ವಾಡಿ: ಸಮೀಪದ ಕಮರವಾಡಿ ಗ್ರಾಮದ ನಿವಾಸಿ, ಪ್ರಾಥಮಿಕ ಕೃಷ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಮಲ್ಲಿನಾಥ ಇಂದೂರ (58) ಶುಕ್ರವಾರ ನಿಧನರಾದರು.
ಮೃತರ ಪತಿ ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಮಲ್ಲಿನಾಥ ಇಂದೂರ ಮತ್ತು ಮೂವರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶನಿವಾರ ಮಧ್ಯಾಹ್ನ 4 ಗಂಟೆಗೆ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಕ್ರಿಯೆ ನೆರವೆರಲಿದೆ.