ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾ ದಾಳಿ: ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು, ಆಸ್ತಿ ಪತ್ತೆ

ರಾಜ್ಯ

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲಿನ ದಾಳಿಯನ್ನು ಲೋಕಾಯುಕ್ತ ಮುಕ್ತಾಯಗೊಳಿಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು, ಆಸ್ತಿ ಪತ್ತೆಯಾಗಿದೆ. ಬೆಂಗಳೂರು ಸೇರಿ 48 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಆ ಮೂಲಕ ಒಟ್ಟು 12 ಅಧಿಕಾರಿಗಳಿಗೆ ಶಾಕ್‌ ನೀಡಿದೆ.

  1. ಮಂಜುನಾಥ. ಜಿ ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು
    — ಮಂಜುನಾಥ್ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ರೇಡ್
    – ದಾಳಿ ವೇಳೆ 3,24,13,240 ರೂ. ಸ್ಥಿರ ಹಾಗೂ ಚರ ಆಸ್ತಿ ಪತ್ತೆ
    – 1 ಸೈಟ್, 1 ವಾಸದ ಮನೆ, 1 ಪ್ಲಾಟ್ ಸೇರಿ 1.85 ಕೋಟಿ ಸ್ಥಿರ ಆಸ್ತಿ ಪತ್ತೆ
    – 10 ಲಕ್ಷ ನಗದು, ವಾಹನ, ಗೃಹೋಪಯೋಗಿ ವಸ್ತು ಸೇರಿದಂತೆ 1.39 ಕೋಟಿ ಚರ ಆಸ್ತಿ ಪತ್ತೆ.
  2. ವಿ.ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು
    – ಸುಮಂಗಳಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
    – ಸುಮಂಗಳ ಬಳಿ 7,32,50,000 ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
    – 4 ಸೈಟ್, 5 ಮನೆಗಳು, 19 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು 5,08,42,000 ರೂ. ಮೌಲ್ಯದ ಸ್ಥಿರ ಆಸ್ತಿ ಪತ್ತೆ
    – 1 ಕೋಟಿ ಮೌಲ್ಯದ ಚಿನ್ನಾಭರಣಗಳು, ವಾಹನ ಸೇರಿದಂತೆ ಒಟ್ಟು 2,24,08,000 ರೂ. ಚರ ಆಸ್ತಿ ಪತ್ತೆ.
  3. ಎನ್.ಕೆ ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ ಬೆಂಗಳೂರು
    – ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಗಂಗಮರಿಗೌಡ ಬಳಿ 4,66,55,512 ರೂ. ಮೌಲ್ಯದ ಆಸ್ತಿ ಪತ್ತೆ
    – 2 ನಿವೇಶನಗಳು, 2 ಮನೆ, 2 ಎಕರೆ ಕೃಷಿ ಜಮೀನು ಸೇರಿ 3.58 ಕೋಟಿ ಸ್ಥಿರ ಆಸ್ತಿ ಪತ್ತೆ
    – 1,08,40,000 ರೂ. ಮೌಲ್ಯದ ಚರ ಆಸ್ತಿ ಪತ್ತೆ
  4. ಎನ್ ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ
    – ಚಂದ್ರಶೇಖರ್’ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಲೋಕಾಯುಕ್ತ ರೇಡ್
    – ದಾಳಿ ವೇಳೆ 5,14,15,742 ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
    – 4.02 ಕೋಟಿ ಮೌಲ್ಯದ ಸ್ಥಿರ ಆಸ್ತಿಯ ಪತ್ತೆ
    – 1,12,15,742 ರೂ. ಮೌಲ್ಯದ ಚರ ಆಸ್ತಿ ಪತ್ತೆ
  5. ಜಗದೀಶ್ ನಾಯ್ಕ. ಕೆ.ಹೆಚ್ ಸಹಾಯಕ ಅಭಿಯಂತರರು. ಕೆ.ಆರ್.ಐ.ಡಿ.ಎಲ್. ದಾವಣಗೆರೆ
    – ಜಗದೀಶ್‌ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ರೇಡ್
    – ಚರ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2,04,54,125 ರೂ.
    – ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,55,71,500 ರೂ.
    – ಚರ ಆಸ್ತಿಯ ಒಟ್ಟು ಮೌಲ್ಯ 48,82,625 ರೂ.
  6. ಬಿ.ಎಸ್ ನಡುವಿನ ಮನೆ, ಕಿರಿಯ ಸಹಾಯಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದಾವಣಗೆರೆ
    – ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಮಾಡಿದ್ದ ಲೋಕಾಯುಕ್ತ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2,30,54,684 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,70,79,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 59,75,684 ರೂ.
  7. ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲೂಕು ಪಂಚಾಯಿತಿ, ಹಾವೇರಿ
    – ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ.
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ 1,67,18,729 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 65,07,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,02,11,729 ರೂ.
  8. ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕರು, ರಾಣಿಬೆನ್ನೂರು ತಾಲ್ಲೂಕು, ಹಾವೇರಿ
    – ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ- 2,25,96,462 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,26,06,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 99,90,462 ರೂ.
  9. ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್, ಬೀದರ್ ಜಿಲ್ಲೆ
    – ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಒಟ್ಟು ಮೌಲ್ಯ 3,39,35,500 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,82,87,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,56,48,500 ರೂ.
  10. ಲಕ್ಷ್ಮಿನಾರಾಯಣ.ಪಿ. ನಾಯಕ್, ಆರ್.ಟಿ.ಓ ಉಡುಪಿ
    – ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಒಟ್ಟು ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 2,21,14,234 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 47,50,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,73,64,234 ರೂ.
  11. ಚೇತನ್, ಕಿರಿಯ ಅಭಿಯಂತರರು ಕೆಬಿಜೆಎನ್’ಎಲ್, ಎಆರ್’ಬಿಸಿ ವಿಭಾಗ-2, ಕಮಟಗಿ ಬಾಗಲಕೋಟೆ
    – ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,67,28,741 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,20,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 47,28,774 ರೂ.
  12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಇಲಾಖೆ, ಹಾಸನ
    – ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಮೌಲ್ಯ 2,17,47,763 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,12,53,425 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,04,94,338 ರೂ

Leave a Reply

Your email address will not be published. Required fields are marked *