ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್​ ರೈತ

ಜಿಲ್ಲೆ

ಬೀದರ್​: ಕೃಷಿಯಲ್ಲಿ ದುಡಿಮೆ ಹೆಚ್ಚು, ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಖರ್ಚು ಹೆಚ್ಚು ಎಂಬುದು ಕೆಳಿದ್ದೆವೆ. ಆದರೆ ಬೀದರ್​ ರೈತ ಕೃಷಿಯಿಂದಲೆ ಐದು ತಿಂಗಳಲ್ಲಿ ಈರುಳ್ಳಿ ಬೀಜ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಈ ಪ್ರಗತಿಪರ ರೈತನ ಕೃಷಿಯ ಚಾಣಾಕ್ಷತನಕ್ಕೆ ಅಧಿಕಾರಿಗಳು ಮತ್ತು ರೈತರು ಫಿದಾ ಆಗಿದ್ದಾರೆ. ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ್ ಗ್ರಾಮದ ರೈತ ದೀಲಿಪಕುಮಾರ ನೇಮಿನಾಥ ಅವರು ತಮ್ಮ 40 ಎಕರೆ ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದು, 5 ತಿಂಗಳಿಗೆ ಒಂದು ಕೋಟಿಗೂ ಅಧಿಕ ಲಾಭ ಗಳಿಸಿದ್ದಾರೆ. ಕರ್ನಾಟಕದಲ್ಲಿ 40 ಎಕರೆ ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡುವ ಏಕೈಕ ರೈತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರತಿ ವರ್ಷ ಈರುಳ್ಳಿ ಬೀಜ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಬೀಜೋತ್ಪಾದನೆಯಿಂದಲೇ ಹೆಚ್ಚಿನ ಲಾಭ ಉಂಟಾಗುತ್ತಿದೆ. ಇವರ ಈರುಳ್ಳಿ ಬೀಜ ಗುಣಮಟ್ಟದಿಂದ ಕೂಡಿದ್ದು, ರೈತರು ಇವರ ಬಳಿ ಬೀಜ ಖರೀದಿಸಿ, ಈರುಳ್ಳಿ ನಾಟಿ ಮಾಡಿದರೆ ಹೆಚ್ಚಿನ ಇಳುವರಿ ಬರುತ್ತದೆ ಎಂದು ರೈತರು ನಂಬಿಕೊಂಡಿದ್ದಾರೆ. ಇವರ ಬಳಿ ಬಂದು ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ.

ಒಂದು ಕೆಜಿ ಈರುಳ್ಳಿ ಬೀಜ ಪ್ಯಾಕ್ ಮಾಡಿ ರಾಜ್ಯದ ಮೂಲೆ ಮೂಲೆಗೂ ಮಾರಾಟ ಮಾಡುತ್ತಾರೆ. ಪಕ್ಕದ ಮಹಾರಾಷ್ಟ್ರ, ತೆಲಂಗಾಣಕ್ಕೂ ಬೀಜ ಮಾರಾಟ ಮಾಡುತ್ತಿದ್ದು, ಕೆಜಿಗೆ ಒಂದು ಸಾವಿರ ರೂ’ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮಗೆ ಲಾಭ ಜಾಸ್ತಿಯಿದೆ ಎಂದು ರೈತ ನೇಮಿನಾಥ್ ಹೇಳುತ್ತಾರೆ.

