ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 117ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಿಸಿದರು.
ವೀಕ್ಷಣೆಯ ನಂತರ ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜನವರಿ 26ರಂದು
ನಮ್ಮ ಸಂವಿಧಾನವು 75 ವರ್ಷಗಳು ಪೂರೈಸುತ್ತಿರು ಹೆಮ್ಮೆಯ ವಿಷಯದ ಬಗ್ಗೆ ಹಾಗೂ ನಾವು ಕೈಗೊಳ್ಳಬೇಕಾದ ಕಾರ್ಯಗಳನ್ನು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದರು.
ಸಂವಿಧಾನವು ನಮಗೆ ಮಾರ್ಗದರ್ಶಕ ಬೆಳಕು ಮತ್ತು ಮಾರ್ಗದರ್ಶನ ಮಾಡುತ್ತಿದೆ. ಇದರ ಗೌರವಾರ್ಥವಾಗಿ ಸಂವಿಧಾನದ ಪೀಠಿಕೆ ಓದಲು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದರು.
ದೇಶದ ನಾಗರಿಕರನ್ನು ಸಂವಿಧಾನದ ಪರಂಪರೆಯೊಂದಿಗೆ ಸಂಪರ್ಕಿಸಲು ವಿಶೇಷ ವೆಬ್ಸೈಟ್ http://Constitution75.com ಅನ್ನು ರಚಿಸಿ ಇದರಲ್ಲಿ, ನಾವು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ನಮ್ಮ ವೀಡಿಯೊವನ್ನು ಅಪ್ಲೋಡ್ ಮಾಡಬಹುದು ಎಂದರು.
ಜನವರಿ 13ರಿಂದ ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭದ ಮಹತ್ವದ ಬಗ್ಗೆ, ಈ ಬೃಹತ್ ಧಾರ್ಮಿಕ ಕಾರ್ಯಕ್ರಮದ ಏಕತೆಯ ಸಂದೇಶವನ್ನು ಮತ್ತು ಪ್ರಪಂಚದಾದ್ಯಂತ ಭಕ್ತರು ಪ್ರಯಾಗರಾಜ್ನಲ್ಲಿ ಡಿಜಿಟಲ್ ಮಹಾಕುಂಭಕ್ಕೆ ಸಾಕ್ಷಿಯಾಗಲಿರುವುದನ್ನು ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಜನರ ಪ್ರಯತ್ನಗಳನ್ನು ವಿವರಿಸಿದ್ದನ್ನು ನಾವು ಇಂದಿನ ಸಂಚಿಕೆಯಲ್ಲಿ ಕಂಡಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠಲ ವಾಲ್ಮೀಕ ನಾಯಕ, ರಾಜೇಶ ಅಗ್ರವಾಲ, ಕಿಶನ ಜಾಧವ, ಪ್ರಮೋದ ಚೊಪಡೆ, ಶಂಕರ ಚಿನ್ನ ರಾಠೊಡ, ಕುಮಾರ ಜಾಧವ, ಗುರುನಾಥ ಚವ್ಹಾಣ ಸೇರಿದಂತೆ ಅನೇಕರು ಇದ್ದರು.