ಕಲಬುರಗಿ: ಸಮಾಜಮುಖಿ ವೈದ್ಯ ಡಾ. ಎಸ್.ಎಸ್ ಗುಬ್ಬಿಯವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾ. ಅನುಪಮಾ ನಿರಂಜನ ವೈದ್ಯ ಸಾಹಿತ್ಯ ಪ್ರಶಸ್ತಿ ದೊರೆತಿರುವ ಪ್ರಯುಕ್ತ ಡಾ.ಎಸ್.ಎಸ್ ಗುಬ್ಬಿ ಅಭಿನಂದನಾ ಸಮಿತಿಯು ನಗರದ ಜಯನಗರದ ಅನುಭವ ಮಂಟಪದಲ್ಲಿ ರವಿವಾರ ಏರ್ಪಡಸಿದ್ದ ಅಭಿನಂದನಾ ಹಾಗೂ ಹೃದಯವಂತ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭಿನಂದಿಸಲಾಯಿತು.
ಬಳಗದ ಗೌರವ ಸಲಹೆಗಾರ ಡಾ.ವಾಸುದೇವ ಸೇಡಂ ಎಚ್, ಅಧ್ಯಕ್ಷ ಎಚ್.ಬಿ ಪಾಟೀಲ, ಸದಸ್ಯರಾದ ಡಾ.ಸಂಗಮೇಶ ಹಿರೇಮಠ, ವಿನೋದಕುಮಾರ ಜನವರಿ, ರಾಜಗೋಪಾಲ ಭಂಡಾರಿ, ಶಾಂತಲಿಂಗ ಪಾಟೀಲ ಸೇರಿದಂತೆ ಅನೇಕರು ಇದ್ದರು.