ಸುದ್ದಿ ಸಂಗ್ರಹ ಶಹಾಬಾದ
ತಾಲೂಕಿನ ಮುತ್ತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ, ಕೋಲಿ ಸಮಾಜದ ಸ್ವಾಭಿಮಾನ ಕೆರಳಿಸಿದಂತಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ನಿಂಗಪ್ಪ ಹುಳಗೋಳಕರ ಉಗ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮುತ್ತಗಾ ಗ್ರಾಮದ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಘಟನೆ ವಿರೋಧಿಸಿ ಕೋಲಿ ಸಮಾಜದ ವತಿಯಿಂದ ಶುಕ್ರವಾರ ಭಂಕೂರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು ಸಾಮಾಜಿಕ ಹರಿಕಾರರು, ಅವರು ಸಮಾಜದ ಓರೆಕೋರೆಗಳನ್ನು ತಿದ್ದುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದವರು. ಅಂತಹ ಮಹಾನ್ ಶರಣರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ. ಇದೊಂದು ಘೋರ ಕೃತ್ಯ ಎಂದರು.
ಕೂಲಿ ಸಮಾಜದ ಜಿಲ್ಲಾ ಮುಖಂಡ ಶರಣಪ್ಪ ತಳವಾರ್ ಹಾಗೂ ಅವಣ್ಣ ಮ್ಯಾಕೇರಿ ಮಾತನಾಡಿ, ಅಂಬಿಗರ ಚೌಡಯ್ಯನವರ ತತ್ವ ಸಿದ್ದಾಂತದ ವಿರೋಧಿಗಳು ಈ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಮನಸ್ಥಿಯುಳ್ಳವರನ್ನು ಪೊಲೀಸರು ಈ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ತಳವಾರ ಮನವಿ ಪತ್ರ ಓದಿ ಗ್ರೇಡ್ 2 ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುತ್ತಗಾ ಗ್ರಾಮದ ಕೋಲಿ ಸಮಾಜ ಅಧ್ಯಕ್ಷ ಶಿವಕುಮಾರ ನಾಟೀಕಾರ, ಪ್ರಮುಖರಾದ ಶಿವಕುಮಾರ ಯಗಾಪುರ, ಬಸವರಾಜ ಸಪ್ಪನಗೌಡ, ಬಸವರಾಜ ಬೂದಿಹಾಳ್, ನಿಂಗಣ್ಣ ನಂದಳ್ಳಿ, ಮಲ್ಲಿಕಾರ್ಜುನ ಅಲ್ಲೂರ್, ಲಕ್ಷ್ಮಿಕಾಂತ ಕಂದಗೋಳ, ಶಿವಕುಮಾರ ಸುಣುಗಾರ, ದೇವಿಂದ್ರ ಕಾರೋಳಿ, ಈರಣ್ಣ ಗುಡೂರ, ನಿಂಗಣ್ಣ ನಂದಿಹಳ್ಳಿ, ಶರಣಪ್ಪ ಸಣಮೋ, ಪರಮಾನಂದ ಯಲಗೋಡ, ಮಲ್ಲಿಕಾರ್ಜನ ಸಿರಗೊಂಡ, ಮರಲಿಂಗ, ಮಲ್ಲಿಕಾರ್ಜುನ್ ಇಟಗಿ, ಶರಣು ಸಣಮು, ಡಾ.ಮಹೇಂದ್ರ ಕೋರಿ, ಭೀಮಯ್ಯ ಗುತ್ತೆದಾರ, ವಿಜಯಕುಮಾರ ನಾಟೀಕಾರ, ಮಂಜುನಾಥ ವಾಲಿಕಾರ, ಮರಲಿಂಗ, ಶರಣು ಹಲಕರ್ಟಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.