ರಸ್ತೆಯಲ್ಲಿ ಏಕಾಏಕಿ ವಾಹನ ಅಡ್ಡ ಹಾಕುವಂತಿಲ್ಲ, ಕೀ ಕಸಿಯುವಂತಿಲ್ಲ: ಪೊಲೀಸರಿಗೆ ಡಿಜಿಪಿ ಕಟ್ಟಾಜ್ಞೆ

ಬೆಂಗಳೂರು: ಮಂಡ್ಯ ಪೊಲೀಸರ ಕರ್ತವ್ಯ ಲೋಪದಿಂದ ಮಗುವೊಂದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್‌ ಇಲಾಖೆ, ತಪಾಸಣೆ ನೆಪದಲ್ಲಿ ಸಕಾರಣವಿಲ್ಲದೆ ವಾಹನಗಳನ್ನು ಏಕಾಏಕಿ ತಡೆದು ನಿಲ್ಲಿಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿದೆ. ಈ ಕುರಿತು ಶನಿವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಸುತ್ತೋಲೆ ಹೊರಡಿಸಿರುವ ಪ್ರಭಾರ ಡಿಜಿಪಿ ಡಾ.ಎಂ.ಎ ಸಲೀಂ, ವಾಹನಗಳ ತಪಾಸಣೆ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ. ಹೆದ್ದಾರಿಗಳಲ್ಲಿ ಜಿಗ್‌ಜಾಗ್‌ ಬ್ಯಾರಿಕೇಡ್‌ ಅಳವಡಿಸಿ ತಡೆಯಬಾರದು. ರಸ್ತೆಯಲ್ಲಿ ಏಕಾಏಕಿ ಅಡ್ಡಬಂದು ವಾಹನಗಳನ್ನು ನಿಲ್ಲಿಸಬಾರದು. ವಾಹನಗಳ ಕೀ ತೆಗೆದುಕೊಳ್ಳಬಾರದು. […]

Continue Reading

ಶೇ.30 ರಷ್ಟು ಆಯಸ್ಸು ಹೆಚ್ಚಿಸುವ ಔಷಧ ಪ್ರಯೋಗ ಯಶಸ್ವಿ: ಇಲಿಗಳ ಮೇಲೆ ಜರ್ಮನಿ ವಿಜ್ಞಾನಿಗಳ ಪ್ರಯೋಗ

ಬರ್ಲಿನ್‌: ಜೀವಿಗಳ ಆಯಸ್ಸು ಹೆಚ್ಚಿಸುವ ಕುರಿತಾದ ಜೀವವಿಜ್ಞಾನಿಗಳ ಪ್ರಯೋಗಕ್ಕೆ ಪ್ರಾರಂಭಿಕ ಯಶಸ್ಸು ದೊರೆತಿದೆ, ಜರ್ಮನಿಯ ವಿಜ್ಞಾನಿಗಳು ಇಲಿಗಳ ಜೀವಿತಾವಧಿಯನ್ನು ಶೇ.30 ರಷ್ಟು ವಿಸ್ತರಿಸುವ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ ಎಂದು ವರದಿಯಾಗಿದೆ. ಮಾನವರ ಮೇಲೂ ಪ್ರಯೋಗದ ಚಿಂತನೆ ಇದೆ ಎನ್ನಲಾಗಿದೆ. ಮ್ಯಾಕ್ಸ್‌ ಪ್ಲಾಂಕ್‌ ಇನ್ಸ್ಟಿಟ್ಯೂಟ್‌ ಫಾರ್‌ ಬಯಾಲಜಿ ಆಫ್ ಏಜಿಂಗ್‌ನ ಜೀವವಿಜ್ಞಾನಿಗಳ ತಂಡ ಎಫ್ಡಿಎ ಪ್ರಮಾಣಿತ ಔಷಧಗಳಾದ ರಾಪಾಮೈಸಿನ್‌ (ಅಂಗಾಂಶ ಕಸಿಯಲ್ಲಿ ಬಳಕೆಯಾಗುವ ಔಷಧ) ಹಾಗೂ ಟ್ರಾಮೆಟಿನಿಬ್‌ (ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧ) ಸಂಯೋಜನೆ ಬಳಸಿ ಈ ಪ್ರಯೋಗ […]

