ಫಿಟ್‌ನೆಸ್, ಇನ್ಶೂರೆನ್ಸ್ ಇಲ್ಲದ 390 ಖಾಸಗಿ ಶಾಲಾ ವಾಹನಗಳು ಸೀಜ್

ಸುದ್ದಿ ಸಂಗ್ರಹ ವಿಜಯನಗರಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿ ಶಾಲಾ-ಕಾಲೇಜು ವಾಹನಗಳ ವಿರುದ್ಧ ಸಮರ ಸಾರಿದ್ದಾರೆ. ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸೂಕ್ತ ದಾಖಲಾತಿಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬರೋಬ್ಬರಿ 390 ಖಾಸಗಿ ಶಾಲಾ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಫಿಟ್‌ನೆಸ್ ಪ್ರಮಾಣಪತ್ರ (FC) ಮತ್ತು ಇನ್ಶೂರೆನ್ಸ್ (ವಿಮೆ) ಇಲ್ಲದೆ ರಸ್ತೆಗಿಳಿದಿದ್ದ ವಾಹನಗಳ ವಿರುದ್ಧ ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಒಟ್ಟು 103 ಪ್ರಕರಣಗಳನ್ನು ದಾಖಲಿಸಿಕೊಂಡಿರುವ […]

Continue Reading

ಕಲಬುರಗಿ: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ವೃತ್ತಿನಿರತ ಕುಶಲಕರ್ಮಿಗಳಿಂದ ಉಚಿತ ಉಪಕರಣಗಳು ಹಾಗೂ ಹೊಲಿಗೆ ಯಂತ್ರಗಳನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕಾ ವಿಭಾಗದಿಂದ ಅರ್ಜಿ ಆಹ್ವಾನಿಸಲಾಗಿದೆ. 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಧೋಬಿ ಹಾಗೂ ಕ್ಷೌರಿಕ ವೃತ್ತಿಯ ಉಚಿತ ಉಪಕರಣಗಳನ್ನು ಸಾಮಾನ್ಯ ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನೀಡಲಾಗುವುದು. ಹಾಗೆಯೇ ಪೋರ್ಟೆಬಲ್‌ ಫ್ರೀ ಹ್ಯಾಂಡ್ ವಿದ್ಯುತ್‍ ಚಾಲಿತ ಹೊಲಿಗೆ ಯಂತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗುವುದು. ಅರ್ಜಿ […]

Continue Reading

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಮೂವರು ಅಪರಾಧಿಗಳಿಗೆ ಜೈಲು ಶಿಕ್ಷೆ

ಸುದ್ದಿ ಸಂಗ್ರಹ ಕಲಬುರಗಿ12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಸ್ನೇಹಿತರಿಗೆ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ. ಕಲಬುರಗಿ ನಗರದ ನಾಗೇಶ ಅಲಿಯಾಸ್ ಬಾಬು ರಾಠೋಡಗೆ (30) 25 ವರ್ಷ ಜೈಲು ಮತ್ತು 45 ಸಾವಿರ ದಂಡ ವಿಧಿಸಿದೆ. ಶಿವರಾಜ ಅಲಿಯಾಸ್ ಸುರಜ್ಯಾ ಹೊನಗುಂಟಿ (20) ಮತ್ತು ಕಾಳಗಿ ತಾಲೂಕಿನ ಕಲಗುರ್ತಿಯ ಮಲ್ಲಿಕಾರ್ಜುನ ಅಲಿಯಾಸ್‌ ಮಲ್ಲು ಶ್ರೀನವರ (19) ಎಂಬುವವರಿಗೆ ಮೂರು ವರ್ಷ ಜೈಲು ಮತ್ತು […]

Continue Reading

ಚನ್ನಪಟ್ಟಣ ತಹಸೀಲ್ದಾರ್‌ಗೆ ಅಸಹಜ ಲೈಂಗಿಕ ಕಿರುಕುಳ, ವಿವಸ್ತ್ರಗೊಳಿಸಿ ಕೊಲೆ ಯತ್ನ: 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದವ ಅರೆಸ್ಟ್

ಸುದ್ದಿ ಸಂಗ್ರಹ ರಾಮನಗರತಹಸೀಲ್ದಾರ್ ಅವರಿಗೆ ಸರ್ಕಾರಿ ನಿವಾಸದಲ್ಲೇ ಅಸಹಜ ಲೈಂಗಿಕ ಕಿರುಕುಳ ನೀಡಿ, ವಿವಸ್ತ್ರಗೊಳಿಸಿ ವಿಡಿಯೋ ಮಾಡಿ 10 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಚನ್ನಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚನ್ನಪಟ್ಟಣ ತಹಸೀಲ್ದಾರ್ ಬಿ.ಎನ್ ಗಿರೀಶ್ ಅವರಿಗೆ ಕಿರುಕುಳ ನೀಡಿದ್ದು, ಆರೋಪಿಯನ್ನು ಮೈಸೂರು ಮೂಲದ ಅನುಶ್ ಎಂದು ಗುರುತಿಸಲಾಗಿದೆ. ಆರೋಪಿ ಅನುಶ್ ಫೇಸ್‌ಬುಕ್ ಮೂಲಕ ತಹಸೀಲ್ದಾರ್ ಗಿರೀಶ್‌ಗೆ ಪರಿಚಯವಾಗಿದ್ದ. ಜೂನ್ 28ರಂದು ರಾತ್ರಿ ಅನುಶ್ ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆಗೆ […]

