ಫಿಟ್ಸ್ ಬಂದು ರಸ್ತೆಯಲ್ಲಿ ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಖಂಡ್ರೆ

ಸುದ್ದಿ ಸಂಗ್ರಹ

ಬೀದರ್: ಫಿಟ್ಸ್ ಬಂದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾನವೀಯತೆ ಮೆರೆದಿದ್ದಾರೆ.

ಬೀದರ್‌ನ ಹೊರವಲಯದ ಶಾಪೂರ್ ಗೇಟ್ ಬಳಿ ಈ ಘಟನೆ ನಡೆದಿದೆ. ಸಚಿವ ಈಶ್ವರ್ ಖಂಡ್ರೆ ಹೈದರಾಬಾದ್ ಏರ್‌ಪೋರ್ಟ್‌ಗೆ ಹೋಗುತ್ತಿದ್ದರು, ಈ ವೇಳೆ ರಸ್ತೆಯಲ್ಲಿ ಫಿಟ್ಸ್ ಬಂದು ಬಾಲಕನೋರ್ವ ಸೈಕಲ್ ಮೇಲಿಂದ ಬಿದ್ದು ಒದ್ದಾಡುತ್ತಿದ್ದ. ಇದನ್ನು ಗಮನಿಸಿದ ಸಚಿವರು ಕಾರು ನಿಲ್ಲಿಸಿ, ಬಾಲಕನನ್ನು ಕೂಡಲೇ ಆಟೋದಲ್ಲಿ ಬ್ರೀಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಅಪ್ಪೆಯನ್ನು ಬಾಲಕನ ಜೊತೆಗೆ ಕಳುಹಿಸಿ, ಬ್ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸಚಿವ ಖಂಡ್ರೆ ಮಾನವೀಯತೆಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆ ಬಳಿಕ ಸಚಿವ ಖಂಡ್ರೆ ಹೈದರಾಬಾದ್ ಏರ್‌ಪೋರ್ಟ್‌ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡಿದರು.

Leave a Reply

Your email address will not be published. Required fields are marked *