Continue Reading

ರಾವೂರ: ಮೇ‌.27 ರಂದು ಬಸವೇಶ್ವರ ಮೂರ್ತಿ ಅನಾವರಣ

ರಾವೂರ: ಮೇ.27ರಂದು ಗ್ರಾಮದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಸಮಾರಂಭ ನಡೆಯಲಿದೆ ಎಂದು ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಸಮಿತಿ ತಿಳಿಸಿದೆ. ಅಂದು ಸಂಜೆ 4 ಗಂಟೆಗೆ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ವಿವಿಧ ಕಲಾ ತಂಡಗಳೊಂದಿಗೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ರಾವೂರ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವೇಶ್ವರ ಮೂರ್ತಿ ಅನಾವರಣಗೊಳ್ಳುವದು. ಸೊನ್ನದ ಪೂಜ್ಯ ಶಿವಾನಂದ ಸ್ವಾಮಿ, ಮುಗುಳನಾಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸುವರು. […]

Continue Reading

ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ: ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ ?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್‌ನ ಉಗ್ರ ತಾಣಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದೆ. ಘಟನೆ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್‌ ಸಿಂಧೂರದ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸುಳ್ಳಿನ ಮುಖವಾಡವನ್ನು ಕಳಚಿದ್ದಾರೆ. ಮಹಿಳಾ ಅಧಿಕಾರಿಗಳಿಂದಲೆ ಸುದ್ದಿಗೋಷ್ಠಿ ನಡೆಸಿದ್ದು […]

Continue Reading

ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ: ಹೊಸ ಬ್ಯಾನರ್ ಶುರು

ರಾಕಿಂಗ್ ಸ್ಟಾರ್ ಯಶ್ ಅವರು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಈಗ ಕೇವಲ ನಟ ಮಾತ್ರವಲ್ಲ ನಿರ್ಮಾಪಕ ಕೂಡ ಹೌದು. ಬಾಲಿವುಡ್​ನ ರಾಮಾಯಣ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗುವ ಹಂತಕ್ಕೆ ಬೆಳೆದಿದ್ದಾರೆ ಅನ್ನೊದು ವಿಶೇಷ. ಈ ಚಿತ್ರಕ್ಕೆ ಅವರು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈಗ ಅವರ ಕುಟುಂಬದವರು ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿಯಾಗಿದೆ. ಯಶ್ ಬಳಿಕ ಅವರ ತಾಯಿ ಪುಷ್ಪ ಅವರು ಹಲವು ಸಿನಿಮಾಗಳನ್ನು ತಯಾರು […]

Continue Reading

ಮಕ್ಕಳಿಗೆ ಮನೆಯಲ್ಲೆ ಮಾಡಿಕೊಡಿ ಶೇಂಗಾ ಚಿಕ್ಕಿ

ಸಿಹಿತಿಂಡಿ ಅಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಸ್ವೀಟ್‌ ಅಲ್ಲಿ ಚಿಕ್ಕಿ ಅಂದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಶೇಂಗಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಗಡಿಗಳಿಂದ ಚಿಕ್ಕಿ ತೆಗೆದುಕೊಂಡು ತಿಂತೀರಾ, ಹಾಗಿದ್ದರೆ ಇಲ್ಲಿದೆ ಮನೆಯಲ್ಲೆ ಚಿಕ್ಕಿ ತಯಾರಿಸುವ ಸುಲಭ ವಿಧಾನ. ಬೇಕಾಗುವ ಸಾಮಾಗ್ರಿ ಶೇಂಗಾ – 200 ಗ್ರಾಂಬಿಳಿ ಬೆಲ್ಲ – 250 ಗ್ರಾಂತುಪ್ಪ – 2 ಟೀ ಸ್ಪೂನ್ಅಡುಗೆ ಸೋಡಾ – ಸ್ವಲ್ಪತುರಿದ ಒಣ ಕೊಬ್ಬರಿ- 50 ಗ್ರಾಂರೋಸ್ […]

Continue Reading

ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ ? ಯಾವಾಗ ಬದಲಿಸಬೇಕು ?