Continue Reading

ಕೆಕೆಆರ್‌ಟಿಸಿ ಬಸ್‌-ಬೈಕ್ ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೆ ಸಾವು

ಸುದ್ದಿ ಸಂಗ್ರಹ ಕಲಬುರಗಿದ್ವಿಚಕ್ರ ವಾಹನ ಮತ್ತು ಕೆಕೆಆರ್‌ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಕರದಾಳ ಸಮೀಪ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ. ಚಿತ್ತಾಪುರದಿಂದ ಸನ್ನತಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್‌ ಹಾಗೂ ಬೊಮ್ಮನಳ್ಳಿ ಕಡೆಯಿಂದ ಚಿತ್ತಾಪುರ ಕಡೆಗೆ ಹೋಗುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ದುರಂತದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಮೂವರ ಮೇಲೆ ಬಸ್ ಚಕ್ರಗಳು ಹರಿದ ಪರಿಣಾಮ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೊಮ್ಮನಹಳ್ಳಿ ಗ್ರಾಮದ […]

Continue Reading

ಗಿರವಿ ಇಟ್ಟ ಚಿನ್ನ ‌ವಾಪಸ್ ಕೇಳಿದ್ದಕ್ಕೆ ಫೈರಿಂಗ್‌: ಶಾಲಾ ಬಾಲಕಿಗೂ ತಗುಲಿದ ಗುಂಡು

ಸುದ್ದಿ ಸಂಗ್ರಹ ಧಾರವಾಡಗಿರಿವಿ ಇಟ್ಟಿದ್ದ ಚಿನ್ನವನ್ನು ವಾಪಸ್ ಕೇಳಿದ್ದಕ್ಕೆ ಧಾರವಾಡದ ಗರಗ ಗ್ರಾಮದಲ್ಲಿ ಫೈರಿಂಗ್ ನಡೆದಿದೆ. ಚಿನ್ನ ಕೇಳಿದ ಅಪ್ಪ ಮಗನ ಮೇಲೆ ಚಿನ್ನದಂಗಡಿ ಮಾಲೀಕ ಗುಂಡು ಹಾರಿಸಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಗೆ ಸಹ ಗುಂಡು ತಗುಲಿದೆ. ಗರಗ ಗ್ರಾಮದ ಜ್ಯುವೆಲ್ಲರಿ ಶಾಪ್ ಮಾಲೀಕ ಮೌನೇಶ್ ಬಳಿ ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ ಹಾಗೂ ಆತನ ಪುತ್ರ ಸಿದ್ದಪ್ಪ ಹೊರಕೇರಿ 4 ವರ್ಷಗಳ ಹಿಂದೆ 40 ಗ್ರಾಂ ಚಿನ್ನವನ್ನು 60 ಸಾವಿರ ರೂ.ಗೆ […]

Continue Reading

ಗ್ರೂಪ್ ಇನ್ಶೂರೆನ್ಸ್ ಹಣ ಬಿಡುಗಡೆಗೆ 3 ಸಾವಿರ ರೂ. ಲಂಚ: ದ್ವಿತೀಯ ದರ್ಜೆ ಸಹಾಯಕಿ ಲೋಕಾ ಬಲೆಗೆ

ಸುದ್ದಿ ಸಂಗ್ರಹ ಹಾವೇರಿಗ್ರೂಪ್ ಇನ್ಶೂರೆನ್ಸ್ ಮಂಜೂರು ಮಾಡಿಕೊಡಲು 3 ಸಾವಿರ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಸಹಕಾರ ಸಂಘಗಳ ಉಪಬಂಧಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಬಂಧನ ಮಾಡಿದ್ದಾರೆ. ಹಾವೇರಿಯ ದೇವಗಿರಿ ಗ್ರಾಮದ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಬಂಧನ ಮಾಡಿದ್ದಾರೆ. ಅಕ್ಕಮ್ಮ ಬಿದರೇರ್ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹದೇವ ಜೇಕಿನಕಟ್ಟಿ ಎಂಬುವರ ವಯೋ ನಿವೃತ್ತಿಯಾಗಿದ್ದು, ಗುಂಪು ವಿಮೆ ಮೊತ್ತ ಬಿಲ್ […]

