ಜನರ ಸಂಕಟಕ್ಕೆ ಸ್ಪಂದಿಸಲು ಮುಖ್ಯಾಧಿಕಾರಿಗೆ ಬಿಜೆಪಿ ಆಗ್ರಹ

ಪಟ್ಟಣ

ವಾಡಿ: ಪಟ್ಟಣದ ಪುರಸಭೆ ಜನಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗುತ್ತಿದೆ, ಇದನ್ನು ಸರಿಪಡಿಸಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡರು ಆಗ್ರಹಿಸಿದರು.

ಅಭಿವೃದ್ಧಿ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಲ್ಲದ ಕಾರಣ ಕೋಟ್ಯಾಂತರ ರೂ ವಾಪಸ್ ಹೋಗಿದೆ ಅಂತಿರಾ, ಹೀಗಾದರೆ ಇಲ್ಲಿನ ಜನರ ಸಂಕಟಕ್ಕೆ ಪರಿಹಾರ ಯಾವಾಗ ಎಂದರು.

ಕುಡಿಯುವ ನೀರು 3-4 ದಿನಗಳಿಗೊಮ್ಮೆ ರಾಡಿ ನೀರು ಸರಬರಾಜು, ನೀರು ಸರಬರಾಜಾದರೆ ಪೈಪ್’ಗಳ ಸೋರಿಕೆ, ಅಕಾಲಿಕ ಮಳೆಯಿಂದ ಚರಂಡಿ ನೀರು ರಸ್ತೆ ಹಾಗೂ ಮನೆಯೊಳಗೆ, ಅಸಮರ್ಪಕ ಬಿದಿ ದೀಪಗಳು, ಹಂದಿ- ನಾಯಿಗಳ ಕಾಟದ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ. ಇದನ್ನೆಲ್ಲಾ ಸರಿದೂಗಿಸಲು ಇರುವ ಪುರಸಭೆಯಲ್ಲಿ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾರ್ವಜನಿಕ ಸವಲತ್ತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ನಾಲ್ಕ ಎಕರೆ ಜಮೀನು ಖರೀದಿಸಿ ಸುಮಾರು 8- 10 ವರ್ಷಗಳಾಯಿತು ಇನ್ನೂ ಕೂಡಾ ಮಾರುಕಟ್ಟೆ ಸ್ಥಾಪನೆಯಾಗಿಲ್ಲ, ದೊಡ್ಡ ನಾಮಫಲಕ ಹಾಕಿದ್ದಾರೆ, ಇದರಿಂದ ಸುತ್ತಲಿನ ಹತ್ತಾರು ಹಳ್ಳಿಯ ರೈತರಿಗೆ ಅನುಕೂಲವಾಗುತ್ತದೆ, ಇದರ ಬಗ್ಗೆ ಮಾಹಿತಿ ನೀಡಿ ಆದಷ್ಟು ಬೇಗ ಪ್ರಾರಂಭಿಸಿ. ಅಂಗವಿಕಲರಿಗಾಗಿ ತ್ರಿಚಕ್ರ ವಾಹನ, ಬಡ ಮಹಿಳೆಯರಿಗೆ ಬಟ್ಟೆ ಹೊಲಿಗೆ ಯಂತ್ರ, ಕಸದ ಬುಟ್ಟಿ ಖರೀದಿಯಲ್ಲಿ ಮತ್ತು ಡಿಸೇಲ್ ಬಳಕೆಯಲ್ಲಿನ ಅವ್ಯವಹಾರದ ಆರೋಪ ಇರುವುದರಿಂದ ಅದರ ಮಾಹಿತಿ ಕೇಳಿದರು, ಆದಷ್ಟೂ ಬೇಗ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ, ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಮಾಜಿ ಸದಸ್ಯರಾದ ಕಿಶನ್ ಜಾಧವ, ಅಂಬದಾಸ ಜಾಧವ, ಹರಿ ಗಲಾಂಡೆ, ಮುಖಂಡ ಮಲ್ಲಿಕಾರ್ಜುನ ಸಾತಖೇಡ ಇದ್ದರು.

Leave a Reply

Your email address will not be published. Required fields are marked *