ಶಹಾಬಾದ್: ಪೊಲೀಸ್ ಮತ್ತು ಪತ್ರಕರ್ತರಿಂದ ಉಪನ್ಯಾಸ ನಾಳೆ

ಪಟ್ಟಣ

ಶಹಾಬಾದ್‌: ಸೇಂಟ್ ಥಾಮಸ್‌ ಶಾಲೆಯಲ್ಲಿ ರವಿವಾರ ಬೆಳಗ್ಗೆ 10.30ಕ್ಕೆ ಪೊಲೀಸ್ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಮಾಜ ಸುಧಾರಣೆಯಲ್ಲಿ ಪೊಲೀಸ್ ಮತ್ತು ಪತ್ರಕರ್ತರ ಪಾತ್ರ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರಾದ ಲೋಹಿತ ಕಟ್ಟಿ, ನಿಂಗಣ್ಣ ಜಂಬಗಿ ತಿಳಿಸಿದ್ದಾರೆ.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಉದ್ಘಾಟಿಸಲಿದ್ದಾರೆ, ಫಾದರ್ ಜೇರಾಲ್ಡ್ ಸಾಗರ ಸಾನ್ನಿಧ್ಯ ವಹಿಸಲಿದ್ದಾರೆ. ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯ ದೇವೆಂದ್ರಪ್ಪ ಕಪನೂರ, ಪಿಐ ನಟರಾಜ ಲಾಡೆ ಉಪಸ್ಥಿತರಿರುವರು. ಕಾರ್ಯಕಾರಿ ಸದಸ್ಯ ವಾಸುದೇವ ಚವ್ಹಾಣ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *