ಕಲಬುರಗಿ: ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿ ಹಾಗೂ ಜೀವನ ಕೌಶಲ್ಯಗಳು ಈ ವಿಷಯದ ಮೇಲೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಝಡ್ ಎನ್ ಜಾಗೀರದಾರ ಉಪನ್ಯಾಸ ನೀಡಿದರು.
ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ ಮಲ್ಲಪ್ಪ ವಹಿಸಿದ್ದರು.
ವೇದಿಕೆ ಮೇಲೆ ಆರಾಧನಾ ಪಿಯು ಕಾಲೇಜಿನ ಪ್ರಾಂಶುಪಾಲ ಚೇತನ್ ಕುಮಾರ್ ಗಾಂಗಜೀ, ವಿಭಾಗಿಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ, ಜಿಲ್ಲಾ ನೋಡಲ್ ಹಾಗೂ ಶಿಬಿರಧಿಕಾರಿ ಪಾಂಡು ಎಲ್ ರಾಠೋಡ್, ಎನ್ ವಿ ಪಿಯು ಕಾಲೇಜಿನ ಉಪನ್ಯಾಸಕ ಎನ್ ಆರ್ ಕುಲಕರ್ಣಿ, ಕಾರ್ಯಕ್ರಮ ಅಧಿಕಾರಿಗಳಾದ ರುದ್ರಯ್ಯ ಡಾ. ನಾಗರಾಜ್ ಹಿರಾ ಚಂದ್ರಶೇಖರ್ ಡೊಣ್ಣೆಗೌಡ ,ಮರಿಯಪ್ಪ ನಾಯ್ಕೊಡಿ, ವಿರಣ್ಣ, ಮೋನಯ್ಯ ಗೋನಾಲ, ಡಾ ಅಂಬಾರಾಯ ಹಾಗರಗಿ, ಎಚ್ ಬಿ ಪಾಟೀಲ್, ಗ್ರಂಥಪಾಲಕ ರಾಜೇಶ್ ಕೆಜೆ ಮುಂತಾದವರು ಉಪಸ್ಥಿತರಿದ್ದರು.
ಕೃಷ್ಣಾ ತಂಡ ಉಪನ್ಯಾಸ ಗೋಷ್ಠಿಯನ್ನು ನಿರ್ವಹಣೆ ಮಾಡಿತು. ಸ್ವೇತಾ ನಿರೂಪಿಸಿದರು, ರಾಮಚಂದ್ರ ಸ್ವಾಗತಿಸಿದರು, ಜಿತೇಂದ್ರ ವಂದನಾರ್ಪಣೆ
ಮಾಡಿದರು.