ಹೆಂಡತಿ ಜಗಳವಾಡಿ ತವರಿಗೆ ಹೋಗಿದ್ದಕ್ಕೆ ಮೊಬೈಲ್ ಟವರ್ ಏರಿ ಕುಳಿತ ಪತಿ

ಸುದ್ದಿ ಸಂಗ್ರಹ ಗದಗಗಂಡ-ಹೆಂಡತಿ ಜಗಳ ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಗದಗ ಜಿಲ್ಲೆಯಲ್ಲಿ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಜೀರ್ ಸಾಬ್ ಟವರ್ ಏರಿದ ವ್ಯಕ್ತಿ. ನಜೀರ್ ಸಾಬ್ ಮತ್ತು ಅವರ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಬಾರಿಯೂ ಜಗಳವಾದ ಬಳಿಕ ಪತ್ನಿ ತವರು ಮನೆಗೆ ಹೋಗಿದ್ದಳು. […]

Continue Reading

ಗೃಹಜ್ಯೋತಿಗೆ ಮತ್ತೆ ಅರ್ಜಿ ಸಲ್ಲಿಕೆ‌: ಸಿಎಂ ಡಿಕೆಶಿ ಘೋಷಣೆ

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಪರಿಷ್ಕರಣೆಗೆ ಕೈ ಹಾಕಿದೆ. ಯೋಜನೆಯ ದುರ್ಬಳಕೆ ತಡೆಗಟ್ಟಲು ಮತ್ತು ಕೇವಲ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಹೊಸ ಅರ್ಜಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ‘ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟ’ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಈ […]

Continue Reading

ಶಹಾಬಾದ್: ಭಂಕೂರಲ್ಲಿ ಅದ್ದೂರಿ ಕಾರಹುಣ್ಣಿಮೆ

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ಭಂಕೂರ ಗ್ರಾಮದ ಐತಿಹಾಸಿಕ ಕಾರಹುಣ್ಣಿಮೆ ಸೋಮವಾರ ಅದ್ದೂರಿಯಾಗಿ ನೆರವೇರಿತು. ರವಿವಾರದಿಂದಲೆ ಹಬ್ಬದ ಸಿದ್ಧತೆಗಳು ಶುರುವಾಗಿದ್ದು, ಗ್ರಾಮದ ಕೆರೆಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಬಂಡಿ ಗಂಗಸ್ಥಳಕ್ಕೆ ಹೋಗಿತ್ತು. ದೇವಿಯ ಮೂರ್ತಿಯನ್ನು ಹೊತ್ತ ಬಂಡಿ ಹೂಡಲು ರೈತರು ತಮ್ಮ ಎತ್ತುಗಳನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ನಿಂತಿರುತ್ತಾರೆ. ಗಾಡಿ ಹೋಗುತ್ತಿದ್ದಂತೆಯೇ ಒಂದು ಜೊತೆ ಎತ್ತುಗಳನ್ನು ನೊಗದಿಂದ ಬಿಚ್ಚಿ ಮತ್ತೊಂದು ಜೊತೆ ಎತ್ತುಗಳನ್ನು ಕಟ್ಟಿದರು. ನಂತರ ಹಣಮಂತ ದೇವರ ಗುಡಿ, ಅಂಕಲಮ್ಮಾ ಗುಡಿಗೆ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಅಲ್ಲಿ ಭಕ್ತರು […]

Continue Reading

ಬಹಮನಿ ಇತಿಹಾಸ ಸಾರುವ ತಾಜ್ ಸುಲ್ತಾನಪುರದ ಗುಂಬಜ್‌ಗಳು

ಸುದ್ದಿ ಸಂಗ್ರಹ ಕಲಬುರಗಿ ಬಹಮನಿ ಸಾಮ್ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿಯ ಇತಿಹಾಸ ಸಾರುವ ತಾಜ್ ಸುಲ್ತಾನಪುರದ ಗುಂಬಜ್‌ಗಳ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ-ಸಾಹಿತಿ ಮತ್ತು ಕಲಬುರಗಿ ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ತಾಜ್ ಸುಲ್ತಾನಪುರ ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ -53ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಲಬುರಗಿ ನೆಲವು ಪ್ರಾಚೀನ ಕಾಲದಲ್ಲಿ ಕಲ್ಲಿನ ನೆಲ ಕಲಂಬುರಗಿ, ಬಹಮನಿಯರ ಕಾಲದಲ್ಲಿ […]