Continue Reading

ಕಲಬುರಗಿ–ಬೆಂಗಳೂರು ಸ್ಟಾರ್‌ ಏರ್‌ ವಿಮಾನ ಸಂಚಾರ: ಸಮಯ ಬದಲಾವಣೆ

ಸುದ್ದಿ ಸಂಗ್ರಹ ಕಲಬುರಗಿಜೂನ್‌ 10ರಿಂದ ಆರಂಭವಾಗಲಿರುವ ಕಲಬುರಗಿ– ಬೆಂಗಳೂರು ಸ್ಟಾರ್‌ ಏರ್‌ ವಿಮಾನ ಸಂಚಾರದ ಸಮಯವನ್ನು ಸಂಜೆ ವೇಳೆಯಿಂದ ಬೆಳಗಿನ ವೇಳೆಗೆ ಬದಲಾವಣೆ ಮಾಡಲಾಗಿದೆ. ಸಮಯ ಬದಲಾವಣೆ ಕುರಿತು ಸ್ಟಾರ್ ಏರ್ ಸಂಸ್ಥೆಯವರು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಗೆ ಮಾಹಿತಿ ನೀಡಿರುವುದಾಗಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ್ ವಿ ಇಂಗಿನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ನಿತ್ಯ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ. ಬೆಳಿಗ್ಗೆ 8.10ಕ್ಕೆ […]

Continue Reading

ಮದುವೆ ಆಗ್ತಿನಿ ಅಂತ ನಂಬಿಸಿ ಯುವತಿಗೆ ವಂಚನೆ ಆರೋಪ: ಎಫ್‌ಐಆರ್‌ ಆದ್ರೂ ಪೊಲೀಸರು ಸೈಲೆಂಟ್

ಸುದ್ದಿ ಸಂಗ್ರಹ ದಾವಣಗೆರೆಪ್ರೀತಿ ಪ್ರೇಮದ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಯುವಕನೊಬ್ಬ ವಂಚಿಸಿದ ಪ್ರಕರಣ ಹರಿಹರದಲ್ಲಿ ನಡೆದಿದೆ. ಮಲೆಬೆನ್ನೂರು ಮೂಲದ ಮುಷ್ರಫ್ ಖಾನ್ ಎಂಬಾತನ ವಿರುದ್ಧ ದಾವಣಗೆರೆಯ ಯುವತಿ ವಂಚನೆ ಆರೋಪ ಮಾಡಿದ್ದಾಳೆ. ಮುಷ್ರಫ್ ಮದುವೆ ಆಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಈಗ ನಾಪತ್ತೆಯಾಗಿದ್ದಾನೆ. ಅಲ್ಲದೆ ಪ್ರಭಾವಿ ನಾಯಕರ ಸಂಬಂಧಿ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮದುವೆ ಆಗಲು 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನ್ಯಾಯಕ್ಕಾಗಿ ಯುವತಿ ಹೋರಾಟ ಮಾಡುತ್ತಿದ್ದಾಳೆ. ಯುವಕ ಹಾಗೂ ಆತನಿಗೆ ಸಾಥ್ […]

Continue Reading

ಹಂಪಿಯಲ್ಲಿ ಪ್ರಾಚೀನ ಕಾಲದ ಒಳಚರಂಡಿ ವ್ಯವಸ್ಥೆ, ಆಳ್ವಾರ್ ಪ್ರತಿಮೆ ಪತ್ತೆ ಹಚ್ಚಿದ ASI

ಸುದ್ದಿ ಸಂಗ್ರಹ ಹಂಪಿ/ಹೊಸಪೇಟೆಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI), ಹಂಪಿ ವೃತ್ತವು, ಪ್ರಾಚೀನ ಒಳಚರಂಡಿ ವ್ಯವಸ್ಥೆಗಳಲ್ಲಿ ಒಂದನ್ನು ಪತ್ತೆಹಚ್ಚಿದೆ. ಶುಕ್ರವಾರ ಹಂಪಿಯಲ್ಲಿರುವ ಪ್ರಸಿದ್ಧ ಹಜಾರ ರಾಮ ದೇವಾಲಯದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಉತ್ಖನನದ ಸಮಯದಲ್ಲಿ ಈ ಒಳಚರಂಡಿ ಪತ್ತೆಯಾಗಿದೆ. ಐತಿಹಾಸಿಕ ದೇವಾಲಯ ಸಂಕೀರ್ಣದಲ್ಲಿ ASI ತಂಡ, ನಡೆಸುತ್ತಿರುವ ಉತ್ಖನನವು ಇನ್ನೂ ಎರಡು ಆಳ್ವಾರ್ ಶಿಲ್ಪಗಳ ಆವಿಷ್ಕಾರಕ್ಕೂ ಕಾರಣವಾಗಿದ್ದು, ಇದು ಇತ್ತೀಚಿನ ವಾರಗಳಲ್ಲಿ ಈ ಸ್ಥಳದಿಂದ ವರದಿಯಾದ ಮಹತ್ವದ ಸಂಶೋಧನೆಗಳ ಸರಣಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮೊದಲು, ದೇವಾಲಯದ ಆವರಣದಲ್ಲಿ ವೈಜ್ಞಾನಿಕ […]

Continue Reading