151 ಕೋಟಿ ರೂ. ದೇಣಿಗೆ ನೀಡಿದ ಮುಖೇಶ್ ಅಂಬಾನಿ: ಇತಿಹಾಸದಲ್ಲೇ ಅತಿ ದೊಡ್ಡ ದೇಣಿಗೆ

ಸುದ್ದಿ ಸಂಗ್ರಹ

ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಏನೇ ಮಾಡಿದರೂ ಅದು ವಿಶೇಷ. ಸಣ್ಣ ವ್ಯವಹಾರದಿಂದ ಪ್ರಾರಂಭಿಸಿದ ಅಂಬಾನಿ, ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಅನೇಕ ಜನರಿಗೆ ದೇಣಿಗೆ ನೀಡಿದ್ದಾರೆ. ಈಗ ಅವರು ಇತಿಹಾಸದಲ್ಲಿಯೇ ಅತಿದೊಡ್ಡ ದೇಣಿಗೆ ನೀಡಿದ್ದಾರೆ.

ಮುಖೇಶ್ ಅಂಬಾನಿ, ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT)ಗೆ 151 ಕೋಟಿ ರೂ ದೇಣಿಗೆ ನೀಡಿದ್ದಾರೆ. ಇದು ಇತಿಹಾಸದಲ್ಲಿಯೆ ಅತಿ ದೊಡ್ಡ ದೇಣಿಗೆಯಾಗಿದೆ. ದೇಶದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದರು. ಐಸಿಟಿಯನ್ನು ಈ ಹಿಂದೆ ವಿಶ್ವವಿದ್ಯಾಲಯದ ರಾಸಾಯನಿಕ ತಂತ್ರಜ್ಞಾನ ವಿಭಾಗ (UDCT) ಎಂದು ಕರೆಯಲಾಗುತ್ತಿತ್ತು. ಇದನ್ನು ಬಾಂಬೆ ವಿಶ್ವವಿದ್ಯಾಲಯವು 1933ರಲ್ಲಿ ಸ್ಥಾಪಿಸಿತು. 2008ರಲ್ಲಿ, ಇದನ್ನು ಐಸಿಟಿ ಎಂದು ಮರುನಾಮಕರಣ ಮಾಡಲಾಯಿತು. ಇದಕ್ಕೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ನೀಡಲಾಯಿತು. ಅನಿತಾ ಪಾಟೀಲ ಬರೆದ ‘ದಿ ಡಿವೈನ್ ಸೈಂಟಿಸ್ಟ್’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅಂಬಾನಿ ಐಸಿಟಿಗೆ ಈ ದೇಣಿಗೆಯನ್ನು ಘೋಷಿಸಿದರು.

ಈ ಪುಸ್ತಕವು ಪದ್ಮವಿಭೂಷಣ ಪ್ರೊಫೆಸರ್ ಮನ್ ಮೋಹನ್ ಶರ್ಮಾ ಅವರ ಜೀವನವನ್ನು ಆಧರಿಸಿದೆ. ಅನೇಕರು ಅವರನ್ನು ಭಾರತೀಯ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಮಹಾನ್ ಗುರು ಎಂದು ಪರಿಗಣಿಸುತ್ತಾರೆ. ಗುರು ದಕ್ಷಿಣೆಯ ಬಗ್ಗೆ ಮಾತನಾಡುತ್ತಾ, ಶರ್ಮಾ ಅವರ ಕೋರಿಕೆಯ ಮೇರೆಗೆ ಅಂಬಾನಿ ಐಸಿಟಿಗೆ 151 ಕೋಟಿ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು. ಅವರು ನಮಗೆ ಏನಾದರೂ ಹೇಳಿದಾಗಲೆಲ್ಲಾ ನಾವು ಕೇಳುತ್ತೆವೆ, ನೀವು ಐಸಿಟಿಗೆ ದೊಡ್ಡದನ್ನು ಮಾಡಬೇಕು, ಮತ್ತು ಅದು ಪ್ರೊಫೆಸರ್ ಶರ್ಮಾಗಾಗಿ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಅಂಬಾನಿ ಹೇಳಿದರು.

ಯುಡಿಸಿಟಿ ಕ್ಯಾಂಪಸ್‌ಗೆ ಭೇಟಿ ನೀಡುವುದು ಯಾವಾಗಲೂ ಪವಿತ್ರ ದೇವಾಲಯಕ್ಕೆ ಭೇಟಿ ನೀಡಿದಂತೆ ಭಾಸವಾಗುತ್ತದೆ. ಪ್ರೊಫೆಸರ್ ಶರ್ಮಾ, ನಿಮ್ಮನ್ನು ನಾನು ನನ್ನ ಅತ್ಯಂತ ಗೌರವಾನ್ವಿತ ಶಿಕ್ಷಕರು, ನನ್ನ ಮಾರ್ಗದರ್ಶಕರು ಮತ್ತು ಸ್ಫೂರ್ತಿಯ ಮೂಲ ಎಂದು ಪರಿಗಣಿಸುತ್ತೆನೆ. ಶರ್ಮಾ ಅವರಂತಹ ಮಹಾನ್ ವ್ಯಕ್ತಿಯ ಜೀವನವನ್ನು ಬರೆಯುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಅಂಬಾನಿ ಪಾಟೀಲ ಅವರನ್ನು ಹೊಗಳಿದರು. ಐಐಟಿ – ಬಾಂಬೆಗಿಂತ ಯುಡಿಸಿಟಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅಂಬಾನಿ ನೆನಪಿಸಿಕೊಂಡರು.

Leave a Reply

Your email address will not be published. Required fields are marked *