ಮಗು ಸತ್ತಿದೆ ಗರ್ಭಪಾತ ಮಾಡಿಸಿ ಎಂದ ಸರ್ಕಾರಿ ಆಸ್ಪತ್ರೆ ವೈದ್ಯರು: ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ

ರಾಷ್ಟೀಯ

ಸತ್ನ: ಗರ್ಭದಲ್ಲೆ ಶಿಶು ಸತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೇಳಿದ ಬಳಿಕ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಆರೋಗ್ಯವಂತ ಮಗುವಿಗೆ ಜನ್ಮ  ನೀಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.  

ದುರ್ಗಾ ದ್ವಿವೇದಿ ಎಂಬುವವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಮಹಿಳೆಯ ಗರ್ಭದಲ್ಲಿ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ಕೂಡಲೇ ಮಹಿಳೆಯ ಪತಿ ಪತ್ನಿಯನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು.

ದುರ್ಗಾ ಅವರನ್ನು ಸೋಮವಾರ ರಾತ್ರಿ ಹೆರಿಗೆ ನೋವೆಂದು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಿಗ್ಗೆ 4 ಗಂಟೆ ಸುಮಾರಿಗೆ ತೊಂದರೆಯಾದ್ದರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಂಡು ಹೋಗಲಾಯಿತು. ದುರ್ಗಾ ಅವರ ಕುಟುಂಬದವರ ಪ್ರಕಾರ ಬೆಳಗ್ಗೆ 7.30ಕ್ಕೆ ಜಿಲ್ಲಾ ಆಸ್ಪತ್ರೆಗೆ ತಲುಪಿ ರಕ್ತ ಪರೀಕ್ಷೆ ಮಾಡಲಾಯಿತು.

ಬೆಳಗ್ಗೆ 9 ಗಂಟೆಗೆ ವೈದ್ಯರು ಪರೀಕ್ಷೆ ಮಾಡಿದರು, ಆದರೆ ಮಗುವಿನ ಹೃದಯ ಬಡಿತ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ಭ್ರೂಣದ ಚಲನೆ ಕಂಡುಬಂದಿಲ್ಲ ಎಂದು ವರದಿಯಾಗಿದೆ. ಹೀಗಾಗಿ ವೈದ್ಯರು ಗರ್ಭಪಾತಕ್ಕೆ ಸಲಹೆ ನೀಡಿದರು.

ದುರ್ಗಾಳ ಪತಿ ರಾಹುಲ್ ದ್ವಿವೇದಿಗೆ ಅನುಮಾನ ಬಂದಿತು, ಡಾಕ್ಟರ್ ಮಾತಿಗೆ ಒಪ್ಪದ ರಾಹುಲ್ ದುರ್ಗಾಳನ್ನು ಭಾರ್ಹತ್ ನಗರದ ಖಾಸಗಿ ರೋಗನಿರ್ಣಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಭ್ರೂಣವು ಜೀವಂತವಾಗಿದೆ, ಆರೋಗ್ಯಕರವಾಗಿದೆ ಎಂದು ದೃಢಪಡಿಸಿದ್ದರು.

ಕುಟುಂಬವು ತಕ್ಷಣ ದುರ್ಗಾಳನ್ನು ಖಾಸಗಿ ನರ್ಸಿಂಗ್ ಹೋಮ್’ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಸಿಸೇರಿಯನ್ ಮಾಡಲಾಯಿತು, 3.8 ಕಿಲೋಗ್ರಾಂ ತೂಕದ ಗಂಡು  ಮಗುವಿಗೆ ಜನ್ಮ ನೀಡಿದಳು. ತಾಯಿ, ಮಗು ಇಬ್ಬರು ಆರೋಗ್ಯವಾಗದ್ದಾರೆ.‌

ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬವು ಒತ್ತಾಯಿಸಿದೆ. ನಾವು ಅವರ ಸಲಹೆ ಪಾಲಿಸಿದ್ದರೆ ನಮ್ಮ ಜೀವಂತ ಮಗು ಸಾಯುತ್ತಿತ್ತು ಎಂದು ಕುಟುಂಬದ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ತನಿಖೆ ಆರಂಭಿಸಲಾಗಿದೆ ಎಂದು ಸತ್ನಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಎಲ್.ಕೆ ತಿವಾರಿ ದೃಢಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಹೇಳಿದರು.

Leave a Reply

Your email address will not be published. Required fields are marked *