ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ, ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುವುದು, ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಈ ಯುಗಾದಿಯನ್ನು ಬೇವು ಬೆಲ್ಲ ಹಾಗೂ ಸಿಹಿಯೊಂದಿಗೆ ಆಚರಿಸುತ್ತಾರೆ. ಈಗಾಗಲೇ ಹಬ್ಬಕ್ಕೆ ವಿವಿಧ ಸಿಹಿತಿಂಡಿಗಳು.ತಯಾರಾಗಿರುತ್ತವೆ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ, ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ಸಾರುವ ಯುಗಾದಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಪ್ರೀತಿಪಾತ್ರರಿಗೆ ಕೆಲವು ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭಾಶಯ ಕೋರಬಹುದು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

Continue Reading

ಯುಗಾದಿ ವಿಶೇಷ: ಆರೋಗ್ಯಕರ ಪಚಡಿ ರೆಸಿಪಿ

ಭಾರತದಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಆಪ್ತರಿಗೆ ಬೇವು ಬೆಲ್ಲ ಹಂಚುವ ಮೂಲಕ ಜೀವನದಲ್ಲಿ ಸಿಹಿ – ಕಹಿ ಎರಡು ಸಮಾನವಾಗಿ ಸ್ವೀಕರಿಸಿ ಎಂದು ಸಾರುವ ಹಬ್ಬ ಇದಾಗಿದೆ. ಯುಗಾದಿಯಂದು ವಿವಿಧ ಬಗೆಯ ಪಾಯಸ, ಒಬ್ಬಟ್ಟು ಬಗೆ ಬಗೆಯ ಅಡುಗೆಯ ಜೊತೆಗೆ ಪಚಡಿ ಎಂಬ ವಿಶೇಷ ರೆಸಿಪಿ ತಯಾರಿಸಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಇದನ್ನು ಹೆಚ್ಚು ತಯಾರಿಸುತ್ತಾರಾದರೂ ಕರ್ನಾಟಕ ಕೆಲವು ಭಾಗದಲ್ಲಿ ಯುಗಾದಿಗೆ ಪಚಡಿ ತಯಾರಿಸುವ ಕ್ರಮವಿದೆ. ಪಚಡಿ ಎಂದರೇನು ?ಪಚಡಿ […]

Continue Reading

ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಪ್ರಿಯಾಂಕಾ ಚೋಪ್ರಾ ಅವರು ಹಿಂದಿ ಸಿನಿಮಾದಲ್ಲಿ ನಟಿಸಲಾರದ್ದು ಹಲವು ವರ್ಷಗಳೇ ಕಳೆದಿವೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಜೊತೆಗೆ ನಟಿಸಲು 30 ಕೋಟಿ ರೂ. ಸಂಭಾವನೆಯನ್ನು ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾಗೆ ಈಗ 42 ವರ್ಷವಾದ್ರೂ ನಟಿಯ ಚಾರ್ಮ್ ಇನ್ನೂ ಕಮ್ಮಿಯಾಗಿಲ್ಲ. ಅವರಿಗೆ ಇನ್ನೂ ಬೇಡಿಕೆಯಿದೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ. […]

Continue Reading

ನೋಡ ಬನ್ನಿ ನಾಲವಾರದ ಕೋರಿಸಿದ್ದೇಶ್ವರ ಜಾತ್ರಾ ವೈಭವ

ಚಿತ್ತಾಪುರ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ, ಪವಾಡ ಪುರುಷ, ಸಿದ್ಧಕುಲಚಕ್ರವರ್ತಿ, ಗುರುಕುಲಸಾರ್ವಭೌಮ ನಾಲವಾರದ ಮಹಾತ್ಮಾ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾ ಶಿವಯೋಗಿಗಳ ಜಾತ್ರಾಮಹೋತ್ಸವವು ಜ. 29 ಮತ್ತು 30 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿಗ್ದರ್ಶನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹತ್ತು ಹಲವು ವೈಶಿಷ್ಟ್ಯಪೂರ್ಣ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.29 ರಂದು ಬುಧವಾರ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ಭಕ್ತರ ಹರಕೆಯ “ತನಾರತಿ” ಮಹೋತ್ಸವ ಕಾರ್ಯಕ್ರಮ ನಡೆಯಲಿದೆ […]

Continue Reading

ಮೊಬೈಲ್​ನಲ್ಲಿ ಸಿಗ್ನಲ್ ಇಲ್ಲದಿದ್ದರೂ ಕರೆ ಮಾಡುವುದು ಹೇಗೆ ಗೊತ್ತೆ ?: ಕೇಂದ್ರ ಸರ್ಕಾರದಿಂದ ದೊಡ್ಡ ಹೆಜ್ಜೆ

