ಕಲಬುರಗಿ: ರಾಜೇಶ್ ನಾಗೂರೆ ಅವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

ಸುದ್ದಿ ಸಂಗ್ರಹ ಕಲಬುರಗಿನಗರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ರಾಜೇಶ್ ನಾಗೂರೆ ಅವರಿಗೆ 2025ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅನಿತಾ ಕೌಲ್ ಸ್ಮರಣಾರ್ಥ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌ ಮುಕುಂದರಾಜ್‌ , ಬೆಂಗಳೂರಿನ ಬಿಸಿನೆಸ್‌ ಕಾರಿಡಾರ್‌ […]

Continue Reading

ಸೇವಾಲಾಲರ ವಿಚಾರಧಾರೆ ತಿಳಿಯಿರಿ: ಬಸವರಾಜ ಮತ್ತಿಮೂಡ್

ಸುದ್ದಿ ಸಂಗ್ರಹ ಶಹಾಬಾದಮಹಾನ್ ಮಾನವತಾವಾದಿ ಸಂತ ಸೇವಾಲಾಲ್ ಮಹಾರಾಜರ ತತ್ವ ಆದರ್ಶಗಳು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು. ತಾಲೂಕಿನ ಗ್ರಾಮೀಣ ಬಂಜಾರ ಸೇವಾ ಸಂಘ ಹಾಗೂ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೇವಾಲಾಲ್ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ ಸೇವಾಲಾಲ್ ಮಹಾರಾಜರು ಸರ್ವರು ಶಾಂತಿಯಿಂದ ಸಹಭಾಳ್ವೆಯೊಂದಿಗೆ, ಸಹೋದರತೆ ಭಾವದಿಂದ ಸಮಾಜದಲ್ಲಿ ಬಾಳಬೇಕು, ಕಾಯಕ ಜೀವಿಯಾಗಿ ಬದುಕಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮಾನವಿಯಗುಣ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮಾನವ […]

Continue Reading

ನುಡಿದಂತೆ ನಡೆದ ಶಾಸಕ ಮತ್ತಿಮೂಡ: ರಾವೂರ ಶ್ರೀ

ಸುದ್ದಿ ಸಂಗ್ರಹ ಶಹಾಬಾದ್ಜನರಿಗೆ ಆಶ್ವಾಸನೆ ನೀಡಿ ಮರೆತು ಹೋಗುವ ಜನಪ್ರತಿನಿಧಿಗಳ ಮಧ್ಯೆ, ಪಕ್ಷ ಭೇದ ಮರೆತು ಜನಪರ ಕೆಲಸ ಮಾಡುತ್ತಿರುವ ಮತ್ತು ನುಡಿದಂತೆ ನಡೆಯುತ್ತಿರುವ ಶಾಸಕ ಬಸವರಾಜ ಮತ್ತಿಮೂಡ ಅಪರೂಪದ ಶಾಸಕರು ಎಂದು ರಾವೂರಿನ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಗೋಳಾ(ಕೆ) ಗ್ರಾಮದಲ್ಲಿ ಸಮುದಾಯ ಭವನ ಹಾಗೂ ರಸ್ತೆ ಕಾಮಗಾರಿ ಅಡಿಗಲ್ಲು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ […]

Continue Reading

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ನೆನಪಿಸುವ ಕೃತಿ ಲೋಕಾರ್ಪಣೆ

ಸುದ್ದಿ ಸಂಗ್ರಹ ಶಹಾಬಾದ್ದಶಕಗಳ ಹಿಂದೆ ಈ ನೆಲದಲ್ಲಿ ನಡೆದಾಡಿದ ಸಿದ್ದೇಶ್ವರ ಸ್ವಾಮೀಜಿ ಕುರಿತು ಮತ್ತು ಬಸವಣ್ಣನಂತಹ ಮಹಾ ಮಾನವತಾವಾದಿಯ ಕುರಿತು ರಚಿಸಿದ ಎರಡು ಕೃತಿಗಳು ಲೋಕಾರ್ಪಣೆ ಆಗುತ್ತಿರುವುದು ಸಂತಸದ ಸಂಗತಿ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ನೃಪತುಂಗ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಡಲಗಿರಿ ಪ್ರಸನ್ನ ಅವರ ‘ಎಣ್ಣೆ ಬತ್ತಿಯ ಸೊಡರು’ ಮತ್ತು ‘ಮಹಾಮನೆ’ ಎರಡು ಕೃತಿಗಳು ಲೋಕಾರ್ಪಣೆ ಮಾಡಿ […]

Continue Reading

ಕಲಬುರಗಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿ ಸಂಗ್ರಹ ಕಲಬುರಗಿರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ನೌಕರರು ನಾಮನಿರ್ದೇಶನ ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಸಲು ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 2026ನೇ ಸಾಲಿನಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರಿ ನೌಕರರು ತಮ್ಮ ನಾಮನಿರ್ದೇಶನ ಅರ್ಜಿ ಸಲ್ಲಿಸಬಯಸುವರು https://dparar.karnataka.gov.in ಅಥವಾhttps://sarvothamaawards.karnataka.gov.in ಮೂಲಕ ಫೆ‌.25ರ ರೊಳಗಾಗಿ […]

