ದ್ವೇಷ ಭಾಷಣ ಮುಸೂದೆ ಅಂಗೀಕರಿಸಿರುವದಕ್ಕೆ ಡಾ.ರಶೀದ್ ಸ್ವಾಗತ
ಸುದ್ದಿ ಸಂಗ್ರಹ ಶಹಾಬಾದ
ವಿಧಾನಸಭೆಯಲ್ಲಿ ದ್ವೇಷ ಭಾಷಣ ತಡೆಗೆ ಸಂಬಂಧಿಸಿದ ಮಸೂದೆ ಅಂಗೀಕರಿಸಿರುವುದು ಸಂವಿಧಾನ ಮೌಲ್ಯಗಳು, ಸಾಮಾಜಿಕ ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯತ್ತ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಧೈರ್ಯಶಾಲಿ, ಐತಿಹಾಸಿಕ ಮತ್ತು ದೃಢ ನಿರ್ಧಾರದ ಹೆಜ್ಜೆಯಾಗಿದೆ. ಈ ಪ್ರಗತಿಪರ ಕಾನೂನು, ದೇಶದಲ್ಲಿ ಏಕತೆ, ಶಾಂತಿ ಮತ್ತು ಸಮವೇಶಿತ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಚಲ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ಶಹಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ ರಶೀದ್ ಮಸೂದ ಸ್ವಾಗತಿಸಿರುವದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ದೃಢ ಮತ್ತು ಜನಪರ ನಾಯಕತ್ವಕ್ಕೆ ಹಾಗೂ ಎಲ್ಲಾ ಸಚಿವರು ಮತ್ತು ಶಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಮಾಜವನ್ನು ವಿಭಜಿಸುವ ದ್ವೇಷ ಭಾಷಣದ ಅಪಾಯವನ್ನು ಗಂಭೀರವಾಗಿ ಅರ್ಥಮಾಡಿಕೊಂಡು, ರಾಜ್ಯ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಮಸೂದೆಯನ್ನು ಅಂಗೀಕರಿಸಿರುವುದು ಶ್ಲಾಘನೀಯ ಎಂದರು.
ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಗತಿಪರ ಆಡಳಿತ, ಸಾಮಾಜಿಕ ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ಪರವಾಗಿ ನಿರಂತರವಾಗಿ ನಿಂತಿರುವ ನಾಯಕರಾಗಿದ್ದಾರೆ. ಅವರ ಕೊಡುಗೆ ಕರ್ನಾಟಕದ ಆಡಳಿತಕ್ಕೆ ಹೊಸ ದಿಕ್ಕು ನೀಡಿದೆ ಎಂದರು.
ಈ ಐತಿಹಾಸಿಕ ಕಾನೂನು ರಾಜ್ಯದಲ್ಲಿ ಸೌಹಾರ್ದತೆ, ಸಾಮಾಜಿಕ ಏಕತೆ ಮತ್ತು ಪ್ರಜಾಸತ್ತಾತ್ಮಕ ಸಂವಾದ ಬಲಪಡಿಸುವುದರ ಜೊತೆಗೆ ಕರ್ನಾಟಕವನ್ನು ಸಮಾವೇಶಿತ ಮತ್ತು ಸ್ಥಿರ ಅಭಿವೃದ್ಧಿಯತ್ತ ಮತ್ತಷ್ಟು ಮುನ್ನಡೆಸಲಿದೆ ಎಂಬ ದೃಢ ವಿಶ್ವಾಸವಿದೆ ಎಂದರು.