Continue Reading

ಜೂ.30ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಈ ದಾಖಲೆಗಳು ಕಡ್ಡಾಯ

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿ ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು […]

Continue Reading

ಮಗ ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನ ಬರ್ಬರ ಹತ್ಯೆ: ಆರೋಪಿ ಅಂದರ್‌

ಸುದ್ದಿ ಸಂಗ್ರಹ ಬೆಳಗಾವಿಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ದುರ್ದೈವಿ. ಈತನ ಗೆಳೆಯ ವಿಶ್ವನಾಥ ಪೂಜೇರಿ ಕೊಲೆಗೈದ ಆರೋಪಿ. ಇಬ್ಬರು ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಹರಟೆಯಲ್ಲಿ ತೊಡಗಿದ್ದರು. ಆಗ ಗಂಡು ಮಗು ಹುಟ್ಟಿದಕ್ಕೆ ವಿಶ್ವನಾಥ್ ಬಳಿ ಹಣಮಂತಪ್ಪ ಪಾರ್ಟಿ ಕೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು […]

Continue Reading

ಅಪಘಾತದಲ್ಲಿ ಅಂಗವೈಕಲ್ಯ ಮಾತ್ರವಲ್ಲ, ಆದಾಯ ನಷ್ಟವನ್ನೂ ಪರಿಗಣಿಸಬೇಕು: ಸುಪ್ರೀಂ ಕೋರ್ಟ್

ಸುದ್ದಿ ಸಂಗ್ರಹ ನವದೆಹಲಿರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರ ಅಂಗವೈಕಲ್ಯದ ಪ್ರಮಾಣವನ್ನು ಮಾತ್ರ ಪರಿಗಣಿಸದೆ ಆ ವ್ಯಕ್ತಿಯ ವೃತ್ತಿ ಮತ್ತು ಅದರಿಂದ ಬರುತ್ತಿದ್ದ ಆದಾಯಕ್ಕೆ ಆದ ನಷ್ಟವನ್ನೂ ಗಣನೆಗೆ ತೆಗೆದುಕೊಂಡು ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತಗಳಲ್ಲಿ ಶ್ವಾಶತವಾಗಿ ಅಂಗವಿಕಲರಾದವರಿಗೆ ಈ ತೀರ್ಪಿನಿಂದ ಬಹಳ ಅನುಕೂಲವಾಗಲಿದೆ. ಬಡಗಿ ಕೆಲಸ ಮಾಡುತ್ತಿದ್ದ ಶಂಕರ್‌ ದತ್‌ ಎಂಬುವರಿಗೆ 2004ರಲ್ಲಿ ಅಪಘಾತವಾಗಿತ್ತು. ಅತಿವೇಗವಾಗಿ ಬಂದ ಜೀಪ್‌ವೊಂದು ದತ್‌ ಅವರ ಬೈಕ್‌ಗೆ ಗುದ್ದಿತ್ತು. ಅಪಘಾತದಿಂದ ಬಲಗಾಲಿನ […]

