ಕಲಬುರಗಿ: ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿ ಕ್ರಾಸ್’ನಲ್ಲಿ ‘ಸಿದ್ದಲಿಂಗೇಶ್ವರ ಗೆಳೆಯರ ಬಳಗ’ದ ವತಿಯಿಂದ ಬುಧವಾರ ಅನ್ನ ದಾಸೋಹ ಜರುಗಿತು.
ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ದಾಸೋಹ ಸಮಿತಿಯವರಿಗೆ ಗೌರವಿಸಲಾಯಿತು, ಅವರ ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹಿಸಲಾಯಿತು.
ಸಿದ್ಧಲಿಂಗೇಶ್ವರ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ.
ಸಮಾಜ ಸೇವಕರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್ ಬಿರಾದಾರ, ದಾಸೋಹ ಸಮಿತಿಯ ಜಗನ್ನಾಥ ಕೋರೆ, ಶಿವು ಸದಾಲಪುರ, ಅರ್ಪಿತ ಹತಗುಂದಿ, ಸಂಗಮೇಶ ಬಿರಾದಾರ, ಜಗು ಬಬಲಾದ, ಪ್ರತಾಪ್, ಶರಣು, ರಾಹುಲ ಸಿಂಗ್, ಭೀಮರಾವ, ಸತೀಶ್, ಸಿದ್ದರಾಮ ಸೇರಿದಂತೆ ಅನೇಕರು ಇದ್ದರು.