ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ನಾಳೆ ಕಾರ್ತಿಕ ಮಾಸದ ದೀಪೋತ್ಸವ

ಜಿಲ್ಲೆ

ಚಿತ್ತಾಪುರ: ರಾಷ್ಟ್ರಕೂಟರ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಅರ್ಚಕರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ನ.29 ರಂದು ಸಂಜೆ 6.30ಕ್ಕೆ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಗಾವಿ ದೇವಸ್ಥಾನ ಪೂಜಾರಿ ಶಶಿಕುಮಾರ ಎಸ್ ಪೂಜಾರಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ದೇವಸ್ಥಾನದ ಸರ್ವ ಪೂಜಾರಿಗಳು ಸೇರಿಕೊಂಡು ಖರ್ಚು ವೆಚ್ಚಗಳು ಪೂಜಾರಿ ಕಮಿಟಿ ತಂಡದವರೆ ಭರಿಸಿಕೊಳುತ್ತೆವೆ. ನಾಳೆ ಶುಕ್ರವಾರ ಸಂಜೆ 6.30ಕ್ಕೆ ದೀಪೋತ್ಸವ ಜರುಗಲಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನ ಪೂಜಾರಿಗಳಾದ ಶರಣು ಪೂಜಾರಿ, ಶಿವುಕುಮಾರ ಪೂಜಾರಿ, ಸಂದೀಪ ಪೂಜಾರಿ, ಬಸವರಾಜ ಪೂಜಾರಿ, ಭೀಮಣ್ಣ ಪೂಜಾರಿ ಇದ್ದರು.

Leave a Reply

Your email address will not be published. Required fields are marked *