ನಿಮ್ಮ ಮೊಬೈಲ್’ನಲ್ಲಿ ಸಿಗ್ನಲ್ ಇಲ್ಲದಿದ್ದರೂ ನೀವಿರುವ ಜಾಗದಲ್ಲಿ ಇತರೆ ಟೆಲಿಕಾಂ ಕಂಪನಿಯ ಸಿಗ್ನಲ್ ಇದ್ದರೆ ಕರೆ ಮಾಡಬಹುದು. ಯಾವುದೆ ಸಿಗ್ನಲ್ ಇಲ್ಲದಿದ್ದರು ಲಭ್ಯವಿರುವ ಇತರ ನೆಟ್‌ವರ್ಕ್‌ಗಳ ಸಹಾಯದಿಂದ ಕರೆ ಮಾಡುವ ಆಯ್ಕೆ ಇದಾಗಿದೆ. ಜಿಯೋ, ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಬಳಕೆದಾರರು ತಮ್ಮ ಸ್ವಂತ ಸಿಮ್ ನೆಟ್‌ವರ್ಕ್ ಇಲ್ಲದಿದ್ದರೂ ಅಲ್ಲಿ ಲಭ್ಯವಿರುವ ಯಾವುದೆ ನೆಟ್‌ವರ್ಕ್‌ನಿಂದ ಕರೆ ಮಾಡಬಹುದು. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ದೇಶದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ICR) ಸೌಲಭ್ಯವನ್ನು ಪ್ರಾರಂಭಿಸಿದೆ. ಈ ನಿಬಂಧನೆಯ ಅಡಿಯಲ್ಲಿ ಎಲ್ಲಾ […]

Continue Reading

ವಾಚ್​​ಮನ್​​ಗೆ ಜಾಕ್​ಪಾಟ್: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 60 ವರ್ಷದ ವೃದ್ಧ

ಕೆಲಸ ಮಾಡಿ ಗಳಿಸುತ್ತಿದ್ದ ಹಣದಲ್ಲಿ ಮನೆಗೆ ಕಳುಹಿಸಿ ಸ್ವಲ್ಪ ಹಣದಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇತ್ತೀಚೆಗೆ ನಡೆದ ಹೊಸ ವರ್ಷದ ಬಿಗ್ ಟಿಕೆಟ್ ಗ್ರ್ಯಾಂಡ್ ಪ್ರೈಸ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರಂತೆ. ಸದ್ಯ ಈ ಲಾಟರಿಯ ಲಕ್ಕಿ ಟಿಕೆಟ್ ನಂಬರ್ ಘೋಷಣೆ ಮಾಡಿದ್ದು, ಡ್ರಾದಲ್ಲಿ ರಾಜಮಲಯ್ಯ ಅವರಿಗೆ ಮಿಲಿಯನ್ ದಿರ್ಹಮ್ (ಯುಎಇ ಹಣ) ಗೆದ್ದಿದ್ದಾರೆ. ಅದೃಷ್ಟ ಯಾವಾಗ ? ಹೇಗೆ ? ಎಲ್ಲಿಂದ ಬರುತ್ತದೆ ಎಂಬುದು ನಮಗೆ ತಿಳಿಯೊದಿಲ್ಲ. ಅದೃಷ್ಟ ಹಾಗೆ ಬಂದರೆ ರಾತ್ರೋರಾತ್ರಿ ಬದುಕು ಬದಲಾಯಿಸುತ್ತದೆ. […]

Continue Reading

ಅಕೌಂಟ್​ಗೆ ಅಚಾನಕ್​ ದುಡ್ಡು ಬಂದರೆ ಕೂಡಲೆ ಬ್ಯಾಲೆನ್ಸ್​ ಚೆಕ್​ ಮಾಡಬೇಡಿ, ಇದು ಹೊಸ ಸ್ಕ್ಯಾಮ್

ಈಗ ಹೊಸ ಹೊಸ ಡಿಟಿಜಲ್​ ಸ್ಕ್ಯಾಮ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಜನರನ್ನು ಮರುಳು ಮಾಡಿ, ಕುಳಿತಲ್ಲಿಯೇ ಅವರಿಗೆ ಟೋಪಿ ಹಾಕಬಹುದು ಎಂದು ತಿಳಿದುಕೊಳ್ಳುವ ದೊಡ್ಡ ಗ್ಯಾಂಗ್​ ಕೆಲಸ ಮಾಡುತ್ತಿದೆ. ಜನರು ಒಂದು ಸ್ಕ್ಯಾಮ್​ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಂತೆಯೇ ಮತ್ತೊಂದು ಹೊಸ ಸ್ಕ್ಯಾಮ್​ ತೆರೆದುಕೊಳ್ಳುತ್ತದೆ. ನಿಮ್ಮ ಅರಿವಿಗೆ ಬಾರದೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಇದಾಗಲೇ ಅದೆಷ್ಟೋ ರೀತಿಯ ಸೈಬರ್​ ಕ್ರೈಮ್​, ಡಿಜಿಟಲ್​ ಅರೆಸ್ಟ್​ ಸೇರಿದಂತೆ ಅದೆಷ್ಟು ಬಂದಿವೆಯೋ ಲೆಕ್ಕಕ್ಕಿಲ್ಲ. ಈಗ ಹೊಸ ಸೇರ್ಪಡೆ Jumped deposit […]

Continue Reading

ಕೌನ್ ಬನೇಗಾ ಕರೋಡ್​ಪತಿಯಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆಯ ಬಡ ಯುವಕ