Continue Reading

ಶಹಾಬಾದ್: ಸರ್ವಜ್ಞ ಜಯಂತಿ ಆಚರಣೆ

ಸುದ್ದಿ ಸಂಗ್ರಹ ಶಹಾಬಾದ್ನಗರದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಸರಳವಾಗಿ ಆಚರಿಸಲಾಯಿತು. ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಲಗೊಳಕರ ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವದಾಸ ಜಾಧವ, ಕನಕಪ್ಪ ದಂಡಗುಲಕರ, ಭೀಮಾಶಂಕರ ಕುಂಬಾರ, ಸದಾನಂದ ಕುಂಬಾರ, ಮಹದೇವ ಗೊಬ್ಬೂರಕರ, ರಾಜು ಕುಂಬಾರ, ನಾರಾಯಣ ಕಂದಕೂರ, ಅರುಣ ಪಟ್ಟಣಕರ, ಅನೀಲ ಬೊರಗಾಂವಕರ, ಶಿವಕುಮಾರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ಭೀಮಯ್ಯ ಗುತ್ತೆದಾರ, ರೇವಣಸಿದ್ದ ಮತ್ತಿಮಡು, […]

Continue Reading

ದಸಂಸ: ತಾಲೂಕು ಸಂಚಾಲಕರಾಗಿ ಸುಭಾಷ ಸಾಕ್ರೆ ನೇಮಕ

ಸುದ್ದಿ ಸಂಗ್ರಹ ಶಹಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಶಹಾಬಾದ ತಾಲೂಕು ಸಂಚಾಲಕರಾಗಿ ಸುಭಾಷ ಸಾಕ್ರೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಸಂ. ಸಂಚಾಲಕ ಸತೀಶ ಕೋಬಾಳಕರ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕದಸಂಸ (ಅಂಬೇಡ್ಕರವಾದ) ತಾಲೂಕು ಸಮಿತಿ ಬಲಗೊಳಿಸುವ ನಿಟ್ಟಿನಲ್ಲಿ ಪದಾದಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು. ತಾಲೂಕು ಸಂಘಟನಾ ಸಂಚಾಲಕರಾಗಿ ಮನೋಹರ ಕೋಳೂರ, ಶಿವಶಾಲ ಪಟ್ಟಣಕರ್, ಹುಲಿಗೇಶ ನಾಟೇಕರ, ರಾಣೋಜಿ ಹಾದಿಮನಿ ಶಂಕರವಾಡಿ, ನಾಗರಾಜ ಕರದಳ್ಳಿ ಅಲ್ಲಿದಾಳ, ತುಳಜಾರಾಮ ಬೋಯಿ, ಮಲ್ಲಪ್ಪ […]

Continue Reading

ಜಾತಿ, ಮತಗಳ ಮೇಲೆ ಮೇಲು-ಕೀಳು ಸಲ್ಲದು

ಸುದ್ದಿ ಸಂಗ್ರಹ ಕಲಬುರಗಿ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಲಿಂಗ ಸೇರಿದಂತೆ ಮುಂತಾದ ಅಂಶಗಳ ಮೇಲೆ ಯಾವುದೆ ರೀತಿಯ ತಾರತಮ್ಯ ಮಾಡದೆ ಎಲ್ಲರು ಸರಿಸಮಾನರೆಂದು ಭಾವಿಸಬೇಕು. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ದೊಡ್ಡವನಾಗಲು ಸಾಧ್ಯವಿದೆ ಎಂದು ಸಮಾಜ ಸೇವಕ ಸಿದ್ದರಾಮ ತಳವಾರ ಹೇಳಿದರು. ನಗರದ ಗಾಜಿಪೂರ ಬಡಾವಣೆಯ ಶ್ರೀನಿವಾಸ ಸಭಾಂಗಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ಯಲ್ಲಿ ಮಾತನಾಡಿದರು. ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ದೇಶದ ಸಂವಿಧಾನ, ಕಾನೂನಿನ […]

Continue Reading

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ – ಸರ್ಕಾರದ ಹೇಡಿತನಕ್ಕೆ ಸಾಕ್ಷಿ: ಜೆಡಿಎಸ್

ಸುದ್ದಿ ಸಂಗ್ರಹ ಬೆಂಗಳೂರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಮಾಡಿರುವ ಸರ್ಕಾರದ ನಡೆಯನ್ನು ಜೆಡಿಎಸ್ ಖಂಡಿಸಿದೆ. ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಅಂತ ವಾಗ್ದಾಳಿ ನಡೆಸಿದೆ. ಎಕ್ಸ್‌ನಲ್ಲಿ ಏನಿದೆ ?ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೆ ? ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ. ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ ? ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ […]

Continue Reading

ಶಿವ ಧ್ಯಾನದಿಂದ ಶಾಂತಿ, ನೆಮ್ಮದಿ

ಸುದ್ದಿ ಸಂಗ್ರಹ ಶಹಾಬಾದ್ಶಿವನ ಧ್ಯಾನದದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಈಶ್ವರಿ ವಿವಿಯ ರಾಜಯೋಗಿನಿ ಜಗದೇವಿ ಅಕ್ಕ ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಸೋಮವಾರ ಶಿವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶ ಹಬ್ಬಗಳ ನಾಡು, ಧರ್ಮಗಳ ಬೀಡಾಗಿದೆ. ದೇವರ ಧ್ಯಾನದಿಂದ ಬದುಕು ಉಜ್ವಲವಾಗುತ್ತದೆ. ಶಿವರಾತ್ರಿ ಉಪವಾಸ, ಜಾಗರಣೆ ಬದಲು ಅರಿಷಡ್ವರ್ಗಗಳಿಂದ ದೂರವಾಗುವ ಸಂಕಲ್ಪ ಮಾಡಬೇಕು, ಜಗತ್ತಿಗೆ ಭಗವಂತ ಒಬ್ಬನೆ ಆಗಿದದು ಆತನನ್ನು ಮನಸ್ಸು ಮತ್ತು […]

Continue Reading