ಬೆಂಗಳೂರು: ಬೇಸಿಗೆ ಬಂದ ತಕ್ಷಣ, ಅನೇಕ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಪ್ರಾರಂಭವಾಗುತ್ತದೆ. ಇದಕ್ಕಾಗಿಯೇ ಜನರು ಮನೆಯಲ್ಲಿ ಇನ್ವರ್ಟರ್‌ಗಳನ್ನು ಸ್ಥಾಪಿಸುತ್ತಾರೆ. ಆದರೆ ಇನ್ವರ್ಟರ್‌ನಲ್ಲಿರುವ ಬ್ಯಾಟರಿ ಎಷ್ಟು ಕಾಲ ಇರುತ್ತದೆ ಎಂಬುದು ನೀವು ಯೋಚಿಸಿದ್ದಿರಾ ? ಪ್ರತಿಯೊಂದು ಬ್ಯಾಟರಿಯೂ ಜೀವಿತಾವಧಿ ಹೊಂದಿರುತ್ತದೆ, ಆ ಸಮಯ ಮುಗಿದ ಮೇಲೆ ಬ್ಯಾಟರಿಯನ್ನು ಬದಲಾಯಿಸುವುದು ಅವಶ್ಯಕ. ನಿಮ್ಮ ಮನೆಯಲ್ಲಿ ಅಳವಡಿಸಿರುವ ಇನ್ವರ್ಟರ್‌ನ ಬ್ಯಾಟರಿಯನ್ನು ಬದಲಾಯಿಸುವ ಸಮಯ ಬಂದಿದೆಯಾ ಅಥವಾ ಇಲ್ಲವಾ ? ಅದನ್ನು ಈ ರೀತಿ ತಿಳಿದುಕೊಳ್ಳಿ. ಎಷ್ಟು ವರ್ಷಗಳ ಕಾಲ ಬ್ಯಾಟರಿ ಬಾಳಿಕೆ […]

Continue Reading

ಬೆಂಗಳೂರಿಗೆ ಬಂದ ಎಸಿ ಎಲೆಕ್ಟ್ರಿಕ್ ಬಸ್: ಮೊದಲ ಬಾರಿಗೆ ರಾಜಧಾನಿಯಲ್ಲಿ ಬಿಎಂಟಿಸಿ ಎಸಿ ಎಲೆಕ್ಟ್ರಿಕ್ ಬಸ್ ಸಂಚಾರ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲಿದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಮೆಟ್ರೋ ರೈಲಿನ ಮೊರೆ ಹೋಗುತ್ತಿದ್ದಾರೆ. ಈ ಹಿಂದೆ ಪ್ರತಿದಿನ ಎಂಟು ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರೆ, ಬೇಸಿಗೆ ಆರಂಭವಾದ ಮೇಲೆ 9 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದಾರೆ. ಬಿಎಂಟಿಸಿ ಅಂದರೆ ಜನರು ಮೂಗು ಮುರಿಯುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಮುಂದಾಗಿದೆ, 320 ಹೊಚ್ಚ ಹೊಸ ಬಸ್​​ಗಳ ಮೊರೆ ಹೋಗಿದೆ. ಈಗಾಗಲೇ ಎಸಿ ಎಲೆಕ್ಟ್ರಿಕ್ ಬಸ್​ಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಸದ್ಯದಲ್ಲೇ […]

Continue Reading

ಮುಂಬೈಯಿಂದ ದುಬೈ ಮಧ್ಯೆ ಸಮುದ್ರದೊಳಗೆ ರೈಲು: ದೇಶದ ಭವಿಷ್ಯವನ್ನೆ ಬದಲಿಸಲಿದೆಯಾ ಈ ಪ್ಲ್ಯಾನ್‌ ?