ಕಿಂಟಾಲ್​ಗೆ 50 ಸಾವಿರ ರೂ ಲಾಭ

ರೈತ ನೇಮಿನಾಥ್ ಅವರು 15 ವರ್ಷದ ಹಿಂದೆ ತಮ್ಮ ಹೊಲದಲ್ಲಿ ಕಬ್ಬು, ಸೋಯಾ, ಉದ್ದು ಹೆಸರು ಬೆಳೆಗೆ ಮಾತ್ರ ಸಿಮೀತವಾಗಿದ್ದರು. ಆದರೆ ಅದರಲ್ಲಿ ಅಷ್ಟು ಲಾಭವಾಗಿಲ್ಲ. ಕಬ್ಬು ಬೆಳೆಯಿಂದಲೂ ಇವರಿಗೆ ಲಾಭ ಅಷ್ಟಕಷ್ಟೆ. ಹೀಗಾಗಿ ಈ ಬೆಳೆಗಳಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಏನಾದರೂ ಹೊಸದನ್ನು ಮಾಡಬೇಕು ಅಂದುಕೊಂಡು ಈರುಳ್ಳಿ ಬೀಜೋತ್ಪಾದನೆ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿ, ಒಂದು ವರ್ಷ ಹತ್ತು ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಿ, ಕಿಂಟಾಲ್​ಗೆ 50 ಸಾವಿರ ರೂ. ಮಾರಾಟ ಮಾಡಿದ್ದಾರೆ. ಅದರಲ್ಲಿ ಭರ್ಜರಿ ಲಾಭ ಕಂಡುಕೊಂಡಿದ್ದಾರೆ.

ರೈತ ದೀಲಿಪಕುಮಾರ ನೇಮಿನಾಥ್

ಉತ್ತಮ ಗುಣಮಟ್ಟದ ಬೀಜ ನೋಡಿದ ರೈತರು ಇವರಿಂದ ಹೆಚ್ಚು ಹೆಚ್ಚಾಗಿ ಈರುಳ್ಳಿ ಬೀಜವನ್ನು ಖರೀದಿಸಲು ಶುರುಮಾಡಿದರು. ಹತ್ತು ಎಕರೆಯಿಂದ ಆರಂಭಿಸಿ ಈಗ 40 ಎಕರೆ ಈರುಳ್ಳಿ ಬೀಜ ಬೆಳೆಸುತ್ತಿದ್ದಾರೆ. ವರ್ಷಕ್ಕೆ ಕನಿಷ್ಟವೆಂದರೂ ಇನ್ನೂರು ಕ್ಷಿಂಟಾಲ್​ವರೆಗೆ ಈರುಳ್ಳಿ ಬೀಜ ಮಾರಾಟ ಮಾಡುತ್ತಿದ್ದಾರೆ.

ಯಾವುದೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ತಾವೆ ಬೆಳೆಸಿದ ಈರುಳ್ಳಿ ಬೀಜವನ್ನು ತಾವೆ ಮಾರಾಟ ಮಾಡುವುದರಿಂದಾಗಿ ಮಾರುಕಟ್ಟೆಯಲ್ಲಿ ದರ ಬದಲಾವಣೆಯಾದರೂ ಕೂಡ ಇವರಿಗೆ ಏನೂ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಈರುಳ್ಳಿ ಬೀಜದಿಂದ ರೈತ ನೇಮಿನಾಥ್ ಕೋಟ್ಯಾಧಿಪತಿಯಾಗಿದ್ದು, 40 ಎಕರೆಯಲ್ಲಿ ಎಲ್ಲಾ ಖರ್ಚು ತೆಗೆದರು ಇವರಿಗೆ ಐದು ತಿಂಗಳಲ್ಲಿ 60 ರಿಂದ 70 ಲಕ್ಷ ರೂ. ಲಾಭವಾಗುತ್ತಿದೆ ಎಂದು ರೈತ ಹೇಳಿದ್ದಾರೆ.

ಒಟ್ಟಿನಲ್ಲಿ ರೈತ ನೇಮಿನಾಥ್ ಈರುಳ್ಳಿ ಬೀಜೋತ್ಪಾದನೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲಾ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸುವ ತೋಟಗಾರಿಕೆ ಬೆಳೆ ಬೆಳೆದು ಎಲ್ಲಾ ರೈತರು ಯಶಸ್ವಿಯಾಗಬೇಕು.

Leave a Reply

Your email address will not be published. Required fields are marked *