Continue Reading

ಅಫ್ಘಾನ್‌ನಲ್ಲಿ 6.2 ತೀವ್ರತೆಯ ಭೂಕಂಪ: ದೆಹಲಿ, ಜಮ್ಮು-ಕಾಶ್ಮೀರ, ಪಾಕ್‌ನಲ್ಲೂ ಕಂಪಿಸಿದ ಭೂಮಿ

ಸುದ್ದಿ ಸಂಗ್ರಹ ನವದೆಹಲಿಅಫ್ಘಾನಿಸ್ತಾನದ ಹಿಂದೂಕುಷ್‌ ಪ್ರದೇಶದಲ್ಲಿ ಇಂದು 6.2 ತೀವ್ರತೆಯ ಭೂಕಂಪ ಸಂಭವಿಸುದ್ದು, ದೆಹಲಿ, ಎನ್‌ಸಿಆರ್‌ ಹಾಗೂ ಜಮ್ಮು- ಕಾಶ್ಮೀರ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ಜನರ ಆತಂಕಕ್ಕೂ ಕಾರಣವಾಗಿದೆ. ಶನಿವಾರ ಸಂಜೆ 6:04 ರ ಸುಮಾರಿಗೆ ಹಿಂದೂಕುಷ್‌ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, ಈಶಾನ್ಯ ಅಫ್ಘಾನಿಸ್ತಾನದ ಕಲಾಫ್ಗನ್‌ನಿಂದ ಸುಮಾರು 81 ಕಿಮೀ ದೂರದಲ್ಲಿ, 215 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಅಫ್ಘಾನ್‌ನಲ್ಲಿ ಭೂಕಂಪದಿಂದಾಗಿ ಪಾಕಿಸ್ತಾನ, ಉತ್ತರ ಭಾರತ, ಚೀನಾ, […]

Continue Reading

ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತಸಾಗರ: ಒಂದೆ ದಿನ 81 ಸಾವಿರಕ್ಕೂ ಹೆಚ್ಚು ಜನರಿಂದ ದರ್ಶನ

ಸುದ್ದಿ ಸಂಗ್ರಹ ಹೈದರಾಬಾದ್ಕಳೆದ ನಾಲ್ಕೈದು ದಿನಗಳಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನ ಫುಲ್ ರಶ್ ಆಗಿದೆ. ತಿಮ್ಮಪ್ಪನ ದರ್ಶನ ಪಡೆಯಲು ಉಚಿತ ದರ್ಶನಕ್ಕಾಗಿ ಕಿಲೋಮೀಟರ್ ಗಟ್ಟಲೆ ಭಕ್ತರು ಕ್ಯೂ ನಿಂತಿದ್ದಾರೆ. ನಿನ್ನೆ ಒಂದೆ ದಿನ ಸುಮಾರು 81 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ನಂತರ ಸರ್ವ ದರ್ಶನಕ್ಕೆ ಹೋಗುವ ಭಕ್ತರಿಗೆ 18-24 ಗಂಟೆಗಳು ಬೇಕಾಗುತ್ತಿದೆ. ಸರ್ವ ದರ್ಶನಕ್ಕೆ ಟೋಕನ್ ಪಡೆದ ಭಕ್ತರಿಗೆ 4 ರಿಂದ 6 ಗಂಟೆಗಳು ಬೇಕಾಗುತ್ತದೆ. ನಿನ್ನೆ ಒಂದೆ ದಿನ […]

Continue Reading

ಪ್ರವಾದಿ ಮೊಹ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಆಕ್ರೋಶ, ಎಫ್‌ಐಆರ್ ದಾಖಲಿಸುವಂತೆ ಒತ್ತಾಯ

ಸುದ್ದಿ ಸಂಗ್ರಹ ಶಹಾಬಾದ್ಪ್ರವಾದಿ ಮೊಹಮ್ಮದ್ ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಜೀಯಾ ಇಲಾಹಿಖಾನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಗುರುವಾರ ನಗರ ಪೊಲೀಸ ಠಾಣೆಗೆ ಮುಸ್ಲಿಂ ಮುಖಂಡರು ದೂರು ನೀಡಿದರು. ಯುವ ಮುಖಂಡ ಮಹ್ಮದ ಮಸ್ತಾನ ಮಾತನಾಡಿ, ಸಾಮಾಜಿಕ ಜಾಲತಾಣದ ಪಾಡ್‌ಕಾಸ್ಟ್ ಒಂದರಲ್ಲಿ ನಜೀಯಾ ಇಲಾಹೀ ಖಾನ್ ಎಂಬುವವರು ಇಸ್ಲಾಂ ಧರ್ಮದ ಪವಿತ್ರ ಪ್ರವಾದಿ ಹಜರತ್ ಮೊಹಮ್ಮದ ಮತ್ತು ಅವರ ಕುಟುಂಬದ ಕುರಿತು ಅತ್ಯಂತ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ, ಈ […]

Continue Reading