ಸುದ್ದಿ ಸಂಗ್ರಹ ಕಲಬುರಗಿ
ಪತ್ನಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಪತ್ನಿ ಸನಿಕಾಳ ಒತ್ತಡ, ಬ್ಲ್ಯಾಕ್ಮೇಲ್ಗೆ ಮಣಿದು ಮದುವೆಯಾದೆ. ಮದುವೆ ಬಳಿಕ ತಂದೆ–ತಾಯಿಯಿಂದ ಪ್ರತ್ಯೇಕವಾಗಿ ವಾಸಿಸಲು ಒತ್ತಡ ಹೇರಿದಳು. ಅದಕ್ಕೆ ನಿರಾಕರಿಸಿದಾಗ ಆತ್ಮಹತ್ಯೆಯ ಬೆದರಿಕೆ ಹಾಕುತ್ತಿದ್ದಳು. 2026ರ ಜೂನ್ 9ರಂದು ಡಿಟರ್ಜೆಂಟ್ ಸೇವಿಸಿದ್ದರು. ಬಳಿಕ ಎರಡು ಕುಟುಂಬಗಳು ಪ್ರತ್ಯೇಕವಾಗಿ ನೆಲೆಸುವ ಒಪ್ಪಂದವಾದರೂ, ಅವಳ ಬೆದರಿಕೆ, ಬ್ಲ್ಯಾಕ್ಮೇಲ್ ಮುಂದುವರಿದಿತ್ತು. ಜೂನ್ 28ರಂದು ಏಕಾಏಕಿ ಬಂದು ಕೈಯಲ್ಲಿದ್ದ ಬಳೆ ಒಡೆದು ಅದರಿಂದ ಕುತ್ತಿಗೆ, ಕೈಗೆ ಹೊಡೆದು ಗಾಯಗೊಳಿಸಿದ್ದಾಳೆ. ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ನಗರದ ನ್ಯೂ ರಾಘವೇಂದ್ರ ಕಾಲೊನಿಯ ನಿವಾಸಿ, ಸಾಫ್ಟವೇರ್ ಎಂಜಿನಿಯರ್ ಅಕ್ಷಯ್ ಉಬಾಳೆ ದೂರಿನಲ್ಲಿ ತಿಳಿಸಿದ್ದಾರೆ.
ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.