ಸುದ್ದಿ ಸಂಗ್ರಹ ಚಿತ್ತಾಪುರ
ಶ್ರೀಕ್ಷೇತ್ರ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಹಾಮಠದ ಪೀಠಾಧಿಪತಿ ಡಾ.ಸಿದ್ಧತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಗುರುವಂದನೆ ಮತ್ತು ರಜತ ಕಿರೀಟ ಧಾರಣೆ ಸಮಾರಂಭ ಸಂಭ್ರಮ ಸಡಗರದಿಂದ ನೆರವೇರಿತು.
ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಳಲಿಂಗ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಉದ್ಘಾಟನೆ, ಹಾಗೂ ಗುರುವಂದನೆ ಮತ್ತು ರಜತ ಕಿರೀಟ ಸಮರ್ಪಣೆ ಮತ್ತು ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವಸ್ಥಾನ, ಮಠ, ಮಂದಿರ, ಆಧ್ಯಾತ್ಮಿಕ ಕೇಂದ್ರಗಳಿಗೆ ಹೋಗುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದರು.
ಮನುಷ್ಯನು ಲೌಕಿಕ ಸುಖಕ್ಕಾಗಿ ದುಡ್ಡು ಗಳಿಸುತ್ತಿದ್ದಾನೆ, ಮಾನಸಿಕ ನೆಮ್ಮದಿ ಕಳೆದುಕೊಂಡು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಧಾರ್ಮಿಕ ಕಾರ್ಯಗಳು ಮಾಡುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ದೇವಸ್ಥಾನ ನಿರ್ಮಾಣ ಮಾಡುವುದು ದೊಡ್ಡ ವಿಷಯವಲ್ಲ ಜೊತೆಗೆ ದೇವಸ್ಥಾನದ ಪವಿತ್ರತೆ ಕಾಪಾಡಬೇಕು ಅದರ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು, ನಿರಂತರವಾಗಿ ನಿತ್ಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತಿಕ ಚಟುವಟಿಕೆಗಳು ನಡೆಯಬೇಕು. ನಾಡಿಗೆ ಮತ್ತು ದೇಶಕ್ಕೆ ಒಳ್ಳೆಯದಾಗುವ ವಿಚಾರ ಬಿತ್ತರಿಸುವ ಕಾರ್ಯ ನಿರಂತರ ಸಾಗಬೇಕು ಎಂದರು.
ಗುರು ಭಕ್ತಿ ಶ್ರೇಷ್ಠವಾಗಿದ್ದು, ಉಳ್ಳುವವರು ತಮ್ಮ ಭಕ್ತಿಯನ್ನು ತೋರಿಸುವ ಮುಖಾಂತರ ಸೇವೆ ಮಾಡುತ್ತಾರೆ ಗುರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸುತ್ತಾರೆ, ಗುರುವಿನ ಆಶೀರ್ವಾದದ ಫಲದಿಂದ ಅಸಾಧ್ಯವಾದ ಕೆಲಸ ಮಾಡಲು ಬಲಿಷ್ಠವಾದ ಬಲ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿವಲಿಂಗ ಕೊಳ್ಳಿ ಅವರ ಭೀಮನಹಳ್ಳಿ ಹಾಗೂ ಬೆಂಗಳೂರು ಪರಿವಾರದಿಂದ ಮತ್ತು ಗ್ರಾಮಸ್ಥರಿಂದ ಶ್ರೀಗಳಿಗೆ ಗುರುವಂದನೆ ಹಾಗೂ ರಜತ ಕಿರೀಟ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮಕ್ಕೂ ಪೂರ್ವ ಗ್ರಾಮಕ್ಕೆ ಆಗಮಿಸಿದ ನಾಲವಾರ ಶ್ರೀಗಳು ಸಾರಾಟಿನಲ್ಲಿ ಭವ್ಯ ಮೆರವಣಿಗೆ ನೆರವೇರಿತು.
ಡೊಳ್ಳು, ಬಾಜಾ ಭಜಂತ್ರಿ ಮತ್ತು ಪೂರ್ಣ ಕುಟುಂಬದ ಕಳಸಗಳೊಂದಿಗೆ ಭಕ್ತಿ ಪೂರ್ವಕವಾಗಿ ಭಕ್ತರು ಸ್ವಾಗತಿಸಿದರು, ಮೆರವಣಿಗೆಯುದ್ದಕ್ಕೂ ಶ್ರೀ ಕೋರಿಸಿದ್ದೇಶ್ವರ ಮಹಾರಾಜ್ ಕಿ ಜೈ ಎಂದು ಜೈಕಾರ ಮೊಳಗಿಸಿದರು….. ನೂತನವಾಗಿ ನಿರ್ಮಾಣವಾಗಿರುವ ಶ್ರೀ ಅಯ್ಯಾಳ ಲಿಂಗೇಶ್ವರ ಮಂದಿರ ಉದ್ಘಾಟನೆ ಮತ್ತು ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಓಂಕಾರ ಸಾಹುಕಾರ್, ರವಿ ಶಿಕ್ಷಕರು, ಬಸವರಾಜ ಕೊಳ್ಳಿ, ಅಶೋಕ, ನರಸಪ್ಪ ದಂಡೋತಿ, ಭೀಮರಾಯ ಆಭರ್, ಸುಭಾಷಗೌಡ, ಮಲ್ಲಿಕಾರ್ಜುನ, ಭೀಮಣ್ಣ ಹಳ್ಳಿ, ನಾಗರೆಡ್ಡಿ ಗೋಪಸೇನ್ ಚಿತ್ತಾಪುರ, ರವಿ ರೇಷ್ಮೆ, ಬಸವರಾಜ ಗಾರಂಪಳ್ಳಿ, ಮಹದೇವ ಗoವಾರ, ಮಲ್ಲಿಕಾರ್ಜುನ ಎಣ್ಣೆ ನಾಲವಾರ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ನವಲಿಂಗ ಪಾಟೀಲ್ ಬೀದರ್ ನಿರೂಪಿಸಿದರು.
ನಂತರ ಪ್ರತಿಕ್ಷಾ ಗಾರಂಪಳ್ಳಿ ಅವರಿಂದ ಭರತನಾಟ್ಯ ನಡೆಯಿತು.