ಸುದ್ದಿ ಸಂಗ್ರಹ ಶಹಾಬಾದ್
ನಗರದ ಹಳೆ ಶಹಾಬಾದ್ ಬಡಾವಣೆಯ ಶ್ರೀ ರಮಣಾದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಂಜೆ ಭಕ್ತರ ಜಯಘೋಷಗಳ ಮಧ್ಯೆ ಭವ್ಯ ರಥೋತ್ಸವ ಜರುಗಿತು.
ವಿವಿಧ ರಾಜ್ಯದಿಂದ ಆಗಮಿದ ಭಕ್ತರು ರಥಕ್ಕೆ ಉತ್ತತ್ತಿ, ಹೂವು ಎರಚಿ ಕೃತಾರ್ಥರಾದರು.
ರಥೋತ್ಸವದಲ್ಲಿ ಶ್ರೀ ರಾಚೋಟೇಶ್ವರ ಸಂಸ್ಥಾನದ ಪೂಜ್ಯ ಶಂಕರಯ್ಯ ಸ್ವಾಮಿ ಹಿರೇಮಠ, ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.