ವಾಡಿ ಪಟ್ಟಣದಲ್ಲಿ ಮತ್ತೆ ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ವೀರಣ್ಣ ಯಾರಿ ಒತ್ತಾಯ

ಜಿಲ್ಲೆ

ವಾಡಿ: ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಕುಡಿಯಲು, ಬಳಸಲು ನೀರಿಲ್ಲ, ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅದೆ ಹಳೆ ಉತ್ತರ ಪೈಪ್ ಲೈನ್ ಸಮಸ್ಯೆ ಎನ್ನುತ್ತಾರೆ ಪದೆ ಪದೆ ಜನಸಾಮಾನ್ಯರು ನೀರಿಗಾಗಿ ಗೋಳಾಡುವಂತೆ ಮಾಡುತ್ತಿರುವ ಪುರಸಭೆಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸೇಡಂ ಸಹಾಯಕ ಆಯುಕ್ತರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಸುಮಾರು 55 ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣಕ್ಕೆ ಈ ರೀತಿ ನೀರಿನ ಸಮಸ್ಯೆ ಬರಬಾರದು ಎಂದು ಇಂಗಳಗಿಯಿಂದ ಎಸಿಸಿ ಕಂಪನಿಯ‌ ಪೈಪ್ ಲೈನಿಗೆ ಸಂಪರ್ಕ ಕಲ್ಪಿಸಲು 50 ಲಕ್ಷ ರೂ ವೆಚ್ಚದಲ್ಲಿ ಹೊಸ ಪೈಪ್’ಲೈನ್ ವ್ಯವಸ್ಥೆ 3 ವರ್ಷಗಳ ಹಿಂದೆಯೇ ಮಾಡಿದ್ದಾರೆ, ಆದರೆ ಅದಕ್ಕೆ ಸಂಪರ್ಕ ಕಲ್ಪಿಸದೆ ನೀರಿನ ಸಮಸ್ಯೆ ಮುಂದುವರೆಸಿದ್ದಾರೆ. ಮೋಟಾರ್ ಪಂಪ್ ರಿಪೇರಿ ಮತ್ತು ಹೊಸ ಖರೀದಿ ಹೆಸರಲ್ಲಿ ಲಕ್ಷಾಂತರ ರೂ ಖರ್ಚು ಹಾಕುತ್ತಾರೆ, ಆದರೆ ಪ್ರತಿ ದಿನ ನೀರು ಸರಬರಾಜು ಮಾಡಲು ಮಾತ್ರ ಇವರಿಂದಾಗುತ್ತಿಲ್ಲ.

ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಭಂದಪಟ್ಟ ಮೇಲಾಧಿಕಾರಿಗಳು ದೂರು ನೀಡಿದರು ಪ್ರಯೋಜನವಾಗಲಿಲ್ಲ. ಇಂತಹ ಬೇಸಿಗೆ ಕಾಲದಲ್ಲಿ ನಮ್ಮ ಪಕ್ಕದಲ್ಲಿ ಎರಡೆರಡು ನದಿಗಳಿದ್ದರೂ ಕೂಡ ನೀರಿಗಾಗಿ ಜನ ಪರಿತಪಿಸುವಂತೆ ಇಲ್ಲಿನ ಪುರಸಭೆಯವರು ಮಾಡುತ್ತಿದ್ದಾರೆ.

ಎಸಿಸಿ ಮತ್ತು ರೈಲ್ವೆ ಕಾಲೋನಿಯಲ್ಲಿ ಈ ರೀತಿಯ ನೀರಿನ ಸಮಸ್ಯೆ ಇಲ್ಲಾ, ಆದರೆ ಈ ಪುರಸಭೆ ವ್ಯಾಪ್ತಿಯಲ್ಲಿ ಮಾತ್ರ ನೀರಿನ ಸಮಸ್ಯೆ ನಿರಂತರವಾಗಿದೆ, ಇದನ್ನು ತಾವು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *