ಯಹಿರೇಮಠ ಭೇಟಿ ನೀಡಿದರು. ಗ್ರಾಮದ ಸುಮಾರು 110 ರಿಂದ 120 ಮನೆಗಳಲ್ಲಿ ಮಳೆ ನೀರು ನುಗ್ಗಿದೆ, ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನೆ, ಹಾನಿಯಾದವರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಕೊಡಲಾಗುವದು ಎಂದರು. ಚಿತ್ತಾಪುರ ವ್ಯಾಪ್ತಿಯಲ್ಲಿ 53.6 ಎಂಎಂ, ನಾಲವಾರದಲ್ಲಿ 20.2 ಎಂಎಂ, […]

Continue Reading

ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಪಾಟಿ (ಸ್ಲೇಟು) ವಿತರಣೆ

ಕಾಳಗಿ: ಅಂಗನವಾಡಿ ಕಾರ್ಯಕರ್ತೆ ಪವಿತ್ರ ಪಾಟೀಲ ಅವರ ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಪಾಟಿ (ಸ್ಲೇಟು) ವಿತರಿಸಿದರು. ತಾಲೂಕಿನ ತೆಂಗಳಿ ಗ್ರಾಮದ ಅಂಗನವಾಡಿ ಕೇಂದ್ರ – 1 ರ ಹಿಂದಿನ ಅಂಗನವಾಡಿ ಕಾರ್ಯಕರ್ತೆ ದಿ. ಹೀರಾಬಾಯಿ ಪಾಟೀಲ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪಾಟಿ (ಸ್ಲೇಟು), ಪೆಣಿ ವಿತರಿಸಿ ಮಕ್ಕಳಿಗೆ ಸಿಹಿ ಹಂಚಲಾಯಿತು ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿ ಕಸ್ತೂರಿಬಾಯಿ ಉಪಸ್ಥಿತರಿದ್ದರು.

Continue Reading

ಮಕ್ಕಳಿಗೆ ಪೌಷ್ಟಿಕ ಆಹಾರ ತುಂಬಾ ಅವಶ್ಯಕ: ಆರತಿ ತುಪ್ಪದ

ಚಿತ್ತಾಪುರ: ಗ್ರಾಮೀಣ ಭಾಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಿಡಿಪಿಓ ಆರತಿ ತುಪ್ಪದ ಹೇಳಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕಾ ಆಡಳಿತ ಮತ್ತು ಶಿಶು ಅಭಿವೃದ್ಧಿ ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಅಂಗನವಾಡಿ ಕೇಂದ್ರದಲ್ಲಿ ದಿನಾಲೂ ಒಂದೊಂದು ಕಾರ್ಯಕ್ರಮ ಮಾಡುತ್ತೆವೆ, ಅಂಗನವಾಡಿ ಸ್ವಚ್ಛತೆ ಬಗ್ಗೆ, ಮಗುವಿನ ಆರೈಕೆ ಬಗ್ಗೆ ಮಗುವಿನ ತೂಕ ಹಾಕುವದು ಎಂದರು. ತಾಯಂದಿರ […]

Continue Reading

ಚಿತ್ತಾಪುರ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಆಯ್ಕೆ

ಚಿತ್ತಾಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ತಾಲೂಕಾ ಕಾರ್ಯಕಾರಿ ಸಮಿತಿ ಸಭೆ ಕರೆದು ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳುತಾಲೂಕು ಘಟಕ: ಶಾಂತಣ್ಣ ಚಾಳೀಕಾರ ಅಳ್ಳೋಳ್ಳಿ, ಬಸವರಾಜ ಕಿರಣಗಿ, ವೆಂಕಟಮ್ಮ ಪಾಲಪ್ (ಉಪಾಧ್ಯಕ್ಷರು), ಆನಂದ ಪಾಟೀಲ ನರಿಬೋಳ (ಪ್ರಧಾನ ಕಾರ್ಯದರ್ಶಿ), ಈಶ್ವರ ಬಾಳಿ ರಾವೂರ, ಪ್ರಸಾದ […]

Continue Reading