ಸಾಮಾನ್ಯವಾಗಿ ಬಸ್ಸು, ಕಾರುಗಳ ಪ್ರಯಾಣಕ್ಕಿಂತ ರೈಲಿನಲ್ಲಿ ದೀರ್ಘ ಪ್ರವಾಸ ಮಾಡುವ ಮಜಾನೆ ಬೇರೆ. ಇದು ಕೇವಲ ಅಗ್ಗದ ಸಾರಿಗೆ ಮಾತ್ರವಲ್ಲ, ಆರಾಮದಾಯಕವಾಗಿ ನಿಗದಿತ ಸ್ಥಾನವನ್ನು ತಲುಪುತ್ತದೆ. ಮಾರ್ಗದಲ್ಲಿ ಜಲಪಾತಗಳ ಸೌಂದರ್ಯ, ಆಳವಾದ ಕಂದಕ, ಹಚ್ಚ ಹಸಿರಿನ ಸೌಂದರ್ಯ ಸೇರಿದಂತೆ ಅನೇಕ ಅದ್ಭುತವಾದ ಪ್ರಾಕೃತಿಕ ಆಕರ್ಷಣೆಗಳು ಕಣ್ಣು ಕುಕ್ಕುವಂತಿರುತ್ತದೆ. ಜೊತೆಯಲ್ಲಿ ಸ್ನೇಹಿತರಿದ್ದರೆ ಹಿತವಾದ ಮಾತುಗಳನ್ನು ಕೇಳುತ್ತಾ ಊರು ಸೇರಿದ್ದೆ ತಿಳಿಯುದಿಲ್ಲ. ಸಾಮಾನ್ಯ ರೈಲಿನಲ್ಲಿ ಇಷ್ಟೆಲ್ಲಾ ರೋಮಾಂಚಕ ಅನುಭವ ಸಿಗುತ್ತೆ ಅಂದ್ಮೇಲೆ ಇನ್ನೂ ಸಮುದ್ರದೊಳಗೆ ರೈಲಿನಲ್ಲಿ ಪ್ರಯಾಣಿಸಿದರೆ ಅದರ ಅನುಭವ […]

Continue Reading

UPI ಪೇಮೆಂಟ್​​ ಮಾಡುವಾಗ ಮಿಸ್​ ಆಗಿ ಬೇರೆಯವರಿಗೆ ಹಣ ಕಳಿಸಿದ್ರಾ ? ಚಿಂತಿಸಬೇಡಿ ಈ ರೀತಿ ಮಾಡಿ

ಆನ್​ಲೈನ್​​ ಪಾವತಿ ಮಾಡುವಾಗ ನೀವು ತಪ್ಪಾಗಿ ಯಾವುದೆ ಖಾತೆ, UPI ಐಡಿ ಅಥವಾ ಸಂಖ್ಯೆಗೆ ಪಾವತಿ ಮಾಡಿದರೆ ಚಿಂತಿಸಬೇಡಿ. ಈ ರೀತಿ ಮಾಡಿ ನಿಮ್ಮ ಹಣ ನಿಮಗೆ ವಾಪಸ್​​ ಬರುತ್ತದೆ. ಆನ್​ಲೈನ್ ​​ಮೂಲಕ ಹಣ ಕಾಸಿನ ವ್ಯವಹಾರ, ಆನ್​ಲೈನ್​ ಶಾಪಿಂಗ್ ಮತ್ತು ಊಟ ಬೇಕು ಅಂದರೂ ಆನ್​ಲೈನ್​ನಲ್ಲಿ ಆರ್ಡರ್​​ ಮಾಡಿ ತರಿಸಿಕೊಳ್ಳುತ್ತೆವೆ. ಆವಾಗ ಆನ್​ಲೈನ್​ ಪೇಮೆಂಟ್​ ಮಾಡಲೆಬೇಕು. ಪಾವತಿ ಅಪ್ಲಿಕೇಶನ್‌ ಬಳಸಲು UPI ಮಾಧ್ಯಮವಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ […]

Continue Reading