ಜ್ಞಾನವೇ ಎಲ್ಲದಕ್ಕಿಂತ ಮಿಗಿಲಾದ ಐಶ್ವರ್ಯಾ ಎಂಬ ಮಾತಿದೆ. ಕೇವಲ ಜ್ಞಾನದಿಂದಲೇ ಬಡ ಕಾರ್ಮಿಕನ ಮಗನೊಬ್ಬ ಈಗ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದಾನೆ. ಬಡ ವೆಲ್ಡರ್ ಕಾರ್ಮಿಕನ ಮಗನೊಬ್ಬ ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂ ಗೆದ್ದಿದ್ದಾನೆ. ಅಷ್ಟಕ್ಕೂ ಈ ಯುವಕ ಬೇರೆ ಯಾವುದೋ ರಾಜ್ಯದವನಲ್ಲ. ನಮ್ಮದೆ ಕರ್ನಾಟಕದ ಬಾಗಲಕೋಟೆಯವನು. ಬಾಗಲಕೋಟೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮ್​ಜಾನ್ ಮಲಿಕ್ […]

Continue Reading

ಕೇವಲ 1.50 ಪೈಸೆಗಾಗಿ ಗ್ಯಾಸ್‌ ಏಜೆನ್ಸಿ ವಿರುದ್ಧ 7 ವರ್ಷ ಹೋರಾಟ ಮಾಡಿ ಯಶಸ್ಸು ಕಂಡ ಗ್ರಾಹಕ

ಭೋಪಾಲ್‌: ಈಗಿನ ಬ್ಯುಸಿ ಜಗತ್ತಿನಲ್ಲಿ ಒಂದೂವರೆ ರೂಪಾಯಿ ಬಗ್ಗೆ ಯಾರೂ ಗಮನ ನೀಡೋದೇ ಇಲ್ಲ. ಹಾಗೆನಾದರೂ ಬಸ್‌ನಲ್ಲಿ, ಟ್ರೇನ್‌ನಲ್ಲಿ ಟಿಕೆಟ್‌ಕೊಳ್ಳುವಾಗ ಒಂದೂವರೆ ರೂಪಾಯಿ ಹಣ ಚಿಲ್ಲರೆ ಇಲ್ಲದಿದ್ದಾಗ ರೌಂಡ್‌ಆಫ್‌ ಕೂಡ ಮಾಡ್ತಾರೆ. ಆದರೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಚಕ್ರೇಶ್‌ ಜೈನ್‌ ಎನ್ನುವ ವ್ಯಕ್ತಿ ಕೇವಲ 1.50 ರೂಪಾಯಿಗಾಗಿ ಬರೋಬ್ಬರಿ 7 ವರ್ಷಗಳ ಕಾಲ ಗ್ಯಾಸ್‌ ಏಜೆನ್ಸಿ ವಿರುದ್ಧ ಹೋರಾಟ ಮಾಡಿದ್ದಾರೆ. ಇದು ಸಣ್ಣ ಅಮೌಂಟ್‌ ಆಗಿರಬಹುದು. ಆದರೆ ಗ್ರಾಹಕರ ಹಕ್ಕುಗಳ ವಿಚಾರದಲ್ಲಿ ಇದು ದೊಡ್ಡ ಗೆಲುವು ಎಂದಿದ್ದಾರೆ. […]

Continue Reading

ಇನ್ಮುಂದೆ ಡಾಕ್ಯುಮೆಂಟ್ ಸ್ಕ್ಯಾನ್ ವ್ಯಾಟ್ಸಾಪ್‌ನಲ್ಲಿ ಮಾಡಿ, ಹೊಸ ಫೀಚರ್

ನವದೆಹಲಿ: ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಹಲವರು ಬೇರೆ ಬೇರೆ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತಾರೆ. ಅಥವಾ ಅಗತ್ಯವಿದ್ದಾಗ ಡೌನ್ಲೋಡ್ ಮಾಡಿ ಬಳಿಕ ಡಿಲೀಟ್ ಮಾಡುತ್ತಾರೆ. ಬಳಕೆ ಮಾಡದ ಹಲವಾರು ಆಯಪ್‌ಗಳಿಂದ ಫೋನ್ ಸ್ಟೋರೇಜ್ ತುಂಬಿಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಈಗ ವ್ಯಾಟ್ಸಾಪ್ ಉತ್ತರ ನೀಡಿದೆ. ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಫೀಚರ್ ಪರಿಚಯಿಸಿದೆ. ಡಾಕ್ಯುಮೆಂಟ್ ಸ್ಕ್ಯಾನ್ ಫೀಚರ್. ಇನ್ಮುಂದೆ ಗ್ರಾಹಕರು ಬೇರೆ ಬೇರೆ ಆ್ಯಪ್‌ ಬಳಸುವ ಅಗತ್ಯವಿಲ್ಲ. ವ್ಯಾಟ್ಸಾಪ್ ಮೂಲಕವೇ ಎಲ್ಲವೂ ಸಾಧ್ಯ. ವ್ಯಾಟ್ಸಾಪ್ ಹೊಸ ಅಪ್‌ಡೇಟ್ […]

Continue Reading