ನಾಗಯ್ಯಸ್ವಾಮಿ ಅಲ್ಲೂರ ನಿವಾಸಕ್ಕೆ ಭೇಟಿ: ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ

ತಾಲೂಕು

ಚಿತ್ತಾಪುರ: ಅನಾರೋಗ್ಯದಿಂದ ಮೊನ್ನೆ ನಿಧನರಾದ ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರ ಕುಟುಂಬದ ಸದಸ್ಯರನ್ನು ಅಲ್ಲೂರು ಗ್ರಾಮದ ಮನೆಯಲ್ಲಿ ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾಂತ್ವಾನ ಹೇಳಿದರು.

ನಾಗಯ್ಯಸ್ವಾಮಿ ಅವರ ಸಹೋದರ, ಅವರ ಪುತ್ರಿ ಮತ್ತು ಪುತ್ರನ ಜೊತೆ ಮಾತನಾಡಿದ ಸಚಿವರು ಸಾಂತ್ವನ ಹೇಳಿ ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು.

ಹಿರಿಯ ಪತ್ರಕರ್ತರಾಗಿದ್ದ ನಾಗಯ್ಯಸ್ವಾಮಿ ಅವರು ಪತ್ರಿಕೋದ್ಯಮ ವೃತ್ತಿಯ ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅವರ ನಿಧನದಿಂದಾಗಿ ಪತ್ರಿಕೋದ್ಯಮ ಕ್ಷೇತ್ರ ಒರ್ವ ಹಿರಿಯ ಮಾರ್ಗದರ್ಶಿ, ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರನ್ನು ಕಳೆದುಕೊಂಡಿದೆವೆ ಎಂದರು.

ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ರಮೇಶ ಮರಗೋಳ, ಶಿವರುದ್ರ ಭೀಣಿ, ಜಗನಗೌಡ ರಾಮತೀರ್ಥ, ರಾಮಲಿಂಗ ಹೊನಿಗೆರಿ, ರಾಮಣ್ಣ ನಾಟಿಕಾರ, ಮಹಾದೇವ ಬೋನಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *