ಕಾಳಗಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪ್ರವೀಣಕುಮಾರ ಜೆ.ಎಚ್ 2 ಲಕ್ಷ ರೂ. ಚೆಕ್ ವಿತರಿಸಿದರು.
ತಾಲೂಕಿನ ತೆಂಗಳಿ ಗ್ರಾಮದ ಅಣ್ಣೆಮ್ಮ ಅರುಣಕುಮಾರ್ ಕಡ್ಲಿ ಅಸುನಿಗಿದ ಕಾರಣ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ 2 ಲಕ್ಷ ರೂ. ಚೆಕ್ ವಿತರಿಸಲಾಯಿತು.
ಬ್ಯಾಂಕ ಖಾತೆ ಹೊಂದಿರುವ ಗ್ರಾಹಕರು ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂಜೆಜೆಬಿವೈ 436 ರೂ. ಮತ್ತು ಪಿಎಂಎಸ್’ಬಿವೈ 20 ರೂ. ವರ್ಷಕ್ಕೆ ಒಟ್ಟು 456 ರೂ ಪಾವತಿಸಿ ನೋಂದಾಯಿಸಿಕೊಳ್ಳಿರಿ.
- ಪ್ರವೀಣ್ ಕುಮಾರ್
ಶಾಖಾ ವ್ಯವಸ್ಥಾಪಕರು
ಕರ್ನಾಟಕ ಗ್ರಾಮೀಣ ಬ್ಯಾಂಕ್ ಟೆಂಗಳಿ
ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸಂಗಣ್ಣ ಪಾಟೀಲ, ಅಕೌಂಟೆಂಟ್ ಆನಂದಕುಮಾರ, ಕ್ಯಾಷಿಯರ್ ಜಯಪಾಲ್, ಕ್ಯಾಶ್ವಾಲ್ ವರ್ಕರ್ ಬಸವರಾಜ ಭೈರಿ, ಬಸವರಾಜ ಕಡ್ಲಿ ಇದ್ದರು.